ಕೊಡಗಿನಲ್ಲಿ ಮಾತನಾಡಿದ ಸಚಿವ ಎನ್.ಎಸ್. ಬೋಸರಾಜು, ಜೆಡಿಎಸ್ನವರಿಗೆ ಎಂದಿಗೂ ಒಳ್ಳೆಯ ಕಾಲ ಬರುವುದಿಲ್ಲ ಮತ್ತು ಅವರ ನಾಟಕ ಎಲ್ಲರಿಗೂ ತಿಳಿದಿದೆ ಎಂದು ಟೀಕಿಸಿದರು. ಅಲ್ಲದೆ, ರಾಷ್ಟ್ರಗೀತೆಗೆ ಅಗೌರವ ತೋರಿದ ರಾಜ್ಯಪಾಲರು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
- Home
- News
- State
- State News Live: ಜೆಡಿಎಸ್ ನವರಿಗೆ ಒಳ್ಳೆಯಕಾಲ ಎಂದೂ ಬರಲ್ಲ, ಅವರಿಗೆ ಇದು ಸರ್ವೈವಲ್ ಕಾಲ - ಸಚಿವ ಬೋಸರಾಜು ವ್ಯಂಗ್ಯ
State News Live: ಜೆಡಿಎಸ್ ನವರಿಗೆ ಒಳ್ಳೆಯಕಾಲ ಎಂದೂ ಬರಲ್ಲ, ಅವರಿಗೆ ಇದು ಸರ್ವೈವಲ್ ಕಾಲ - ಸಚಿವ ಬೋಸರಾಜು ವ್ಯಂಗ್ಯ

ಬೆಂಗಳೂರು (ಜ.26): ಸುವರ್ಣನ್ಯೂಸ್-ಕನ್ನಡಪ್ರಭ ಅಸಮಾನ್ಯ ಕನ್ನಡಿಗ 'ಪುಸ್ತಕ ಮನೆ' ಅಂಕೇಗೌಡ ಸೇರಿ ರಾಜ್ಯದ 9 ಮಂದಿಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ. ನವದೆಹಲಿ: ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಭಾನುವಾರ ಘೋಷಿಸಿದ್ದು, ಕರ್ನಾಟಕದ 9 ಸಾಧಕರು ಭಾಜನರಾಗಿದ್ದಾರೆ. ಶತಾವಧಾನಿ ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಉಳಿದಂತೆ ಅಂಕೇಗೌಡ, ಅರ್ಮಿದಾ ಫರ್ನಾಂಡೀಸ್, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ ಹನಗವಾಡಿ ಹಾಗೂ ಟಿ.ಟಿ.ಜಗನ್ನಾಥ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ದೇಶದ ಒಟ್ಟು 131 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 26th January:ಜೆಡಿಎಸ್ ನವರಿಗೆ ಒಳ್ಳೆಯಕಾಲ ಎಂದೂ ಬರಲ್ಲ, ಅವರಿಗೆ ಇದು ಸರ್ವೈವಲ್ ಕಾಲ - ಸಚಿವ ಬೋಸರಾಜು ವ್ಯಂಗ್ಯ
Karnataka News Live 26th January:ಧರ್ಮಸ್ಥಳ ಪಾರ್ಕ್ಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ, ಡಾಗ್ ಸತೀಶ್ ಹೇಳಿಕೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ
ಧರ್ಮಸ್ಥಳ ಪಾರ್ಕ್ಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ, ದೇವ್ರ ದಿಂಡ್ರೂ ನಾನು ನಂಬಲ್ಲ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ಹೇಳಿದ್ದಾರೆ. ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.
Karnataka News Live 26th January:ಚಿನ್ನದ ದರ ಗಗನಮುಖಿ; ಭೀಮಾತೀರದಲ್ಲಿ ಗನ್ ತೋರಿಸಿ ಚಿನ್ನದಂಗಡಿ ಲೂಟಿ, ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯ!
ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ, ಮುಸುಕುಧಾರಿ ದರೋಡೆಕೋರರು ನಡುಹಗಲೇ ಚಿನ್ನದಂಗಡಿಗೆ ನುಗ್ಗಿ ಗನ್ ಪಾಯಿಂಟ್ನಲ್ಲಿ ದರೋಡೆ ನಡೆಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ, ವಿಡಿಯೋ ಮಾಡುತ್ತಿದ್ದ ಯುವಕನ ಕಾಲಿಗೆ ಗುಂಡಿಕ್ಕಿ, 205 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ.
Karnataka News Live 26th January:ಬಂಗಾರದ ನಿಧಿ ಕೊಟ್ಟ ಲಕ್ಕುಂಡಿ ರಿತ್ತಿ ಕುಟುಂಬಕ್ಕೆ ಕೊಟ್ರಲ್ಲಾ ಚಿಪ್ಪು; 11 ತಿಂಗಳ ಗುತ್ತಿಗೆ ನೌಕರಿ ಕೊಟ್ಟ ಸರ್ಕಾರ!
Karnataka News Live 26th January:ಗೋಕರ್ಣ ಕಡಲ ತೀರದಲ್ಲಿ ದುರಂತ - ಸಮುದ್ರದ ಸುಳಿಗೆ ಸಿಲುಕಿ ಕೊಪ್ಪಳದ ವೈದ್ಯಕೀಯ ವಿದ್ಯಾರ್ಥಿನಿ ಸಾವು
ಗಣರಾಜ್ಯೋತ್ಸವದ ರಜೆ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಕೆಎಂಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಕೇರಳ ಮೂಲದ ವಿದ್ಯಾರ್ಥಿನಿ ಕಲ್ಯಾಣಿ (22) ನೀರಿನ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.
Karnataka News Live 26th January:ಅಜ್ಜಿಗೆ ಕಾರು ಗುದ್ದಿ ರಾಜಕೀಯ ದರ್ಪ ತೋರಿದ ಕಾಂಗ್ರೆಸ್ ಮುಖಂಡ; ಜನರೇ ನಾಲ್ಕು ಇಕ್ಕೋವಷ್ಟರಲ್ಲಿ ಪೊಲೀಸರು ಬಂದ್ರು!
ಕೋಲಾರದಲ್ಲಿ ಕಾಂಗ್ರೆಸ್ ಮುಖಂಡ ಮುನಿರಾಜು ಅವರ ಕಾರು ವೃದ್ಧೆಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದೆ. ಅಪಘಾತದ ನಂತರ, ಸಹಾಯ ಮಾಡುವ ಬದಲು ಮುಖಂಡ ಮತ್ತು ಅವರ ಬೆಂಬಲಿಗರು ಸಾರ್ವಜನಿಕರ ಮೇಲೆ ದರ್ಪ ತೋರಿದ್ದು, ಇದರಿಂದ ಕುಪಿತಗೊಂಡ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.
Karnataka News Live 26th January:ಕನಕಪುರದಲ್ಲಿ ಕನಕೋತ್ಸವ - ಡಿಕೆ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿ, ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೋಕ್, ಕೇಂದ್ರ ಸಚಿವರಿಗೆ ಡಿಕೆಶಿ ಸವಾಲು
ಕನಕಪುರದಲ್ಲಿ 7ನೇ ಆವೃತ್ತಿಯ ಕನಕೋತ್ಸವಕ್ಕೆ ಡಿಕೆ ಬ್ರದರ್ಸ್ ಚಾಲನೆ ನೀಡಿದ್ದು, ಕಲೆ, ಸಂಸ್ಕೃತಿ ಹಾಗೂ ಕ್ರೀಡೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ, ದೆಹಲಿ ಸ್ತಬ್ಧಚಿತ್ರ ನಿರಾಕರಣೆ ಮತ್ತು ಮನರೇಗಾ ಹೆಸರು ಬದಲಾವಣೆ ವಿರುದ್ಧ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಸವಾಲು ಹಾಕಿದರು
Karnataka News Live 26th January:ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕೇರಳದಲ್ಲಿ ಬಂಧನ!
