ಕರಾವಳಿಯಲ್ಲಿ ನಾಗ ಶಕ್ತಿಯ ಪವಾಡ; ಬತ್ತಿದ ಕೊಳವೆ ಬಾವಿಯಲ್ಲಿ ಚಿಮ್ಮಿದ ನೀರು!

 ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಯನ್ನು ಸಾಕಷ್ಟು ಭಯ ಭಕ್ತಿಯಿಂದ ಮಾಡಲಾಗುತ್ತೆ‌. ಆಗೊಮ್ಮೆ ಈಗೊಮ್ಮೆ ನಾಗಶಕ್ತಿಯ ಕಾರಣಿಕವೂ ಸಾಬೀತಾಗುತ್ತಿರುತ್ತದೆ‌.‌ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ‌ ಪೆರ್ನೆಯಲ್ಲಿಯೂ ನಾಗದೇವರು ಕಾರಣಿಕ ತೋರಿಸಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಮಂಗಳೂರು(ಎ.04) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಯನ್ನು ಸಾಕಷ್ಟು ಭಯ ಭಕ್ತಿಯಿಂದ ಮಾಡಲಾಗುತ್ತೆ‌. ಆಗೊಮ್ಮೆ ಈಗೊಮ್ಮೆ ನಾಗಶಕ್ತಿಯ ಕಾರಣಿಕವೂ ಸಾಬೀತಾಗುತ್ತಿರುತ್ತದೆ‌.‌ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ‌ ಪೆರ್ನೆಯಲ್ಲಿಯೂ ನಾಗದೇವರು ಕಾರಣಿಕ ತೋರಿಸಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ನಾಗನ ಕಟ್ಟೆ ಬಳಿಯೆ ಇದ್ದ ಕೊಳವೆ ಬಾವಿಯೊಂದರಲ್ಲಿ ನೀರು ಬತ್ತಿ ಹೋಗಿತ್ತು. ಹೀಗಾಗಿ ನಾಗದೇವರಲ್ಲಿ ಪ್ರಾರ್ಥನೆ ಮಾಡಿ, ಅಲ್ಲಿಯೇ ಪಕ್ಕದಲ್ಲಿ ಇನ್ನೊಂದು ಕೊಳವೆ ಬಾವಿ ಕೊರೆಯಲಾಯಿತು. ಆದ್ರೆ ಆಶ್ಚರ್ಯ ಎಂಬಂತೆ 200 ಅಡಿ ಆಳದಲ್ಲಿಯೇ ಸುಮಾರು‌ ಐದೂವರೆ ಇಂಚು ನೀರು ಲಭ್ಯವಾಗಿದೆ. ಇದಲ್ಲದೇ ಮೊದಲು ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿಯೂ ಇದೇ ಸಂದರ್ಭದಲ್ಲಿ ನೀರು ಉಕ್ಕಿ ಹರಿದಿದೆ‌. ಸದ್ಯ ನೀರು ಉಕ್ಕಿ ಹರಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಾಗದೇವರ ಕಾರಣಿಕವನ್ನು ಸ್ಥಳೀಯರು ಕೊಂಡಾಡುತ್ತಿದ್ದಾರೆ.

Related Video