08:18 PM (IST) Aug 26

Karnataka News Live 26 August 2026ಈ ವಿಚಾರಕ್ಕೆ ‘ಅಶ್ವಿನಿ ನಕ್ಷತ್ರ’ ಬೇಡವೆಂದಿದ್ದ ಜೆಕೆ - ಅದೇ ಧಾರಾವಾಹಿ ಬದಲಿಸಿತು ಅವರ ಬದುಕು!

Kannada Seriel Actor Karthik Jayaram ‘ಜೆಕೆ’ ಎಂದೇ ಖ್ಯಾತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಟನಾ ಪಯಣದ ಆರಂಭದ ದಿನಗಳ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿರುವ ಅವರು, ‘ಅಶ್ವಿನಿ ನಕ್ಷತ್ರ’ದ ನಾಯಕನ ಪಾತ್ರವನ್ನು ಆರಂಭದಲ್ಲಿ ಒಪ್ಪಿಕೊಳ್ಳಲು ತಮಗೆ ಆಸಕ್ತಿಯೇ ಇರಲಿಲ್ಲ.

Read Full Story
08:15 PM (IST) Aug 26

Karnataka News Live 26 August 2026Captain Abhimanyu - ಇದು ವಿದಾಯವಲ್ಲ, ಒಂದು ಯುಗದ ಅಂತ್ಯಕ್ಕೆ ಸಂದ ಗೌರವ; ಕೂಬಿಂಗ್ ಸ್ಪೆಷಲಿಸ್ಟ್‌ ಕ್ಯಾಪ್ಟನ್‌ ಅಭಿಮನ್ಯುವಿಗೆ ಭಾವುಕ ಬೀಳ್ಕೊಡುಗೆ!

ಮೈಸೂರು ದಸರಾ ಜಂಬೂ ಸವಾರಿಯಲ್ಲಿ 6 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನಿಯಮಗಳಂತೆ ಗೌರವಯುತ ವಿದಾಯ ನೀಡಲಾಗಿದೆ. ಕೂಬಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತನಾಗಿದ್ದ ಈ ಗಜವೀರನಿಗೆ ಗಜಪಯಣದ ವೇಳೆ ಇಡೀ ನಾಡು ಭಾವುಕ ಬೀಳ್ಕೊಡುಗೆ ಸಲ್ಲಿಸಿತು.
Read Full Story
08:11 PM (IST) Aug 26

Karnataka News Live 26 August 2026ತೆಂಗಿನ ಮರದಲ್ಲಿ ಬಿಟ್ಟ ಕಂದು ಬಣ್ಣದ ಹೀರೇಕಾಯಿ? ರಾಮನಗರದ ರೈತನ ತೋಟದಲ್ಲಿ ವಿಸ್ಮಯ! ಏನಿದು

ಕರ್ನಾಟಕದಲ್ಲಿ ಬರಗಾಲದಿಂದ ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಇದರ ನಡುವೆ, ರಾಮನಗರದ ಲಿಂಗೇಗೌಡದೊಡ್ಡಿಯ ರೈತ ಶಿವಣ್ಣ ಅವರ ತೋಟದಲ್ಲಿ ಹೀರೇಕಾಯಿಯಂತೆ ಉದ್ದವಾದ ವಿಚಿತ್ರ ತೆಂಗಿನಕಾಯಿ ಬೆಳೆದು ಅಚ್ಚರಿ ಮೂಡಿಸಿದೆ.

Read Full Story
07:48 PM (IST) Aug 26

Karnataka News Live 26 August 2026'ಕಂಡೋರ ಮೆಚ್ಚಿಸೋಕೆ ಹೋಗ್ಬೇಡಿ' ಟಾಕ್ಸಿಕ್‌ ಬಗ್ಗೆ ನೆಗೆಟಿವ್‌ Review ಮಾಡುವವರ ಜನ್ಮ ಜಾಲಾಡಿದ All OK

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾಗೆ ಬರುತ್ತಿರುವ ನೆಗೆಟಿವ್ ವಿಮರ್ಶೆಗಳ ಬಗ್ಗೆ ಸಂಗೀತ ನಿರ್ದೇಶಕ ಆಲ್ ಓಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Read Full Story
07:35 PM (IST) Aug 26

Karnataka News Live 26 August 2026ಹಾವುಗಳ ಲೋಕದ ಈ ರಹಸ್ಯ ಗೊತ್ತಾದ್ರೆ ‘ಸೇಡು’ ಕಥೆಗಳೇ ಬದಲಾಗುತ್ತವೆ - ಇಲ್ಲಿದೆ ನಿಮಗೆ ಗೊತ್ತಿರದ ಸತ್ಯ

