Karnataka Business Award: ಕ್ಲ್ಯಾಸಿಕ್ ಫೈರ್‌ ಸಿಸ್ಟಮ್ಸ್‌ನ ಬಸವರಾಜ್ ಕಲ್ಯಾಲ್‌ಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್

Karnataka Business Award: ಸುಮಾರು 18 ವರ್ಷಗಳಿಂದ ಫೈರ್‌ & ಸೇಫ್ಟಿ ಉಪಕರಣಗಳು ಹಾಗೂ ಇಂಡಸ್ಟ್ರೀಗಳಿಗೆ ಸಂಬಂಧಪಟ್ಟ ಸೇಫ್ಟಿ ಉಪಕರಣಗಳನ್ನು ಈ ಕಂಪನಿ  ಉತ್ಪಾದಿಸುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು. 02): ಏಷ್ಯಾನೆಟ್ ಸುವರ್ಣನ್ಯೂಸ್ (Asianet Suvarna News) ಹಾಗೂ ಕನ್ನಡಪ್ರಭ (Kannada Prabha) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ (Karnataka Business Award) ನೀಡಲಾಗುತ್ತಿದೆ. 

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಕ್ಲ್ಯಾಸಿಕ್ ಫೈರ್‌ ಸಿಸ್ಟಮ್ಸ್‌ನ ಮುಖ್ಯಸ್ಥರಾದ ಬಸವರಾಜ್ ಕಲ್ಯಾಲ್‌. 

ಸುಮಾರು 18 ವರ್ಷಗಳಿಂದ ಫೈರ್‌ & ಸೇಫ್ಟಿ ಉಪಕರಣಗಳು ಹಾಗೂ ಇಂಡಸ್ಟ್ರೀಗಳಿಗೆ ಸಂಬಂಧಪಟ್ಟ ಸೇಫ್ಟಿ ಉಪಕರಣಗಳನ್ನು ಈ ಕಂಪನಿ ಉತ್ಪಾದಿಸುತ್ತಿದೆ. ಸುಮಾರು 12 ವರ್ಷಗಳಿಂದ ಈ ಕಂಪನಿ ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಸೇವೆಯನ್ನು ನೀಡುತ್ತಿದೆ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ಬಸವರಾಜ್ ಕಲ್ಯಾಲ್‌ ವಿವರಿಸಿದ್ದಾರೆ ಕೇಳಿ 

ಇದನ್ನೂ ನೋಡಿ:ಎಂಡಿಬ್ಲ್ಯೂಬಿ ಗ್ರೂಪ್‌ನ ರಮೇಶ್‌ ಬಾಫ್ನಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್

Related Video