Asianet Suvarna News Asianet Suvarna News

ಮಂಡ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ, ಅಪಾಯ ಆಹ್ವಾನಿಸ್ತಿದ್ದಾರಾ ಡಿಸಿ..?

ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಡಿಲ ಮಾಡಲಾಗಿದೆ. ದೇಶವೇ ಲಾಕ್‌ಡೌನ್ ಆಗಿದ್ದರೂ, ಕೇಸ್ ಪತ್ತೆಯಾಗದಿರುವ ಕಾರಣ ಲಾಕ್‌ಡೌನ್ ಸಡಿಲ ಮಾಡಿ ಸಲೂನ್ ಹಾಗೂ ಬೇಕರಿ ತೆರೆಯುವುದಕ್ಕೆ ಮಂಡ್ಯ ಜಿಲ್ಲಾಡಳಿತ ಒಪ್ಪಿಗೆ ನೀಡಿದೆ.

ಮಂಡ್ಯ(ಏ.04): ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಡಿಲ ಮಾಡಲಾಗಿದೆ. ದೇಶವೇ ಲಾಕ್‌ಡೌನ್ ಆಗಿದ್ದರೂ, ಕೇಸ್ ಪತ್ತೆಯಾಗದಿರುವ ಕಾರಣ ಲಾಕ್‌ಡೌನ್ ಸಡಿಲ ಮಾಡಿ ಸಲೂನ್ ಹಾಗೂ ಬೇಕರಿ ತೆರೆಯುವುದಕ್ಕೆ ಮಂಡ್ಯ ಜಿಲ್ಲಾಡಳಿತ ಒಪ್ಪಿಗೆ ನೀಡಿದೆ.

ಬೀದಿ ಬೀದಿ ಸುತ್ತು​ತ್ತಿದ್ದ ಹೋಂ ಕ್ವಾರಂಟೈನ್‌ ವ್ಯಕ್ತಿ: ಆತಂಕದಲ್ಲಿ ಜನತೆ

ಲಾಕ್‌ಡೌನ್ ಆಗಿದ್ದರೂ ಜನ ಹೊರಗಡೆ ಓಡಾಡುತ್ತಿದ್ದಾರೆ. ಇನ್ನು ಲಾಕ್‌ಡೌನ್ ಸಡಿಲಿಸಿದರೆ ಜನ ಬೇಕಾಬಿಟ್ಟಿಯಾಗಿ ಓಡಾಡುವ ಸಾಧ್ಯತೆ ಇದೆ. ಬೇಕರಿ ತೆರೆಯಲು ಅನುಮತಿ ನೀಡಬೇಕೆಂದು ಮಾಲೀಕರು ಅನುಮತಿ ಕೋರಿದ್ದರು. ಇಂದಿನಿಂದ ಸಲೂನ್ ಹಾಗೂ ಬೇಕರಿಗಳು ತೆರೆದಿರಲಿವೆ. ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರು ಕೆಲವೊಂದು ಷರತ್ತುಗಳನ್ನು ವಿಧಿಸಿ ಲಾಕ್‌ಡೌನ್ ಸಡಿಲಿಸಿ ಆದೇಶ ನೀಡಿದ್ದಾರೆ.

Video Top Stories