Snakes ತಮ್ಮ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಭಾವಿಸಿದಾಗ ಸಾಮಾನ್ಯವಾಗಿ ಆತ್ಮರಕ್ಷಣೆಗಾಗಿ ದಾಳಿ ಮಾಡುತ್ತವೆ. ಹಾವುಗಳು ಸೇಡು ತೀರಿಸಿಕೊಳ್ಳುತ್ತವೆ, ತಮ್ಮನ್ನು ಕೊಂದ ವ್ಯಕ್ತಿಯನ್ನು ಹುಡುಕಿಕೊಂಡು ಬರುತ್ತವೆ ಎಂಬ ನಂಬಿಕೆಗಳು ಜನರಲ್ಲಿ ಇದ್ದರೂ, ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ.

Read Full Story
07:25 PM (IST) Aug 26

Karnataka News Live 26 August 2026ನಾನು ಲಾಯಕ್ಕಿಲ್ಲ ಮಮ್ಮಿ, ಸಾಯೋಕೂ ಭಯವಾಗ್ತಿದೆ.. IIT ದೆಹಲಿ ವಿದ್ಯಾರ್ಥಿ ಕೇಸ್‌ಗೆ ರೋಚಕ ಟ್ವಿಸ್ಟ್.. ಸಾವಿಗೂ ಮುನ್ನ ಹೇಳಿದ್ದೇನು?

ಐಐಟಿ ದೆಹಲಿಯ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಆತ್ಮ*ತ್ಯೆಗೂ ಮುನ್ನ ತನ್ನ ವೈಫಲ್ಯದ ಬಗ್ಗೆ ತಾಯಿಯ ಮುಂದೆ ಅತ್ತು ನೋವು ತೋಡಿಕೊಂಡಿದ್ದ ಆಘಾತಕಾರಿ ವಿಷಯ ಹೊರಬಂದಿದೆ. ಕಾಲೇಜು ಆಡಳಿತ ಮಂಡಳಿಯು ಹಾಸ್ಟೆಲ್ ನೀಡದೆ ಮತ್ತು ವೈದ್ಯಕೀಯ ವರದಿಗಳನ್ನು ಒಪ್ಪದೆ ಆತನಿಗೆ ಮಾನಸಿಕ ಕಿರುಕುಳ ನೀಡಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

Read Full Story
07:05 PM (IST) Aug 26

Karnataka News Live 26 August 2026Success Story - ಬದುಕು ಬದಲಿಸಿದ ಒಂದು ಮೆಸೇಜ್ ಒಂದು ಮೆಸೇಜ್ ಬದಲಿಸಿತು ಬದುಕು; 17ರ ಹುಡುಗ 22ಕ್ಕೆ ಗಳಿಸಿದ್ದು 1 ಕೋಟಿ ರೂ.!

17 ವರ್ಷದ ಜೆಇಇ ಆಕಾಂಕ್ಷಿ ಆದಿತ್ಯ ಬನ್ಸಾಲ್, ಉದ್ಯಮಿ ರಾಜ್ ಶಮಾನಿಗೆ ಕಳುಹಿಸಿದ ಒಂದು ತಡರಾತ್ರಿಯ ಮೆಸೇಜ್‌ನಿಂದ ತನ್ನ ವೃತ್ತಿಜೀವನವನ್ನೇ ಬದಲಾಯಿಸಿಕೊಂಡನು. ಯಾವುದೇ ಪದವಿ ಅಥವಾ ಅನುಭವವಿಲ್ಲದಿದ್ದರೂ, ಈ ಅವಕಾಶದಿಂದಾಗಿ 45ಕ್ಕೂ ಹೆಚ್ಚು ಸಂಸ್ಥಾಪಕರೊಂದಿಗೆ ಕೆಲಸ ಮಾಡಿ, 22ನೇ ವಯಸ್ಸಿಗೆ 1 ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾದನು.
Read Full Story
06:46 PM (IST) Aug 26

Karnataka News Live 26 August 2026ಬೆಂಗಳೂರಲ್ಲಿ 1 ಕೋಟಿ ರೂ ಚಿನ್ನಾಭರಣ ಲೂಟಿ.. ನೇಪಾಳ ಗಡಿಯಲ್ಲಿ ಆರೋಪಿಗಳು ಲಾಕ್ ಆಗಿದ್ದು ಹೇಗೆ?

