03:18 PM (IST) Jul 21

Karnataka News Live 21 July 2026ನಮ್ಮ ತಾಯಿ ಭೂಮಿಯ ಒಡಲು ಸೇರಿದ್ದಾರೆ -ಅಮ್ಮನ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಅಗಲಿದ ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ನಮ್ಮ ತಾಯಿ ಎಂದೂ ಮಾಧ್ಯಮಗಳ ಮುಂದೆ ಬಂದವಳಲ್ಲ. ಅವರೀಗ ಭೂಮಿ ತಾಯಿಯ ಒಡಲು ಸೇರಿದ್ದಾರೆ, ಶಿವ-ವಿಷ್ಣುವಿನ ಪಾದ ಸೇರಿದ್ದಾರೆ ಎಂದು ಭಾವುಕರಾದರು.

Read Full Story
03:18 PM (IST) Jul 21

Karnataka News Live 21 July 2026Bengaluru - ಸಮಗ್ರ ಅಭಿವೃದ್ಧಿ ಟೆಂಡರ್ ರದ್ದು, ಶೀಘ್ರದಲ್ಲೇ ಔಟರ್ ರಿಂಗ್ ರೋಡ್ ಒತ್ತುವರಿ ತೆರವಿಗೆ ಜಿಬಿಎ ಸಿದ್ಧತೆ

ಬೆಂಗಳೂರಿನ ಹೊರವರ್ತುಲ ರಸ್ತೆಯ ಸಮಗ್ರ ಅಭಿವೃದ್ಧಿ ಟೆಂಡರ್‌ ರದ್ದುಗೊಂಡಿದ್ದು, ಮೊದಲು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಜಿಬಿಎ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಟ್ರಾಫಿಕ್ ಜಾಮ್ ಮತ್ತು ಪ್ರವಾಹಕ್ಕೆ ಕಾರಣವಾದ ರಸ್ತೆ ಹಾಗೂ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದ ನಂತರವೇ ಹೊಸ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.
Read Full Story
02:42 PM (IST) Jul 21

Karnataka News Live 21 July 2026ಬೆಂಗಳೂರು ಉಪನಗರ ರೈಲು ಯೋಜನೆಗೆ ಬೂಸ್ಟ್ - ಮತ್ತಿಕೆರೆ to ಯಶವಂತಪುರ ₹199 ಕೋಟಿ ವೆಚ್ಚದ ‘ಡಬಲ್ ಡೆಕ್ಕರ್’ ಕಾರಿಡಾರ್!

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಉಪನಗರ ರೈಲು ಯೋಜನೆಯಡಿ (BSRP) ಮತ್ತಿಕೆರೆ ಮತ್ತು ಯಶವಂತಪುರ ನಡುವೆ 'ಡಬಲ್ ಡೆಕ್ಕರ್' ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ವಿಶಿಷ್ಟ ಮಾದರಿಯಲ್ಲಿ ರಸ್ತೆ ಮೇಲ್ಸೇತುವೆಯ ಮೇಲೆ ಉಪನಗರ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಇದಕ್ಕಾಗಿ ಕೆ-ರೈಡ್ ₹199 ಕೋಟಿ ವೆಚ್ಚದ ಹೊಸ ಟೆಂಡರ್ ಆಹ್ವಾನಿಸಿದೆ. ಈ ಯೋಜನೆಯು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ.
Read Full Story
02:33 PM (IST) Jul 21

Karnataka News Live 21 July 2026ಪತ್ನಿ, ಮಕ್ಕಳ ಬಾಯಿಗೆ ಪ್ಲಾಸ್ಟರ್‌ ಹಚ್ಚಿ ಕೊಂದ ಪತಿ.. ಮೈಸೂರಲ್ಲಿ ಪಾಪದ ಕೃತ್ಯ

ಮೈಸೂರು ಜಿಲ್ಲೆಯ ಹುಣಸೂರಿನ ನ್ಯೂ ಮಾರುತಿ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ, ತಾನೂ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಈ ಕೃತ್ಯಕ್ಕೆ ಕೌಟುಂಬಿಕ ಕಲಹ ಅಥವಾ ಆರ್ಥಿಕ ಸಂಕಷ್ಟ ಕಾರಣವಿರಬಹುದೆಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Read Full Story
01:45 PM (IST) Jul 21

Karnataka News Live 21 July 2026ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಬಿಗ್ ಶಾಕ್ - ಕೋರ್ಟ್‌ನಿಂದ ಸಮನ್ಸ್..!

ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

Read Full Story
01:21 PM (IST) Jul 21

Karnataka News Live 21 July 2026ಚೂಡಿದಾರ್ ಒಳಗಿತ್ತು 26 ಕೋಟಿ ರೂ. ಮೌಲ್ಯದ ಸಾವಿನ ಪುಡಿ! ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ. ಮಹಿಳೆಯರ ಚೂಡಿದಾರ್‌ಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಎಂ‌ಡಿಎಂಎ ಡ್ರಗ್ಸ್ ಅಡಗಿಸಿಟ್ಟು ಸಾಗಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನೈಜೀರಿಯಾ ಮೂಲದ ವ್ಯಕ್ತಿಯ ಕೈವಾಡವೂ ಬೆಳಕಿಗೆ ಬಂದಿದೆ.
Read Full Story
11:48 AM (IST) Jul 21

Karnataka News Live 21 July 2026ಬೆಂಗಳೂರಿನ 8 ಕಡೆ ಇಡಿ ದಾಳಿ - ಐಸಿಸ್ ಉಗ್ರ ಸಂಘಟನೆಗೆ ಫಂಡಿಂಗ್ ಜಾಲ ಪತ್ತೆ, ವಿದೇಶದಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿ!

ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ಐಸಿಸ್‌ಗೆ ಹಣಕಾಸು ನೆರವು ನೀಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ್ದಾರೆ. ಎನ್‌ಐಎ ತನಿಖೆಯ ಆಧಾರದ ಮೇಲೆ, 'ಇಕ್ರಾ ವೆಲ್ಫೇರ್ ಟ್ರಸ್ಟ್' ಮತ್ತು 'ಜಿಎಫ್‌ಎಂ ಟ್ರಸ್ಟ್' ಮೂಲಕ ಸಿರಿಯಾದಲ್ಲಿರುವ ಐಸಿಸ್ ಶಿಬಿರಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿದೆ.

Read Full Story
11:30 AM (IST) Jul 21

Karnataka News Live 21 July 2026ಆಲಮಟ್ಟಿ ಡ್ಯಾಂಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ, ರಾಜ್ಯದ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟು?

ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ವಿಜಯಪುರ ಜಿಲ್ಲೆಯ ನಿಡಗುಂಡಿ ತಾಲೂಕಿನಲ್ಲಿರುವ ಆಲಮಟ್ಟಿ ಲಾಲ್‌ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿದರು.

Read Full Story
11:15 AM (IST) Jul 21

Karnataka News Live 21 July 2026ಒಂದು ವಾರಕ್ಕೆ 16% ಏರಿಕೆ ಕಂಡ ಜಾಗತಿಕ ಕಚ್ಚಾತೈಲ ಬೆಲೆ, ಭಾರತ ಸೇರಿದಂತೆ ಇಡೀ ವಿಶ್ವಕ್ಕೆ ಹಣದುಬ್ಬರದ ಭೀತಿ!

ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಗಗನಕ್ಕೇರಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದು ಭಾರತದಲ್ಲಿ ಇಂಧನ ಕಂಪನಿಗಳಿಗೆ ಚಿಲ್ಲರೆ ಮಾರಾಟದಲ್ಲಿ ಭಾರಿ ನಷ್ಟ ಉಂಟುಮಾಡುತ್ತಿದೆಯಾದರೂ, ತೈಲ ಸಂಸ್ಕರಣಾ ಲಾಭಾಂಶವು ಕಂಪನಿಗಳಿಗೆ ಆಸರೆಯಾಗಿದೆ. ಈ ಬಿಕ್ಕಟ್ಟು ಜಾಗತಿಕ ಹಣದುಬ್ಬರ ಮತ್ತು ಕರೆನ್ಸಿ ಮೌಲ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವನ್ನು ಸೃಷ್ಟಿಸಿದೆ.
Read Full Story
10:55 AM (IST) Jul 21

Karnataka News Live 21 July 2026ರಾಜ್ಯ ಸರ್ಕಾರಕ್ಕೆ ಬೇಡವಾಯ್ತಾ ಎಲೆಕ್ಟ್ರಿಕ್‌ ಬಸ್!? ಬೆಂಗಳೂರಿಗೆ ಮಂಜೂರಾಗಿದ್ದ 4,500 ಇ-ಬಸ್‌ಗಳು ಕೈತಪ್ಪುವ ಭೀತಿ!

ಕೇಂದ್ರ ಸರ್ಕಾರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಗಳೂರಿಗೆ ಮಂಜೂರಾಗಿದ್ದ 4,500 ಎಲೆಕ್ಟ್ರಿಕ್ ಬಸ್‌ಗಳು, ರಾಜ್ಯ ಸರ್ಕಾರದ ವಿಳಂಬ ನೀತಿ ಮತ್ತು ಅನುಮೋದನೆಯ ಕೊರತೆಯಿಂದಾಗಿ ಬೇರೆ ರಾಜ್ಯಗಳ ಪಾಲಾಗುವ ಆತಂಕ ಎದುರಿಸುತ್ತಿವೆ. ಬಿಎಂಟಿಸಿ ಇನ್ನೂ ಕಾರ್ಯಾದೇಶ ನೀಡದ ಕಾರಣ, ಕೋಟ್ಯಂತರ ರೂಪಾಯಿ ಸಬ್ಸಿಡಿ ಸಹಿತ ಈ ಬೃಹತ್ ಯೋಜನೆ ಕೈತಪ್ಪುವ ಸಾಧ್ಯತೆಯಿದೆ.
Read Full Story
09:27 AM (IST) Jul 21

Karnataka News Live 21 July 2026ಸಿಕ್ಕಿಂನಲ್ಲಿ ಭೀಕರ ದುರಂತ - ಸುರಂಗದಲ್ಲಿ ಸ್ಫೋಟ, ಭೂಕುಸಿದು 7 ಸಾವು, 18 ಮಂದಿ ನಾಪತ್ತೆ

ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಮೀಥೇನ್ ಅನಿಲ ಸ್ಫೋಟಗೊಂಡು ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಫೋಟದಿಂದ ಭೂಕುಸಿತ ಉಂಟಾಗಿದ್ದು, ಇನ್ನೂ 18 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದು, ವಿಷಕಾರಿ ಅನಿಲದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
Read Full Story
09:21 AM (IST) Jul 21

Karnataka News Live 21 July 2026ಶರಾವತಿ ಪಂಪ್ಡ್‌ ಸ್ಟೋರೇಜ್‌ ಶೀಘ್ರದಲ್ಲೇ ಶುರು ಮಾಡ್ತೇವೆ - ಮುಖ್ಯಮಂತ್ರಿ ಡಿಕೆ ಶಿವಕುಮಾರ್

ವಿರೋಧದ ನಡುವೆಯೂ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ, ಎಲ್ಲಾ ಅನುಮತಿಗಳನ್ನು ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುವುದು ಮತ್ತು ಹಿಂದಿನ ಬಿಜೆಪಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
Read Full Story
09:19 AM (IST) Jul 21

Karnataka News Live 21 July 2026ಸರೆಗಮಪ ಕನ್ನಡ ಶೋ ಜ್ಯೂರಿ ಮೋಹನ್‌ರ ಏಕೈಕ ಪುತ್ರ ಹೃತಿಕ್‌ ಇನ್ನಿಲ್ಲ - ಚಿಕ್ಕ ವಯಸ್ಸಿನವರಿಗೆ ಹೀಗಾದ್ರೆ...!

