Asianet Suvarna News Asianet Suvarna News

ಮಂಗಳೂರು ಸ್ಫೋಟ ಪ್ರಕರಣ: ಮೈಸೂರಿನಲ್ಲಿ ಹೇಗಿದ್ದ ಗೊತ್ತಾ ಉಗ್ರ ಶಾರೀಕ್?

ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದ ಹಿಂದೆ ಭಯಾನಕ ರಹಸ್ಯ ಅಡಗಿದ್ದು, ಉಗ್ರ ಶಾರೀಕ್‌ ಬಗ್ಗೆ ಕೆಲ ಮಾಹಿತಿ ಬಹಿರಂಗವಾಗಿವೆ.

ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಮೊಹಮದ್‌ ಶಾರೀಕ್‌, ಮೈಸೂರಿನಲ್ಲಿ ಮೊಬೈಲ್‌ ಟ್ರೇನಿಂಗ್‌ ಸೆಂಟರ್‌ಗೆ ಹೋಗುತ್ತಿದ್ದ‌. ಅವನ ಕುರಿತು ಮೊಬೈಲ್ ಅಂಗಡಿ ಮಾಲೀಕ ಮಾಹಿತಿ ನೀಡಿದ್ದು, ಶಾರೀಕ್‌ 45 ದಿನಗಳಲ್ಲಿ 22 ದಿನ  ಮಾತ್ರ ಟ್ರೇನಿಂಗ್‌'ಗೆ ಹೋಗಿದ್ದ. ಶಾರೀಕ್‌ ಕ್ಲಾಸ್‌'ನಲ್ಲಿದ್ದಾಗ ಪದೇ ಪದೇ ಬಾಗಿಲ ಬಳಿ ನೋಡುತ್ತಿದ. ಪ್ರಶ್ನೆ ಮಾಡಿದಾಗ ತಬ್ಬಿಬ್ಬಾಗಿದ್ದ ಉಗ್ರ ಶಾರೀಕ್‌, ಸರಿಯಾಗಿ ಕ್ಲಾಸ್‌ಗೆ ಬರುತ್ತಿರಲ್ಲಿಲ್ಲ ಎಂದು ಮಾಲೀಕ ಪ್ರಸಾದ್‌ ಮಾತನಾಡಿದ್ದಾರೆ. ಶಾರೀಕ್‌ ನಡೆ ಅಂಗಡಿ ಮಾಲೀಕರಿಗೆ ಅನುಮಾನ ಮೂಡಿಸಿತ್ತು.

ಮಂಗಳೂರು ಸ್ಫೋಟ: ಬಾಂಬ್‌ ಸರಿಯಾಗಿ ಫಿಟ್‌ ಆಗಿರಲಿಲ್ಲ, ಅರ್ಧಂಬರ್ಧ ಕಲಿತಿದ್ದ ಶಾರೀಕ್‌