11:22 PM (IST) Jul 02

Karnataka News Live 2nd July: Renukaswamy Case - ದರ್ಶನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ - ಸಾಕ್ಷಿಯ ದೂರಿನಲ್ಲಿ ಹೊರಬಿತ್ತು ಸ್ಫೋಟಕ ಮಾಹಿತಿ!

Renukaswamy Case: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಎಸ್ಐ ನಟೇಶ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿದ್ದ ಪ್ರಮುಖ ಸಾಕ್ಷಿದಾರ ಸಂದೀಪ್ ನೀಡಿರುವ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Read Full Story
09:38 PM (IST) Jul 02

Karnataka News Live 2nd July: ಜನಾರ್ದನ ರೆಡ್ಡಿ ಮಗನ ಜೊತೆ ಶೂಟಿಂಗ್, MBBS ಕನಸು - ಶ್ರೀಲೀಲಾ ಬಿಚ್ಚಿಟ್ರು ಆ ಸೀಕ್ರೆಟ್

MBBS ಪರೀಕ್ಷೆಗಳೇ ಮೊದಲ ಆದ್ಯತೆಯಾಗಿದ್ದವು. ನನ್ನ ಭಾಗದ ಚಿತ್ರೀಕರಣ ಮುಗಿದ ತಕ್ಷಣವೇ ಪ್ರಾಯೋಗಿಕ ಪರೀಕ್ಷೆಗಳಿಗೆ ತೆರಳುತ್ತಿದ್ದೆ. ಮತ್ತೆ ಸಮಯ ಸಿಕ್ಕಾಗ ಸೆಟ್‌ಗೆ ಹಿಂದಿರುಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೆ ಎಂದರು ಶ್ರೀಲೀಲಾ.

Read Full Story
08:45 PM (IST) Jul 02

Karnataka News Live 2nd July: ಅಣ್ಣನ ಮಗ ನಿರಂಜನ್ ಜೊತೆ ಮೊದಲ ಬಾರಿಗೆ ಉಪೇಂದ್ರ ನಟನೆ - 'ನೆಕ್ಸ್ಟ್ ಲೆವೆಲ್'ನಲ್ಲಿ ಶಾಕಿಂಗ್ ಟ್ವಿಸ್ಟ್!

‘ನೆಕ್ಸ್ಟ್ ಲೆವೆಲ್’ ಸಿನಿಮಾಗೆ ನಿರ್ದೇಶಕ ಅರವಿಂದ್ ಕೌಶಿಕ್ ಹಾಗೂ ನಿರ್ಮಾಪಕ ತರುಣ್ ಶಿವಪ್ಪ ಸೇರಿ ದೊಡ್ಡ ತಾರಾಬಳಗವನ್ನೇ ಒಟ್ಟುಗೂಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

Read Full Story
07:04 PM (IST) Jul 02

Karnataka News Live 2nd July: ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಯುರೋಪ್ ಪ್ರವಾಸಿಗರು ಯಾಕೆ ಬಂದರು? ಇಲ್ಲಿದೆ ಕಾರಣ!

ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.

Read Full Story
06:46 PM (IST) Jul 02

Karnataka News Live 2nd July: ಬಿಡದಿ ಟೌನ್‌ಶಿಪ್ ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡಿ - ಡಿಕೆಶಿಗೆ ಜನಾರ್ದನ ರೆಡ್ಡಿ ಟಾಂಗ್

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ವಿಚಾರ ಬಿಟ್ಟು ರಾಜ್ಯದ ಅಭಿವೃದ್ದಿ ಕಡೆಗೆ ಗಮನಹರಿಸಲಿ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದ..

Read Full Story
06:33 PM (IST) Jul 02

Karnataka News Live 2nd July: ಈ ಜಿಲ್ಲೆಯಲ್ಲಿ ಮಕ್ಕಳ ಕೊರತೆ - ಇದೇ ವರ್ಷವೇ 11 ಸರ್ಕಾರಿ ಶಾಲೆಗಳಿಗೆ ಬೀಗ!

ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುವ ಸ್ಥಿತಿಗೆ ತಲುಪಿವೆ. ಈ ವರ್ಷ 11 ಸರ್ಕಾರಿ ಶಾಲೆಗಳು ಶೂನ್ಯ ದಾಖಲಾತಿ.

Read Full Story
06:06 PM (IST) Jul 02

Karnataka News Live 2nd July: 'ತ್ರಿನಯನಿ' ಖ್ಯಾತಿಯ ಆಶಿಕಾ ಪಡುಕೋಣೆ ಬರ್ತ್‌ಡೇ ಸಂಭ್ರಮ - ಭಾವುಕ ಪೋಸ್ಟ್ ವೈರಲ್, ಅಭಿಮಾನಿಗಳ ಕಣ್ಣು ತೇವ!