Saregamapa Kannada Show Mohan Son Hrithik: ಇತ್ತೀಚೆಗೆ ಅಪ*ಘಾತ, ಆತ್ಮ*ಹತ್ಯೆ, ಹೃದಯಾಘಾತದ ಕಾರಣಕ್ಕೆ ದಿನಕ್ಕೆ ಒಂದಿಷ್ಟು ಜನರು ಸಾಯುತ್ತಿದ್ದಾರೆ. ಅದರಲ್ಲಿಯೂ ಚಿಕ್ಕ ವಯಸ್ಸಿನಲ್ಲಿರುವವರು ಸಾಯೋದು ಹೆಚ್ಚಾಗುತ್ತಿದೆ. ಸರಿಗಮಪ ಶೋ ಜ್ಯೂರಿ ಮೋಹನ್‌ ಅವರ ಮಗ ಕೂಡ ನಿಧನರಾಗಿದ್ದಾರಂತೆ.

Read Full Story
09:17 AM (IST) Jul 21

Karnataka News Live 21 July 2026ತನ್ನದೇ ಚಿನ್ನದಂಗಡಿಗೆ ಕನ್ನ ಹಾಕಿ ತಗ್ಲಾಕೊಂಡ ಮಾಲೀಕ ಕೃಷ್ಣಾನಂದ ಹಿಂಡಲಗಾ ಜೈಲಿಗೆ ಶಿಫ್ಟ್

ಬೆಳಗಾವಿಯಲ್ಲಿ ತನ್ನದೇ ಚಿನ್ನದಂಗಡಿಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕ ಕೃಷ್ಣಾನಂದ ವೇರ್ಣೇಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜನರಿಗೆ ಮೋಸ ಮಾಡುವ ಉದ್ದೇಶದಿಂದ ಕಳ್ಳತನದ ನಾಟಕವಾಡಿದ್ದು, ಆತನ ಸ್ಕೂಟಿಯಲ್ಲೇ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
Read Full Story
08:18 AM (IST) Jul 21

Karnataka News Live 21 July 2026ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; VTU-Google ನಡುವೆ ಐತಿಹಾಸಿಕ ಒಪ್ಪಂದ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಮತ್ತು ಗೂಗಲ್ ನಡುವೆ ಐತಿಹಾಸಿಕ ಒಪ್ಪಂದ ಏರ್ಪಟ್ಟಿದೆ. ಈ ಸಹಭಾಗಿತ್ವದ ಮೂಲಕ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳಲ್ಲಿ ತರಬೇತಿ ನೀಡಿ, ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸಲಾಗುವುದು.

Read Full Story
08:10 AM (IST) Jul 21

Karnataka News Live 21 July 2026CJP Protest - ಮೋದಿ ದುರ್ಬಲ ಪ್ರಧಾನಿ, ದುಷ್ಟರ ರಕ್ಷಕ -ಸಿದ್ದರಾಮಯ್ಯ ಕಿಡಿ

ನೀಟ್‌ ಪರೀಕ್ಷೆ ಹಗರಣದ ಕುರಿತು ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ. ಭ್ರಷ್ಟ ಶಿಕ್ಷಣ ಮಂತ್ರಿಯ ವಿರುದ್ಧ ಕ್ರಮ ಕೈಗೊಳ್ಳದ ಮೋದಿ ದುರ್ಬಲ ಪ್ರಧಾನಿ ಎಂದು ಸಾಬೀತುಪಡಿಸಿದ್ದಾರೆ ಎಂದಿರುವ ಅವರು, ವಿದ್ಯಾರ್ಥಿಗಳು ಮತ್ತು ಪೋಷಕರ ಕಣ್ಣೀರಿನ ಶಾಪದಿಂದಲೇ ಸರ್ಕಾರ ಪತನಗೊಳ್ಳಲಿದೆ..

