Asianet Suvarna News Asianet Suvarna News

ಕ್ರಿಕೆಟಿಗ ವಿಜಯ್ ಶಂಕರ್ & ಫ್ಯಾಮಿಲಿ ಟೆಂಪಲ್ ರನ್; ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ಆಲ್ರೌಂಡರ್

ಸ್ಟಾರ್ ಆಲ್ರೌಂಡರ್ ವಿಜಯ್ ಶಂಕರ್ ಹಾಗೂ ಮತ್ತವರ ಕುಟುಂಬ ಇಂದು ಮುಂಜಾನೆ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು

ತಿರುಪತಿ(ಆ.02): ಟೀಂ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್ ಹಾಗೂ ಮತ್ತವರ ಕುಟುಂಬ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಕ್ರಿಕೆಟ್‌ನಿಂದ ಕೊಂಚ ಬಿಡುವು ಪಡೆದುಕೊಂಡು, ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯ್‌ ಶಂಕರ್ ಕುಟುಂಬ ದೇವರಲ್ಲಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿಗಳು ಕ್ರಿಕೆಟಿಗ ವಿಜಯ್ ಶಂಕರ್ ಅವರಿಗೆ ಶಾಲು ಹೊಂದಿಸಿ ಸನ್ಮಾನ ಮಾಡಿದರು. ನಂತರ ತೀರ್ಥಪ್ರಸಾದ ಸ್ವೀಕರಿಸಿದರು. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

World Cup 2023: ಅಕ್ಟೋಬರ್ 15ರ ಬದಲು ಈ ಡೇಟ್‌ಗೆ ಭಾರತ ಎದುರು ಆಡಲು ಒಪ್ಪಿಕೊಂಡ ಪಾಕಿಸ್ತಾನ..!
 

Video Top Stories