
ಕೊನೆಗೂ ಮೇಘನಾ ಕ್ಷಮೆ ಕೇಳಿದ ಇಂದ್ರಜಿತ್, ಚಿರು ಹೆಸರು ತರಬಾರದಿತ್ತು!
ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು/ ಕೊನೆಗೂ ಮೇಘನಾ ರಾಜ್ ಕ್ಷಮೆಯಾಚಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್/ ಪೋಸ್ಟ್ ಮಾರ್ಟ್ಂ ಆಗಬೇಕಿತ್ತು ಎಂದು ಹೇಳಿದ್ದ ನಿರ್ದೇಶಕ
ಬೆಂಗಳೂರು(ಸೆ. 05) ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಮಾತನಾಡುವ ವೇಳೆ ಗೊತ್ತಿಲ್ಲದೆ ಚಿರಂಜೀವಿ ಸರ್ಜಾ ಹೆಸರು ಉಲ್ಲೇಖವಾಗಿದ್ದರೆ ಅದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
Add Asianetnews Kannada as a Preferred Source

ಮೇಘನಾ ಒಂದು ಪತ್ರ ಬರೆದಿದ್ದಾರೆ. ಅದರಲ್ಲಿ ತುಂಬಾ ನೋವುಂಟಾಗಿದೆ ಅಂದಿದ್ದಾರೆ. ಪ್ರಮಿಳಾ ಜೋಷಾಯಿ ಮತ್ತು ಸುಂದರ್ ರಾಜ್ ನನ್ನ ಮಗುವಿನಂತೆ ಆಡಿಸಿದ್ದಾರೆ ಚಿರು ಸತ್ತಾಗ ನನಗೆ ನೋವಾಯ್ತು ನನಗೆ ಸಂಶಯ ಬಂತು. ಏನೇ ಇದ್ದರೂ ನಾನು ವಾಣಿಜ್ಯ ಮಂಡಳಿ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಲಂಕೇಶ್ ಹೇಳಿದ್ದಾರೆ.