Read Full Story
07:30 AM (IST) Jul 21

Karnataka News Live 21 July 2026Bagalkote - 19 ವರ್ಷ ವಯೋಮಿತಿಯ KSCA ಕ್ರಿಕೆಟ್‌ಗೆ ಮಹಾಲಿಂಗಪುರದ ದಿಶಾ ಶಿರೋಳ ಆಯ್ಕೆ

ಮಹಾಲಿಂಗಪುರದ ನಿವಾಸಿ ದಿಶಾ ಶಿರೋಳ ಅವರು 19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್‌ನ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಆಡುವ ಮೂಲಕ ಇವರು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Read Full Story
07:15 AM (IST) Jul 21

Karnataka News Live 21 July 2026ಉತ್ಖನನ ವೇಳೆ 30ಕ್ಕೂ ಅಧಿಕ ರಾವಣನ ವಿಗ್ರಹಗಳು ಪತ್ತೆ! ಇತಿಹಾಸ ತಜ್ಞರಲ್ಲಿ ಆಶ್ಚರ್ಯ

ರಾವಣನ 35ಕ್ಕೂ ಹೆಚ್ಚು ಮೂರ್ತಿಗಳು ಉತ್ಖನನದ ವೇಳೆ ಪತ್ತೆಯಾಗಿವೆ. ಭಾರತೀಯ ಸರ್ವೇಕ್ಷಣಾ ಇಲಾಖೆಗೂ 15-20 ವಿಗ್ರಹ ದೊರಕಿದರೆ, ರಂಗರಾಜು ಅವರಿಗೂ ಅಷ್ಟೇ ಪ್ರಮಾಣದ ವಿಗ್ರಹಗಳು ದೊರಕಿದೆ.

Read Full Story
07:11 AM (IST) Jul 21

Karnataka News Live 21 July 2026ಮೈಸೂರು - ಗಿರ್ ಹಸುವೊಂದು ಎರಡು ತಲೆ, ಎರಡು ಬಾಲದ ಹೆಣ್ಣು ಕರುವಿಗೆ ಜನ್ಮ ನೀಡಿ ಅಚ್ಚರಿ!

ಮೈಸೂರಿನ ಕೆ.ಆರ್.ನಗರದಲ್ಲಿ ಗಿರ್ ತಳಿಯ ಹಸುವೊಂದು ಎರಡು ತಲೆ ಮತ್ತು ಎರಡು ಬಾಲಗಳಿರುವ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಆದರೆ, ಜನಿಸಿದ ಕೆಲವೇ ಕ್ಷಣಗಳಲ್ಲಿ ಆ ವಿಚಿತ್ರ ಕರು ಮೃತಪಟ್ಟಿದ್ದು, ಮಾಲೀಕರು ಪೂಜೆ ಸಲ್ಲಿಸಿ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
Read Full Story
07:02 AM (IST) Jul 21

Karnataka News Live 21 July 2026Shivamogga - ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ತಂದೆಯನ್ನ ರಕ್ಷಿಸಿದ 9 ವರ್ಷದ ಮಗ ನಂದನ್

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಫಿಟ್ಸ್‌ ಬಂದು ಹೊಳೆಗೆ ಬಿದ್ದ ತಂದೆಯನ್ನು, 9 ವರ್ಷದ ಬಾಲಕ ನಂದನ್ ಸಮಯಪ್ರಜ್ಞೆ ಮೆರೆದು ಸ್ಥಳೀಯರ ಸಹಾಯದಿಂದ ರಕ್ಷಿಸಿದ್ದಾನೆ. ಮಗನ ಕೂಗಿಗೆ ಓಗೊಟ್ಟು ಬಂದ ಸ್ಥಳೀಯರು ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ಚಂದ್ರು ಅವರನ್ನು ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ.
Read Full Story