ನಂಬಿಕಸ್ಥ ಮನೆಯಾಳೇ ಕಳ್ಳತನಕ್ಕೆ ಇಳಿದ ಕೇಸ್ ಇದಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಕಿಡಿಗೇಡಿಗಳ ಗ್ಯಾಂಗ್ ಬರೋಬ್ಬರಿ ಒಂದು ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿತ್ತು. ಇದೀಗ ಆ ಗ್ಯಾಂಗ್ ಅರೆಸ್ಟ್ ಆಗಿದೆ.

Read Full Story
06:12 PM (IST) Aug 26

Karnataka News Live 26 August 2026Toxic - ರಾಕಿ ಭಾಯ್‌ನ ಈ ಲುಕ್‌ ಹಿಂದಿರುವವರು ಇವರೆ! ‘ಕೆಜಿಎಫ್’ನಿಂದ ‘ಟಾಕ್ಸಿಕ್’ವರೆಗೆ ಇವರದ್ದೇ ಕೈಚಳಕ!

'ಕೆಜಿಎಫ್' ರಾಕಿ ಬಾಯ್ ಮತ್ತು 'ಟಾಕ್ಸಿಕ್' ಸಿನಿಮಾದಲ್ಲಿ ನಟ ಯಶ್ ಅವರ ಟ್ರೆಂಡ್ ಸೆಟ್ಟರ್ ಕೇಶವಿನ್ಯಾಸದ ಹಿಂದಿರುವ ಮಾಂತ್ರಿಕ ಕೈಗಳು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರದ್ದು. ಯಶ್ ಅವರ ಪಾತ್ರಗಳಿಗೆ ಐಕಾನಿಕ್ ನೋಟ ನೀಡುವುದರ ಜೊತೆಗೆ, ಅಲೆಕ್ಸ್ ತಮ್ಮ ಸಲೂನ್ ಉದ್ಯಮದ ಮೂಲಕ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಯಶಸ್ವಿ ಉದ್ಯಮಿಯೂ ಹೌದು.

Read Full Story
05:53 PM (IST) Aug 26

Karnataka News Live 26 August 2026ಒಂದೇ ಒಂದು ಮೆಸೇಜ್‌ ನಟಿ ರುಕ್ಮಿಣಿ ವಸಂತ್ ಜೀವನವನ್ನೇ ಬದಲಿಸಿತು - ಇಂದು ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್!

Toxic Actress Rukmini Vasanth ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಡುವೆ ರುಕ್ಮಿಣಿ ವಸಂತ್ ತಮ್ಮ ಸಿನಿ ಜರ್ನಿಯ ಆರಂಭದ ದಿನಗಳಲ್ಲಿನ ಕುತೂಹಲಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

Read Full Story
05:14 PM (IST) Aug 26

Karnataka News Live 26 August 2026VB-G RAM G - ಹೊಟ್ಟೆಗೆ ಹಿಟ್ಟಿಲ್ಲ, ಕೈಗೆ ಕೆಲಸವಿಲ್ಲ; ಹೊಸ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಡ ಕೂಲಿ ಕಾರ್ಮಿಕರು!

ಜುಲೈ 1 ರಿಂದ ಜಾರಿಗೆ ಬಂದ 'ವಿಕ್ಸಿತ್ ಭಾರತ್ ಉದ್ಯೋಗ ಮಿಷನ್-ಗ್ರಾಮೀಣ' ಯೋಜನೆಯು, ಹಿಂದಿನ ಉದ್ಯೋಗ ಖಾತರಿ ಯೋಜನೆಯ ಸ್ಥಾನವನ್ನು ತುಂಬುವಲ್ಲಿ ವಿಫಲವಾಗಿದೆ. ಆಡಳಿತಾತ್ಮಕ ಗೊಂದಲ, ಅನುದಾನದ ಕೊರತೆ ಮತ್ತು ತಾಂತ್ರಿಕ ದೋಷಗಳಿಂದಾಗಿ ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ವಲಸೆಯ ಭೀತಿ ಎದುರಿಸುತ್ತಿದ್ದಾರೆ.
Read Full Story
05:03 PM (IST) Aug 26

Karnataka News Live 26 August 2026‘ಅರೇಂಜ್ ಮ್ಯಾರೇಜ್, ಆದರೆ ಲವ್ ಆಯ್ತು’ - ಪಾವನಾ ಜೊತೆಗಿನ ಮದುವೆ ಬಗ್ಗೆ ನಟ ಚಿಕ್ಕಣ್ಣ ಹೇಳಿದ್ದೇನು?