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಪ್ರಾಣ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಚಿಕ್ಕಬಳ್ಳಾಪುರ ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ಬ್ಯಾನರ್ ತೆರವುಗೊಳಿಸಿದ್ದಕ್ಕೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ ಈ ಪ್ರಕರಣದಲ್ಲಿ 12 ದಿನ ಬಳಿಕ ಬಂಧನವಾಗಿದೆ.
Karnataka News Live 26th January:ನನಗೆ Amruthadhaare ಗೌತಮ್ನಂಥ ಗಂಡ ಬೇಕು; ಪಟ್ಟು ಹಿಡಿದ ಯುವತಿ - ನಟಿ ಛಾಯಾ ಸಿಂಗ್ ಹೇಳಿದ್ದೇನು?
Karnataka News Live 26th January:ಸಿನಿಮಾದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ 'ಆ ಮಂತ್ರ'ದ ಸಂದೇಶ ಸಾರಿದ ನಟ ಶಾರುಖ್ ಖಾನ್
'ಕಿಂಗ್' ಸಿನಿಮಾದಲ್ಲಿ ಬರೀ ಶಾರುಖ್-ಸುಹಾನಾ ಮಾತ್ರವಲ್ಲದೆ, ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಅನಿಲ್ ಕಪೂರ್, ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಕಾಣಿಸಿಕೊಳ್ಳಲಿದ್ದಾರೆ. ದೇಶಭಕ್ತಿಯ ಸಂದೇಶದ ಜೊತೆಗೆ ಸಿನಿರಂಗದಲ್ಲಿ ಮತ್ತೊಂದು ದೊಡ್ಡ ಸಂಚಲನ ಮೂಡಿಸಲು ಸಿದ್ಧರಾಗಿದ್ದಾರೆ.
Karnataka News Live 26th January:'ಹೂವಿನ ಬಾಣದಂತೆ' ಯುವತಿ ಸ್ಯಾಂಡಲ್ವುಡ್ಗೆ ಎಂಟ್ರಿ- ಅದೃಷ್ಟ ಅಂದ್ರ ಇದಪ್ಪಾ! ಯಾವ ಸಿನಿಮಾ, ಯಾರ ಜೊತೆ?
ಅಪಶ್ರುತಿಯಲ್ಲಿ ಹಾಡಿ ವೈರಲ್ ಆದ ಮೈಸೂರಿನ ನಿತ್ಯಶ್ರೀ, ಇದೀಗ ಟ್ರೋಲ್ಗಳ ನಡುವೆಯೂ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಅವಕಾಶ ಪಡೆದ ನಂತರ ಟೀಕೆ ಹೆಚ್ಚಾಗಿದ್ದರೂ ಈಗ ಬೆಳ್ಳಿಪರದೆಯ ಮೇಲೆ ಮಿಂಚುವ ಅವಕಾಶ ಪಡೆದುಕೊಂಡಿದ್ದಾರೆ.
Karnataka News Live 26th January:ವಿಜಯಪುರ - ಗಣರಾಜ್ಯೋತ್ಸ ವ ದಿನದಂದೇ ಚಿನ್ನದಂಗಡಿ ಲೂಟಿ, ಸಿನಿಮೀಯ ಶೈಲಿಯಲ್ಲಿ ಕಂಟ್ರಿ ಪಿಸ್ತೂಲ್ ತೋರಿಸಿ ದರೋಡೆ!
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಗಣರಾಜ್ಯೋತ್ಸವದಂದೇ, ಬುಲೆಟ್ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರು ಚಿನ್ನದ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದಾರೆ. ಈ ವೇಳೆ ಅಡ್ಡಬಂದ ಯುವಕನೊಬ್ಬನ ಕಾಲಿಗೆ ಗುಂಡು ಹಾರಿಸಿ, ಚಿನ್ನಾಭರಣಗಳೊಂದಿಗೆ ಮಹಾರಾಷ್ಟ್ರದತ್ತ ಪರಾರಿ.
