
ಜಾತಕದಲ್ಲಿ ಧನಬಲವಿಲ್ಲದವರಿಗೆ ಪರಿಹಾರ ಕೊಡುವ ವರಮಹಾಲಕ್ಷ್ಮೀ..!
ವಿವಾಹಿತ ಮಹಿಳೆಯರು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಆಚರಿಸುವ ವರಮಹಾಲಕ್ಷ್ಮೀ ವ್ರತದ ಜ್ಯೋತಿಷ್ಯ ಮಹತ್ವ ತಿಳಿಸಿಕೊಟ್ಟಿದ್ದಾರೆ ಡಾ. ಹರೀಶ್ ಕಶ್ಯಪ್.
ಆಗಸ್ಟ್ 5ರಂದು ವರ ಮಹಾಲಕ್ಷ್ಮೀ ಹಬ್ಬ. ವಿವಾಹಿತ ಮಹಿಳೆಯರು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಆಚರಿಸುವ ಈ ಹಬ್ಬದ ಮಹತ್ವವೇನು, ಹೇಗೆ ಆಚರಿಸಬೇಕು, ಏನು ಮಾಡಿದರೆ ಪೂರ್ಣ ಫಲ ಸಾಧ್ಯ, ಮಹಾಲಕ್ಷ್ಮೀ ಅನುಗ್ರಹ ಪಡೆಯಲು ಜ್ಯೋತಿಷ್ಯ ನಿರ್ದೇಶನಗಳೇನು ಎಂಬುದನ್ನು ಜ್ಯೋತಿಷ್ಯ ತಜ್ಞರಾದ ಡಾ. ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ..
Add Asianetnews Kannada as a Preferred Source

ವರಮಹಾಲಕ್ಷ್ಮೀ ಯಾವಾಗ? ಗೊಂದಲ ಬೇಡ..
ಜಾತಕದಲ್ಲಿ ಧನಬಲವಿಲ್ಲದವರು, ಶುಭಗ್ರಹಗಳು ಪಾಪಸ್ಥಾನದಲ್ಲಿರುವವರಿಗೆ ಸಂಪತ್ತನ್ನು ಅನುಭವಿಸುವ ಯೋಗ ಇರುವುದಿಲ್ಲ. ಇದೇ ಕಾರಣಕ್ಕೆ ಕೆಲವರಿಗೆ ಹಣವಿದ್ದರೂ ಅನುಭವಿಸುವ ಯೋಗವಿರುವುದಿಲ್ಲ. ಇಂಥ ಎಲ್ಲರಿಗೂ ಪಾಪ ಪರಿಹಾರ, ದೋಷ ಪರಿಹಾರಾರ್ಥವಾಗಿ ಕೆಲಸ ಮಾಡುತ್ತದೆ ಶ್ರದ್ಧೆ ಭಕ್ತಿಯಿಂದ ಆಚರಿಸುವ ವರಮಹಾಲಕ್ಷ್ಮೀ ವ್ರತ ಎನ್ನುತ್ತಾರೆ ಅವರು. ಈ ಬಗ್ಗೆ ಸರಿಯಾಗಿ ತಿಳಿಯಿರಿ..