Asianet Suvarna News Asianet Suvarna News

ರಾಯಚೂರಿನಲ್ಲಿ ಟೊಮ್ಯಾಟೋಗಾಗಿ ಚಾಕು ಇರಿತ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಾಯಚೂರಿನಲ್ಲಿ ಟೊಮ್ಯಾಟೋ ವಿಚಾರವಾಗಿ ವ್ಯಕ್ತಿಯೊಬ್ಬನಿಗೆ ಚಾಕು ಹಾಕಿರುವ ಘಟನೆ ನಡೆದಿದೆ. 
 

ರಾಯಚೂರು: ಟೊಮ್ಯಾಟೋಗೆ(tomatoe) ಬಂಗಾರದ ಬೆಲೆ ಇರುವ ಹಿನ್ನೆಲೆ ದಾವಣಗೆರೆಯಲ್ಲಿ ಫಸಲನ್ನು ಕಾಯಲು ಕಾವಲನ್ನು ಹಾಕಲಾಗಿದೆ. ಇನ್ನೂ ಇತ್ತಾ ರಾಯಚೂರಿನಲ್ಲಿ(Raichur) ಟೊಮ್ಯಾಟೋ ವಿಚಾರವಾಗಿ ಚಾಕು ಇರಿತವಾಗಿದೆ. ಜಿಲ್ಲೆಯ ಮಾನ್ವಿಯ (Manvi) ತರಕಾರಿ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ರಫಿ(Rafi) ಎಂಬ ವ್ಯಕ್ತಿಗೆ ಅಬ್ದುಲ್‌(Abdul) ಎಂಬಾತ ಚಾಕು ಹಾಕಿದ್ದಾನೆ. ಟೊಮ್ಯಾಟೋವನ್ನು ಕಾಯಲು ರಫಿ ಮಾರುಕಟ್ಟೆಯಲ್ಲಿ ಉಳಿದಿದ್ದ. ರಫಿ ತಳ್ಳುವ ತರಕಾರಿ ಗಾಡಿಯ ಮೇಲೆ ಕುಳಿತಿದ್ದ, ಈ ವೇಳೆ ಬಂದ ಅಬ್ದುಲ್‌ ಮಾತನಾಡುತ್ತಾ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ರಫಿ ಮಾನ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  

ಇದನ್ನೂ ವೀಕ್ಷಿಸಿ:  ಜೈನ ಮುನಿ ಹತ್ಯೆ ಪ್ರಕರಣ: ಭದ್ರತೆ ಜೊತೆ ಪೊಲೀಸ್‌ ಸಿಬ್ಬಂದಿಯ ಮಾನವೀಯ ಕಾರ್ಯ ..!

Video Top Stories