Asianet Suvarna News Asianet Suvarna News

ಟಾಲಿವುಡ್‌ನಲ್ಲಿ ಶುರು ಹೊಸ ಭಯ; ರಾಜಮೌಳಿ ಜೊತೆ ಸಿನಿಮಾ ಮಾಡಿ ಗೆದ್ದವ್ರು ಮತ್ತೆ ಕಾಣಲಿಲ್ಲ ಗೆಲುವು

ಸೌತ್ ಸಿನಿ ದುನಿಯಾದ ನಂಬರ್ ಒನ್ ಸ್ಟಾರ್ ನಿರ್ದೇಶಕ ರಾಜಮೌಳಿ. ಊಹೆಗೂ ಮೀರಿದಂತಹ ಸಿನಿಮಾವನ್ನ ಪ್ರೇಕ್ಷಕರ ಮುಂದಿಡೋ ಕಲಾಕರ್. ಈ ರೀತಿಯೂ ಸಿನಿಮಾ ಮಾಡಲು ಸಾಧ್ಯನಾ ಅನ್ನುವಷ್ಟರ ಮಟ್ಟಿಗೆ ಚಿತ್ರವನ್ನ ಪ್ರಸೆಂಟ್ ಮಾಡೋ ಜಾದೂಗಾರ. ಇಷ್ಟೆಲ್ಲಾ ಪ್ರಖ್ಯಾತಿ, ಸಾಧನೆ ಎಲ್ಲವೂ ಇದ್ದರೂ ರಾಜಮೌಳಿ ಬಗ್ಗೆ ತೆಲಗು ಚಿತ್ರರಂಗದಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ.

ಸೌತ್ ಸಿನಿ ದುನಿಯಾದ ನಂಬರ್ ಒನ್ ಸ್ಟಾರ್ ನಿರ್ದೇಶಕ ರಾಜಮೌಳಿ. ಊಹೆಗೂ ಮೀರಿದಂತಹ ಸಿನಿಮಾವನ್ನ ಪ್ರೇಕ್ಷಕರ ಮುಂದಿಡೋ ಕಲಾಕರ್. ಈ ರೀತಿಯೂ ಸಿನಿಮಾ ಮಾಡಲು ಸಾಧ್ಯನಾ ಅನ್ನುವಷ್ಟರ ಮಟ್ಟಿಗೆ ಚಿತ್ರವನ್ನ ಪ್ರಸೆಂಟ್ ಮಾಡೋ ಜಾದೂಗಾರ. ಇಷ್ಟೆಲ್ಲಾ ಪ್ರಖ್ಯಾತಿ, ಸಾಧನೆ ಎಲ್ಲವೂ ಇದ್ದರೂ ರಾಜಮೌಳಿ ಬಗ್ಗೆ ತೆಲಗು ಚಿತ್ರರಂಗದಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಅದನ್ನ ಕಾಕತಾಳಿಯ ಎನ್ನಬೇಕೋ ಅಥವ ಮೂಢನಂಬಿಕೆ ಎನ್ನಬೇಕೋ ಅನ್ನೋ ಕನ್ಫ್ಯೂಷನ್ ನಲ್ಲಿದೆ ಟಾಲಿವುಡ್. ಹೌದು ರಾಜಮೌಳಿ ಜೊತೆ ಕೈಜೋಡಿಸಿದ್ರೆ ಸೋಲು ಕಟ್ಟಿಟ್ಟ ಬುತ್ತಿ ಅಂತೆ. ಈ ಅನುಭವ ನಟ ನಿತಿನ್ ರೆಡ್ಡಿ, ಜ್ಯೂ ಎನ್ ಟಿ ಆರ್, ಪ್ರಭಾಸ್, ರಾಮ್ ಚರಣ್ ಎಲ್ಲರ ವಿಚಾರದಲ್ಲೂ ಸಾಭೀತಾಗಿದೆ. ಹಾಗಾಗಿ ಈಗ ಹೊಸ ಭಯ ಪ್ರಾರಂಭವಾಗಿದೆ.