Ashika Padukone Birthday: ಜೀ ತೆಲುಗು ವಾಹಿನಿಯ ಸೂಪರ್‌ಹಿಟ್ ಧಾರಾವಾಹಿ 'ತ್ರಿನಯನಿ' ಮೂಲಕ ಮನೆಮಾತಾದ ನಟಿ ಆಶಿಕಾ ಗೋಪಾಲ್‌ ಪಡುಕೋಣೆ ಇಂದು ಬಹುಭಾಷಾ ಕಿರುತೆರೆ ತಾರೆಯಾಗಿ ಮಿಂಚುತ್ತಿದ್ದಾರೆ.

Read Full Story
05:18 PM (IST) Jul 02

Karnataka News Live 2nd July: Haveri - ಕ್ಷುಲ್ಲಕ ಜಗಳಕ್ಕೆ ಬಲಿಯಾದ ಬೀದಿ ಬದಿ ವ್ಯಾಪಾರಿ! ಇದು ಒಂದು ಮೊಟ್ಟೆಯ ಕಥೆ!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಕ್ಷುಲ್ಲಕವಿಚಾರಕ್ಕೆ ಬೀದಿ ಬದಿ ವ್ಯಾಪಾರಿಬ್ಬರು ಕೊಲೆಯಾಗಿದ್ದಾರೆ. ಸುಕಾ ಸುಮ್ಮನೆ ಶುರುವಾದ ಜಗಳ ತಾರಕಕ್ಕೇರಿ, ನಾಲ್ವರು ಯುವಕರು ಹಲ್ಲೆ ನಡೆಸಿದ್ದರಿಂದ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story
05:15 PM (IST) Jul 02

Karnataka News Live 2nd July: Tandoori roti recipe - 4 ಸ್ಟೆಪ್‌ ಸಾಕು, ತಂದೂರ್‌ ಇಲ್ಲದೆ ಹೋಟೆಲ್‌ ಸ್ಟೈಲ್‌ ತಂದೂರಿ ರೋಟಿ ಮಾಡ್ಬೋದು!

Tandoori roti recipe in restaurant style: ಮನೆಯಲ್ಲಿ ತಂದೂರ್ ಇಲ್ಲದೆಯೇ ಮೃದುವಾದ, ಉಬ್ಬಿದ ತಂದೂರಿ ರೋಟಿ ಮಾಡುವುದನ್ನು ಕಲಿಯಿರಿ. ಕೇವಲ 4 ಸುಲಭ ಹಂತಗಳಲ್ಲಿ ಡಾಬಾ ಶೈಲಿಯ ತಂದೂರಿ ರೋಟಿ ಮಾಡುವ ಸರಳ ರೆಸಿಪಿ, ಬೇಕಾಗುವ ಸಾಮಗ್ರಿಗಳು ಮತ್ತು ಪರ್ಫೆಕ್ಟ್ ರೋಟಿಗಾಗಿ ಟಿಪ್ಸ್ ಇಲ್ಲಿವೆ.

Read Full Story
04:46 PM (IST) Jul 02

Karnataka News Live 2nd July: ದೊಡ್ಡ ಸ್ಟಾರ್‌ಗಳ ಜೊತೆ ಗುಪ್ತ ಸಭೆ ನಡೆಸಿದ ಗೋಲ್ಡನ್ ಸ್ಟಾರ್ ಗಣೇಶ್? ಅಸಲಿ ವಿಷಯ ಬಹಿರಂಗ!

Golden Star Ganesh: ಇತ್ತೀಚಿನ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಬಗ್ಗೆ ಮಾತನಾಡಿದ ಗಣೇಶ್, "ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಕಾತುರ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಉತ್ತಮ ಕಂಟೆಂಟ್ ಕೊರತೆ.

Read Full Story
04:42 PM (IST) Jul 02

Karnataka News Live 2nd July: Karnataka Trekking Places - ಮಳೆ ಬಂತ್ರೀ..ಟ್ರೆಕ್ಕಿಂಗ್‌ ಮಾಡ್ತಿರೇನ್ರಿ? ಕರ್ನಾಟಕದ ಬೆಸ್ಟ್‌ ಚಾರಣ ಸ್ಥಳಗಳು!

top 10 best trekking places in karnataka: ವಾರಪೂರ್ತಿ ಕೆಲಸ ಮಾಡಿದವರಿಗೆ, ವೀಕೆಂಡ್‌ನಲ್ಲಿ ಎಲ್ಲಿಯಾದರೂ ಚಾರಣ ಹೋಗಬೇಕು ಎಂದು ಎನಿಸುವುದುಂಟು. ಅಂತೆಯೇ ಕರ್ನಾಟಕದಲ್ಲೇ ಚಾರಣ ಮಾಡಲು ಸಾಕಷ್ಟು ಜಾಗಗಳು ಇವೆ. ಹಾಗಾದರೆ ಎಲ್ಲಿ ಹೋಗಬಹುದು? 