Kannada Comedy Actor Chikkanna ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ತಿಂಗಳ 29 ಮತ್ತು 30ರಂದು ಮದುವೆ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ. ಚಿಕ್ಕಣ್ಣ-ಪಾವನಾ ಮದುವೆಯ ಸಂಪೂರ್ಣ ವಿವರಗಳು ಮತ್ತು ನಟ ಹೇಳಿದ ಕುತೂಹಲಕಾರಿ ಮಾತುಗಳು ಇಲ್ಲಿವೆ.

Read Full Story
04:44 PM (IST) Aug 26

Karnataka News Live 26 August 2026ಖ್ಯಾತ ನಿರ್ದೇಶಕ ಇನ್ನಿಲ್ಲ, ಸ್ಟಂಟ್ ಹಾಕಿದ್ರೂ ಹೃದಯಾಘಾತ ಆಗಿದ್ದು ಏಕೆ? ಆ ಗುಟ್ಟು ಇಲ್ಲಿದೆ ನೋಡಿ!

ಕುಕು ಕೊಹ್ಲಿ ಕೇವಲ ನಿರ್ದೇಶಕರಾಗಿರಲಿಲ್ಲ, ಅವರು ಪ್ರೇಕ್ಷಕರ ನಾಡಿಮಿಡಿತ ಬಲ್ಲವರಾಗಿದ್ದರು. 'ಕೊಹ್ರಾಮ್', 'ಜುಲ್ಮಿ', 'ಯೇ ದಿಲ್ ಆಶಿಕಾನಾ' ನಂತಹ ಚಿತ್ರಗಳು ಇಂದಿಗೂ ಟಿವಿಯಲ್ಲಿ ಪ್ರಸಾರವಾದರೆ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಾರೆ. ಅಜಯ್ ದೇವಗನ್ ಎಂಬ ಸೂಪರ್ ಸ್ಟಾರ್ ಕೊಟ್ಟ ಈ 'ಗುರು'ವಿನ ನೆನಪು ಚಿತ್ರರಂಗದಲ್ಲಿ ಸದಾ ಅಮರ.

Read Full Story
04:39 PM (IST) Aug 26

Karnataka News Live 26 August 2026ದರ್ಶನ್‌ಗೆ ಮದುವೆಯ ಆಹ್ವಾನ ಪತ್ರಿಕೆ ನೀಡದೇ ಇರೋದಕ್ಕೆ ಕಾರಣ ತಿಳಿಸಿದ ನಟ ಚಿಕ್ಕಣ್ಣ!

ಹಾಸ್ಯನಟ ಚಿಕ್ಕಣ್ಣ, ಉದ್ಯಮಿ ಪಾವನಾ ಗೌಡ ಅವರನ್ನು ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಾನು ಸಾಕ್ಷಿಯಾಗಿರುವುದರಿಂದ ದರ್ಶನ್‌ ಅವರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.

Read Full Story
04:33 PM (IST) Aug 26

Karnataka News Live 26 August 2026Cricket - ವೈಭವ್, ಜೈಸ್ವಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ - ಬಿಸಿಸಿಐ, ಐಸಿಸಿಗೆ ದಿಗ್ಗಜ ಕ್ರಿಕೆಟಿಗನ ಕರೆ!

ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಅಸಿತಾ ಫೆರ್ನಾಂಡೊ ನಡುವೆ ನಡೆದ ಜಗಳ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಐಸಿಸಿ ವಿಧಿಸಿದ ಸಣ್ಣ ದಂಡದ ಬಗ್ಗೆ ಮಾಜಿ ಕ್ರಿಕೆಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಯುವ ಆಟಗಾರರಲ್ಲಿ ಶಿಸ್ತು ಮೂಡಿಸಲು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Read Full Story
04:13 PM (IST) Aug 26

Karnataka News Live 26 August 2026Mysuru Dasara - ಗಜಪಯಣಕ್ಕೆ ಚಾಲನೆ, ಕಾಡಿನಿಂದ ನಾಡಿಗೆ 9 ಆನೆಗಳು; ಕ್ಯಾಪ್ಟನ್ ಅಭಿಮನ್ಯುಗೆ ರಾಜಮರ್ಯಾದೆ ವಿದಾಯ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೊದಲ ಹಂತದ 9 ಆನೆಗಳ ಗಜಪಡೆ ಆಗಮಿಸಿದೆ. 6 ಬಾರಿ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ್ದರಿಂದ ಗೌರವಯುತ ವಿದಾಯ ನೀಡಲಾಗಿದ್ದು, ಈ ಬಾರಿ ದಸರಾ ಕಂಬಳ ಆಯೋಜನೆಯೂ ಖಚಿತವಾಗಿದೆ.
Read Full Story
04:13 PM (IST) Aug 26

Karnataka News Live 26 August 2026‘ಪ್ರೀತಿ ಅಪರೂಪ, ಅದನ್ನು ಕಳೆದುಕೊಳ್ಳಬೇಡಿ’ - ಹಾಗಾದ್ರೆ ಸಿಟಿ ಲೈಟ್ಸ್‌ ಈ ಹಾಡಿನ ವಿಶೇಷತೆ ಏನು?