Karnataka News Live 26th January:ರೆಸ್ಟೋರೆಂಟ್ಗಳ ಜೊತೆ ಡೀಲ್ - ಬಂಬಲ್ ಟಿಂಡರ್ ಅಲ್ಲಿ ಸಿಕ್ಕ ಹುಡುಗಿರ ಕರ್ಕೊಂಡು ಹೋಟೆಲ್ಗೆ ಹೋದ್ರೆ ಗೋವಿಂದ
ದೇಶದ ಪ್ರಮುಖ ಮಹಾನಗರಗಳಲ್ಲಿ ಡೇಟಿಂಗ್ ಆಪ್ ಹೆಸರಿನಲ್ಲಿ ಹೊಸದೊಂದು ಸ್ಕ್ಯಾಮ್ ಶುರುವಾಗಿದೆ. ರೆಸ್ಟೋರೆಂಟ್ ಡೇಟಿಂಗ್ ಹೆಸರಿನಲ್ಲಿ ಈ ಡೇಟಿಂಗ್ ಆಪ್ನಲ್ಲಿ ಪರಿಚಿತರಾದ ಹೆಣ್ಣು ಮಕ್ಕಳನ್ನು ನಂಬಿ ಬರುವ ಹುಡುಗರು ತಮಗೆ ತಿಳಿಯದಂತೆ ಮೋಸದ ಜಾಲವೊಂದಕ್ಕೆ ಬಿದ್ದು ಜೇಬು ಖಾಲಿ ಮಾಡಿಕೊಳ್ಳುತ್ತಾರೆ.
Karnataka News Live 26th January:Amruthadhaare ಗೌತಮ್ ಸರ್ ಲವ್ನಲ್ಲಿ ಬಿದ್ದ ವಠಾರದ ಬ್ಯೂಟಿ ಕ್ವೀನ್ ಸುಷ್ಮಾ ಇವ್ರೇ ನೋಡಿ!
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ನನ್ನು ಪ್ರೀತಿಸುವ ಸುಷ್ಮಾ, ಆತನಿಂದಲೇ ಬದುಕಿನ ಪಾಠ ಕಲಿಯುತ್ತಾಳೆ. ಆದರೆ, ಭೂಮಿಕಾಳ ಕೈಯಿಂದ ಬರೆಸಿದ್ದ ಪ್ರೇಮಪತ್ರವು ಅನಿರೀಕ್ಷಿತವಾಗಿ ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡುತ್ತದೆ. ಸುಷ್ಮಾ ಪಾತ್ರ ನಿರ್ವಹಿಸಿದ ನಟಿ ಸಹನಾ ಗೌಡ ಕುರಿತ ಮಾಹಿತಿ.
Karnataka News Live 26th January:Bigg Boss ಕೊಟ್ರೂ ಗಿಲ್ಲಿಯ ಕೈಸೇರಿಲ್ಲ ಕಾರು! 50 ಲಕ್ಷ ಹಣ ಏನಾಯ್ತು? ಇಲ್ಲಿದೆ ಇಂಟರೆಸ್ಟಿಂಗ್ ವಿಷ್ಯ
ದಾಖಲೆ ಮತಗಳಿಂದ ಬಿಗ್ಬಾಸ್ ಗೆದ್ದ ಗಿಲ್ಲಿ ನಟನಿಗೆ ಇನ್ನೂ ಬಹುಮಾನದ ಕಾರು ಮತ್ತು 50 ಲಕ್ಷ ರೂಪಾಯಿ ನಗದು ಸಿಕ್ಕಿಲ್ಲ. ಈ ಹಿಂದೆ ಕಾರ್ತಿಕ್ ಮಹೇಶ್ ಅವರು ಈ ಬಗ್ಗೆ ಮಾತನಾಡಿದ್ದರು. ಗಿಲ್ಲಿಗೆ ಇವೆಲ್ಲಾ ಸಿಗಲು ಇನ್ನೆಷ್ಟು ದಿನ ಬೇಕು?
Karnataka News Live 26th January:ಬೆಂಗಳೂರು ರೌಡಿಶೀಟರ್ ಶಬ್ಬೀರ್ ಹತ್ಯೆ - ಹವಾ ಮೆಂಟೇನ್, ಹಫ್ತಾ ವಸೂಲಿ ವಿಚಾರಕ್ಕೆ ಹೊಡೆದು ಹಾಕಿದ 11 ಜನರ ಗ್ಯಾಂಗ್!