Read Full Story
04:25 PM (IST) Jul 02

Karnataka News Live 2nd July: ಕಾಶ್ಮೀರದಲ್ಲಿ ಚಿತ್ರೀಕರಣಗೊಂಡ ಮೊದಲ ತುಳು ಚಿತ್ರ ಪಿಚ್ಚರ್ - ಶಿಲ್ಪಾ ಗಣೇಶ್‌ ಹೇಳಿದಿಷ್ಟು..

Pichchar: ನೀವು ಮಂಗಳೂರಿನವರು. ತುಳು ಚಿತ್ರವೊಂದನ್ನು ನಿರ್ಮಿಸಿ ಎಂದು ಸ್ನೇಹಿತರು ಹೇಳುತ್ತಿದ್ದರು. ಒಳ್ಳೆಯ ಕತೆ ಸಿಕ್ಕರೆ ಮಾಡೋಣ ಅಂತ ಹೇಳಿದ್ದೆ. ಈ ಚಿತ್ರದ ಕತೆ ನನಗೂ ಗಣೇಶ್‌ ಅವರಿಗೂ ಇಷ್ಟವಾಗಿ ನಿರ್ಮಿಸಿದ್ದೇವೆ.

Read Full Story
04:16 PM (IST) Jul 02

Karnataka News Live 2nd July: ಕ್ರೈಂ ಸಿನಿಮಾವನ್ನೇ ಮೀರಿಸಿತ್ತು.. ಅಂದು ಪತ್ನಿ ಸಾಯಿಸಿ ಹಾವು ಕಚ್ಚಿಸಿದ್ದ ವ್ಯಕ್ತಿಗೆ ಈಗ ಏನಾಯ್ತು?

ಅದೊಂದು ಘೋರ ಅಪರಾಧ ಕೃತ್ಯ. ಪತ್ನಿಯನ್ನ ಉಸಿರುಗಟ್ಟಿಸಿ ಕ್ರೂರವಾಗಿ ಸಾಯಿಸಿದ್ದ ಪಾಪಿ ಪತಿ. ಬಳಿಕ ವಿಷಕಾರಿ ಹಾವು ಕಚ್ಚಿದ ಕತೆ ಕಟ್ಟಿದ್ದ. ಇದೀಗ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಏನಿದು ಸ್ಟೋರಿ ಅನ್ನೋ ವಿವರ ಇಲ್ಲಿದೆ.

Read Full Story
04:15 PM (IST) Jul 02

Karnataka News Live 2nd July: ಹೆಚ್ಚಿನ ಪ್ರೋಟೀನ್ ಯಾವುದರಲ್ಲಿದೆ? ಚಿಕನ್, ಮಟನ್, ಮೀನಿನ ನಡುವೆ ಜಿಮ್ ಪ್ರಿಯರ ಅಲ್ಟಿಮೇಟ್ ಚಾಯ್ಸ್ ಯಾವುದು ಗೊತ್ತಾ?

ದೇಹಕ್ಕೆ ಪ್ರೋಟೀನ್ ಅತ್ಯಗತ್ಯ, ಆದರೆ ಕೋಳಿ, ಮಟನ್ ಮತ್ತು ಮೀನುಗಳಲ್ಲಿ ಯಾವುದು ಉತ್ತಮ? ಈ ಲೇಖನವು ಪ್ರತಿ ಮಾಂಸದ ಪ್ರೋಟೀನ್, ಕೊಬ್ಬಿನಾಂಶ ಮತ್ತು ಆರೋಗ್ಯದ ಮೇಲಿನ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಯಾವುದು ಶ್ರೇಷಠ ಆಯ್ಕೆ ಎಂಬುದನ್ನು ತಿಳಿಯಿರಿ.

Read Full Story
03:50 PM (IST) Jul 02

Karnataka News Live 2nd July: ರಾಮನಗರದಲ್ಲಿ SIR ಪ್ರಕ್ರಿಯೆಯಲ್ಲಿ ಭಾಗಿಯಾದ ಬಾಂಗ್ಲಾ ವಲಸಿಗರು? ಕೇಂದ್ರ ಸಚಿವ HD Kumaraswamy ವಿಡಿಯೋ ರಿಲೀಸ್!

ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ, ರಾಮನಗರದಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಭಾವ ಬಳಸಿ ಬಾಂಗ್ಲಾ ವಲಸಿಗರು ಸೇರಿದಂತೆ ಕಳ್ಳ ಮತದಾರರನ್ನು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ವಿಡಿಯೋ ಸಮೇತ ದೂರಿದ್ದು, ಕೇಂದ್ರ ಚುನಾವಣಾ ಆಯೋಗ ಮತ್ತು ಗೃಹ ಸಚಿವ ಅಮಿತ್ ಶಾಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

Read Full Story
03:47 PM (IST) Jul 02

Karnataka News Live 2nd July: Golden Star Ganesh Birthday - ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ 2 ಭರ್ಜರಿ ಗಿಫ್ಟ್ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್!

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಅವರ ಕಳೆದ ವರ್ಷದ ಹುಟ್ಟುಹಬ್ಬದಂದು ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಆದರೆ ಈ ವರ್ಷ ಅವರ ಹುಟ್ಟುಹಬ್ಬದಂದು ಗಣೇಶ್‌ ಕಡೆಯಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ಅದೇನು ಅಂತ ನೋಡಿ..

Read Full Story
03:24 PM (IST) Jul 02

Karnataka News Live 2nd July: Mother Promise ಎಂದು ಪ್ರಾರ್ಥನೆ ಗೀತೆ ಬರೆದ Daali Dhananjaya; ಸಿದ್ಧಗಂಗಾ ಮಠದಲ್ಲಿ ಶೂಟಿಂಗ್!

Daali Dhananjaya Movie: ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಹಾಡುಗಳು, ಕಂಟೆಂಟ್‌ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ಸಿನಿಮಾ ‘ಮದರ್‌ ಪ್ರಾಮಿಸ್‌’. ಡಾಲಿ ಧನಂಜಯ ನಿರ್ಮಿಸಿ ನಟನೆ ಮಾಡಿರೋ ‘ಮದರ್‌ ಪ್ರಾಮಿಸ್‌’ ಸಿನಿಮಾ ಮತ್ತೊಂದು ಹಾಡು ಬಿಡುಗಡೆ ಆಗಿದೆ. 

Read Full Story
03:23 PM (IST) Jul 02

Karnataka News Live 2nd July: ಜನ ನಾಯಗನ್' ಚಿತ್ರದ ಕುರಿತು ಬಿಗ್‌ ಅಪ್ಡೇಟ್‌; ಹೈ ಕೋರ್ಟ್‌ ಹೇಳಿದ್ದಿಷ್ಟೇ!

ವಿಜಯ್ ನಟನೆಯ 'ಜನ ನಾಯಗನ್‌' ಚಿತ್ರದ ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ. ಪೈರಸಿ ಮಾಡಿದ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದು, ತನಿಖೆ ಮುಂದುವರೆದಿದೆ. ಅಷ್ಟಕ್ಕೂ ಕೋರ್ಟ್‌ಹೇಳಿದ್ದೇನು ಗೊತ್ತಾ? 

Read Full Story
03:22 PM (IST) Jul 02

Karnataka News Live 2nd July: Sandalwood - ನಾನು ಯಶ್‌ಗೆ ಹೀರೋಯಿನ್ ಆಗಲ್ಲ - ಅಚ್ಚರಿ ಹೇಳಿಕೆ ನೀಡಿದ ಕನ್ನಡದ ನಟಿ

ತಾವು ರಾಕಿಂಗ್ ಸ್ಟಾರ್ ಯಶ್ ಜೊತೆ ನಾಯಕಿಯಾಗಿ ನಟಿಸಲು ಇಷ್ಟಪಡುವುದಾಗಿ ಎಂದು ಕನ್ನಡದ ನಟಿಯೊಬ್ಬರು ಹೇಳಿದ್ದಾರೆ. ಅವರ ಈ ಅನಿರೀಕ್ಷಿತ ಉತ್ತರ ಪಕ್ಕದಲ್ಲಿದ್ದ ಸಹ-ನಟಿಯರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

Read Full Story
03:21 PM (IST) Jul 02

Karnataka News Live 2nd July: ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ - ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ದೌಡು, ತೀವ್ರ ಆತಂಕ!

ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ. ಇವು ಹುಸಿ ಬೆದರಿಕೆಗಳೆಂದು ಶಂಕಿಸಲಾಗಿದ್ದರೂ, ತನಿಖೆ ಮುಂದುವರೆದಿದೆ.
Read Full Story