City Lights ಚಿತ್ರದ 4ನೇ ಹಾಡು ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ಈ ಹಾಡನ್ನು ಮೊದಲು ತಮ್ಮ ತಾಯಿಗೆ ಕೇಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ‘ಸಿಟಿ ಲೈಟ್ಸ್‌’ನ ಈ ಪ್ರೇಮಗೀತೆಯಲ್ಲಿ ಅಂಥದ್ದೇನು ವಿಶೇಷ? ಸಿನಿಮಾ ಹಾಗೂ ಹಾಡಿನ ಸಂಪೂರ್ಣ ಕಥೆ ಇಲ್ಲಿದೆ.

Read Full Story
04:11 PM (IST) Aug 26

Karnataka News Live 26 August 2026ಕರ್ನಾಟಕದಲ್ಲಿ ಬಿಪಿ, ಶುಗರ್‌, ಬೊಜ್ಜು ಮಹಾಮಾರಿ - 10 ವರ್ಷಗಳಲ್ಲಿ ಬಿಪಿ ಭಾದಿತರು ಶೇ. 27 ರಷ್ಟು ಏರಿಕೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನಂತಹ ಸಾಂಕ್ರಾಮಿಕವಲ್ಲದ ರೋಗಗಳು ಆತಂಕಕಾರಿಯಾಗಿ ಹೆಚ್ಚಾಗಿವೆ.

Read Full Story
04:05 PM (IST) Aug 26

Karnataka News Live 26 August 2026Koppal - ಇತಿಮಿತಿಯಲ್ಲಿ ಯೋಚಿಸಿ ಹೆಜ್ಜೆ ಇಡಿ; ಸಚಿವ ಶಿವರಾಜ್ ತಂಗಡಗಿಗೆ ಸ್ವಪಕ್ಷದ ಹಿರಿಯ ನಾಯಕನ ಖಡಕ್ ಎಚ್ಚರಿಕೆ!

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸ್ವಪಕ್ಷದ ಸಚಿವ ಶಿವರಾಜ್ ತಂಗಡಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ಅವರನ್ನು 'ಸುಳ್ಳಿನ ಗುಡ್ಡ' ಎಂದು ಕರೆದು, 35 ವರ್ಷಗಳ ಹಿಂದಿನ ಫೈನಾನ್ಸ್ ಕಂಪನಿ ವಂಚನೆ ಪ್ರಕರಣವನ್ನು ನೆನಪಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Read Full Story
02:58 PM (IST) Aug 26

Karnataka News Live 26 August 2026ಮೊದಲ ದಿನವೇ ಹಲವು ದಾಖಲೆ ಪುಡಿಪುಡಿ.. 'ಗ್ಲೋಬಲ್ ಹಿಸ್ಟರಿ' ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್! ಮುಂದೇನು?

ಇದು ಒಬ್ಬ ಕನ್ನಡದ ನಟನ ಗ್ಲೋಬಲ್ ರೆಕಾರ್ಡ್ ಆಗಿದೆ. ಯಶ್ ಅಭಿನಯದ ಟಾಕ್ಸಿಕ್, ಕನ್ನಡದ ಜೊತೆಗೆ ಇಂಗ್ಲೀಷ್‌ನಲ್ಲಿಯೂ ಏಕ ಕಾಲದಲ್ಲಿ ನಿರ್ಮಾಣ ಆಗಿರೋ ಸಿನಿಮಾ. ಈ ಚಿತ್ರವು ಇನ್ನುಳಿದ ಭಾಷೆಗೆ ಡಬ್ಬಿಂಗ್ ಆಗಿದೆ. ಯಶ್ ಇಂಗ್ಲೀಷ್ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಹೀಗಾಗಿ, ಈ ಮೂಲಕ ಹಾಲಿವುಡ್‌ಗೂ ಯಶ್ ಎಂಟ್ರಿ ಕೊಟ್ಟಂತಾಗಿದೆ.

Read Full Story