ಬೆಂಗಳೂರಿನ ಬಂಡೆಪಾಳ್ಯದಲ್ಲಿ ನಡೆದ ರೌಡಿಶೀಟರ್ ಶಬ್ಬೀರ್ ಕೊಲೆ ಪ್ರಕರಣವು ಹಫ್ತಾ ವಸೂಲಿ ಮತ್ತು ಜಾಗದ ವಿವಾದದಿಂದ ನಡೆದಿದೆ. ಈ ವ್ಯವಸ್ಥಿತ ಕೃತ್ಯದಲ್ಲಿ ಭಾಗಿಯಾಗಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕಠಿಣ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
Karnataka News Live 26th January:ಆಪರೇಷನ್ ಪರಾಕ್ರಮ್ ಯೋಧನಿಗೆ ಅವಮಾನ ಪ್ರಕರಣ - ಕೊನೆಗೂ ಕ್ಷಮೆ ಕೇಳಿದ ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿ
Karnataka News Live 26th January:Money Earning Ideas - AI ಬಳಸಿ ಸುಲಭವಾಗಿ ಸಂಪಾದನೆ ಮಾಡಲು ಟಾಪ್ 5 ಮಾರ್ಗಗಳು
Easy Ways to Make Money: ದುಡ್ಡೇ ದೊಡ್ಡಪ್ಪ ಎನ್ನೋದು ಎಲ್ಲ ಕಾಲಕ್ಕೂ ಸಲ್ಲುವ ಮಾತು. ಈ ಕಾಲದಲ್ಲಿ ಹಾರ್ಡ್ ವರ್ಕ್ ಅಲ್ಲ, ಸ್ಮಾರ್ಟ್ ವರ್ಕ್ ಮಾಡಿದ್ರೆನೇ ಹೆಚ್ಚು ಹಣ ಗಳಿಸಬಹುದು. ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು AI ಅನ್ನು ಮಾಹಿತಿ ಸಂಗ್ರಹಕ್ಕೆ ಮಾತ್ರವಲ್ಲದೆ ಹಣ ಗಳಿಸಲೂ ಬಳಸಬಹುದು.
Karnataka News Live 26th January:ಪೌರಾಯುಕ್ತೆಗೆ ದಮ್ಕಿ ಹಾಕಿದ್ದ ಕೈ ಮುಖಂಡ ಎಸ್ಕೇಪ್ - ಖಾಕಿ ಜೊತೆ ಕಣ್ಣಾಮುಚ್ಚಾಲೆ; ಸಿಸಿಟಿವಿ ಕೈಕೊಟ್ಟಿದ್ದೇ ವರ!
ಮಂಗಳೂರು ಪೌರಾಯುಕ್ತೆಗೆ ಬೆದರಿಕೆ ಹಾಕಿದ ಆರೋಪದ ಮೇಲೆ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಮಂಗಳೂರು ರೈಲ್ವೇ ನಿಲ್ದಾಣದ ಬಳಿ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ನಿಲ್ದಾಣದೊಳಗಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸದ ಕಾರಣ, ಆತ ಎಲ್ಲಿಗೆ ಹೋದನೆಂಬುದು ನಿಗೂಢವಾಗಿದೆ.
Karnataka News Live 26th January:ಸಿಎಂ ಕುರ್ಚಿಯಲ್ಲಿ 'ಟಗರು' ಕೂತಿದೆ - ಹೆಚ್.ಡಿ. ಕುಮಾರಸ್ವಾಮಿ ಹಗಲುಗನಸು ಕಾಣಬೇಡಿ; ಸಚಿವ ಜಮೀರ್ ಟಾಂಗ್
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ 2028ರ ಸಿಎಂ ಕನಸನ್ನು ಸಚಿವ ಜಮೀರ್ ಅಹ್ಮದ್ ಖಾನ್ 'ಹಗಲುಗನಸು' ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ತನ್ನ ಶಕ್ತಿ ಕಳೆದುಕೊಂಡಿದೆ ಹಾಗೂ 2028ರವರೆಗೂ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದರು.