10:11 PM (IST) Jul 15

Karnataka News Live 15 July 2026ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪ - ಯುವಕನ ಅಪಹರಿಸಿ ಹಲ್ಲೆ, ಬೇಲೂರಲ್ಲಿ ಭಾರೀ ಘರ್ಷಣೆ

Hassan News: ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ.

Read Full Story
09:36 PM (IST) Jul 15

Karnataka News Live 15 July 2026ಕಳಪೆ ಗುಣಮಟ್ಟದ ಕಾನೂನುಬಾಹಿರ ಸೊಳ್ಳೆ ಅಗರಬತ್ತಿ ಬಳಕೆ ಡೆಂಗ್ಯೂನಷ್ಟೇ ಅಪಾಯಕಾರಿ

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಂಟಾರ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡ 70ರಷ್ಟು ವೈದ್ಯರ ಎಚ್ಚರಿಕೆ

ಪ್ರತಿ ರಾತ್ರಿ ಹಚ್ಚುವ ಕಳಪೆ ಸೊಳ್ಳೆ ಅಗರಬತ್ತಿ, ಡೆಂಗ್ಯೂ ಉಂಟುಮಾಡುವ ಸೊಳ್ಳೆಗಿಂತ ಅಪಾಯಕಾರಿ

Read Full Story
08:51 PM (IST) Jul 15

Karnataka News Live 15 July 2026'ರಣಬಲಿ' ಸೆಟ್‌ನಲ್ಲಿ ಏನೋ ಭಯಾನಕ ನಡೀತಿದೆ ಎಂದ ರಶ್ಮಿಕಾ - ಅದು ದೈವಿಕ ಎಂದ ವಿಜಯ್!

ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ 'ರಣಬಲಿ' ಚಿತ್ರದ ಶೂಟಿಂಗ್‌ನಿಂದ ಒಂದು ಇಂಟರೆಸ್ಟಿಂಗ್ ಝಲಕ್ ಹಂಚಿಕೊಂಡಿದ್ದಾರೆ. ಇದರಲ್ಲಿ 'ತುಂಬಾ ಭಯಾನಕವಾದದ್ದು' ಏನೋ ನಡೆಯುತ್ತಿದೆ ಎಂದು ಕುತೂಹಲ ಕೆರಳಿಸಿದ್ದಾರೆ.

Read Full Story
08:36 PM (IST) Jul 15

Karnataka News Live 15 July 2026ಬೆಂಗಳೂರಿನಿಂದಲೇ ಶುರು, ಇನ್ಮುಂದೆ ಇನ್ಸ್‌ಟಾಮಾರ್ಟ್‌ನಲ್ಲೇ ಬುಕ್‌ ಮಾಡಬಹುದು ಗ್ಯಾಸ್‌ ಸಿಲಿಂಡರ್‌!

ಇನ್‌ಸ್ಟಾಮಾರ್ಟ್, ಹೆಚ್‌ಪಿಸಿಎಲ್ ಸಹಯೋಗದೊಂದಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಆನ್-ಡಿಮಾಂಡ್ ವಿತರಣೆಯನ್ನು ಆರಂಭಿಸಿದೆ. ಈ ಸೇವೆಯಡಿ, ಗ್ರಾಹಕರು 'ಹೆಚ್‌ಪಿ ನವ್ಯ' 10 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳನ್ನು ಇನ್‌ಸ್ಟಾಮಾರ್ಟ್ ಆ್ಯಪ್ ಮೂಲಕ ಆರ್ಡರ್ ಮಾಡಬಹುದು.

Read Full Story
08:25 PM (IST) Jul 15

Karnataka News Live 15 July 2026'ಕೆಟ್ಟ ಅಭ್ಯಾಸ ಬಿಟ್ಟುಬಿಡಿ, ಆಗ ನೀವೇ ರಾಜ' - ಚಾಣಕ್ಯ ನೀತಿ, ಶ್ರೀಕೃಷ್ಣನ ಸಂದೇಶ ಉಲ್ಲೇಖಿಸಿದ ಜಗ್ಗೇಶ್

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರೇರಣಾದಾಯಕ ಬರಹಗಳ ಮೂಲಕವೂ ಸಾಕಷ್ಟು ಗಮನ ಸೆಳೆಯುತ್ತಾರೆ.

Read Full Story
07:58 PM (IST) Jul 15

Karnataka News Live 15 July 2026'ಹೆಣ್ಣಾಗಿ ಹುಟ್ಟಿದ್ದೇ ಶಾಪ ಅನಿಸುತ್ತಿದೆ' - ಟ್ರೋಲ್‌ಗಳಿಗೆ ಕೃಷಿ ತಾಪಂಡ ಖಡಕ್ ತಿರುಗೇಟು

Krishi Thapanda YouTube Vlog: ಮೊದಲೇ ಸಾಕಷ್ಟು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಿದ್ದ ಕನ್ನಡ ನಟಿ ಹಾಗೂ 'ಬಿಗ್ ಬಾಸ್' ಖ್ಯಾತಿಯ ಕೃಷಿ ತಾಪಂಡ ಇದೀಗ ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದಾರೆ.

Read Full Story
07:53 PM (IST) Jul 15

Karnataka News Live 15 July 2026₹36 ಸಾವಿರ ಸಂಬಳದಲ್ಲೂ ಸಮಾಜಸೇವೆ... ಸಂಬಳದ ಅರ್ಧದಷ್ಟು ಹಣವನ್ನು ದಾನ ಮಾಡುವ ಯುವ ಡೆಲಿವರಿ ಬಾಯ್‌!

ಸ್ವಂತ ಸೂರಿಲ್ಲದೆ ರಸ್ತೆಯಲ್ಲೇ ಬದುಕುತ್ತಿರುವ ದೆಹಲಿಯ ಡೆಲಿವರಿ ಬಾಯ್ ಆಕಾಶ್ ಸರೋಜ್, ತಮ್ಮ ದಿನದ ಗಳಿಕೆಯ ₹1200 ರಲ್ಲಿ ₹500 ರೂಪಾಯಿಯನ್ನು ಹಸಿದವರ ಹೊಟ್ಟೆ ತುಂಬಿಸಲು ಬಳಸುತ್ತಿದ್ದಾರೆ. ತೀರಿಕೊಂಡ ತಂದೆಯ ಮೌಲ್ಯಗಳನ್ನು ಗೌರವಿಸಲು ಅವರು ಈ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಯಾವುದೇ ಹೊರಗಿನ ಹಣಕಾಸಿನ ನೆರವಿಲ್ಲದೆ, ಸ್ವಂತ ದುಡಿಮೆಯಿಂದಲೇ ಈ ಕಾರ್ಯ ಮಾಡುತ್ತಿರುವ ಅವರ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Read Full Story
06:54 PM (IST) Jul 15

Karnataka News Live 15 July 2026ಇನ್ನು ಪಾರಸಿಕ ಜೈನರುದ್ಯಾನ ಮಾತ್ರವಲ್ಲ, ಬೌದ್ಧರುದ್ಯಾನವೂ ಕೂಡಾ - ನಾಡಗೀತೆ ಬಗ್ಗೆ ಮಹದೇವಪ್ಪ ಹೇಳಿದ್ದೇನು?

ಕರ್ನಾಟಕ ನಾಡಗೀತೆಯಲ್ಲಿ 'ಬೌದ್ಧ' ಪದವನ್ನು ಮರು ಸೇರ್ಪಡೆ ಮಾಡುವ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

Read Full Story
06:50 PM (IST) Jul 15

Karnataka News Live 15 July 2026ಸಿಲಿಕಾನ್ ಸಿಟಿ ಟ್ರಾಫಿಕ್‌ಗೆ ಬಿಗ್ ಸರ್ಜರಿ!; ಹಗಲು ಹೊತ್ತಿನಲ್ಲಿ ಭಾರಿ ವಾಹನಗಳಿಗೆ ಬರೋಬ್ಬರಿ 14 ಗಂಟೆ ನೋ-ಎಂಟ್ರಿ!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ಸಂಚಾರಿ ಪೊಲೀಸರು ಹೊಸ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರ ಅಡಿಯಲ್ಲಿ, ಭಾರಿ ಮತ್ತು ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳು ಹಾಗೂ ಖಾಸಗಿ ಬಸ್‌ಗಳಿಗೆ ಹಗಲಿನ ವೇಳೆ 14 ಗಂಟೆಗಳ ಕಾಲ ನಗರ ಪ್ರವೇಶವನ್ನು ನಿರ್ಬಂಧಿಸಲು ಯೋಜಿಸಲಾಗಿದೆ.

Read Full Story
06:12 PM (IST) Jul 15

Karnataka News Live 15 July 2026ತಮಿಳುನಾಡಿಗೆ ಹರಿಯುತ್ತಿದ್ದ ನೀರು ತಡೆಯಲು ಗ್ರಾಮಸ್ಥರೇ ಮುಂದಾದರು - ಚಾಮರಾಜನಗರದಲ್ಲಿ ಅನನ್ಯ ಪ್ರಯತ್ನ

Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..

Read Full Story
06:04 PM (IST) Jul 15

Karnataka News Live 15 July 2026Men-Women Relationship - ಮಹಿಳೆಯರ ಈ ಸಮಸ್ಯೆಗಳನ್ನು ಹೆಚ್ಚಿನ ಪುರುಷರು ಅರ್ಥಮಾಡಿಕೊಳ್ಳುವುದೇ ಇಲ್ಲ!

ಸಂಬಂಧದಲ್ಲಿ ಕೇವಲ ಪ್ರೀತಿ ಇದ್ದರೆ ಸಾಲದು, ಅಲ್ಲಿ ಪರಸ್ಪರರ ಮೌನವನ್ನು ಅರ್ಥಮಾಡಿಕೊಳ್ಳುವ ಸಹಾನುಭೂತಿ ಇರಬೇಕು. ಪುರುಷರು ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಸಾರ ಎಂಬ ನೌಕೆ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗುತ್ತದೆ. ಯಾವುದು ಅದು ನೋಡಿ..

Read Full Story
05:26 PM (IST) Jul 15

Karnataka News Live 15 July 2026ರೈತರೇ ಭೂಮಿಯ ಕಳೆ ತೆಗೆಯಲು ಇನ್ನು ಬೇರೆ ಮಾರ್ಗ ಬಳಸಿ, ಪ್ರಖ್ಯಾತ Paraquat Dichloride ಶೀಘ್ರದಲ್ಲೇ ಬ್ಯಾನ್‌!

ತೀವ್ರ ವಿಷಕಾರಿ 'ಪ್ಯಾರಾಕ್ವಾಟ್ ಡೈಕ್ಲೋರೈಡ್' ಕಳೆನಾಶಕವನ್ನು ಕೇಂದ್ರ ಸರ್ಕಾರ ನಿಷೇಧಿಸಲು ಮುಂದಾಗಿದೆ. ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲಿನ ಗಂಭೀರ ಅಪಾಯಗಳನ್ನು ಪರಿಗಣಿಸಿ, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಈ ಕರಡು ಆದೇಶ ಹೊರಡಿಸಲಾಗಿದೆ.

Read Full Story
05:24 PM (IST) Jul 15

Karnataka News Live 15 July 2026ಅಪ್ಪನ ಆಸೆಯಂತೆ ಬಿಜಿನೆಸ್​ ಶುರು ಮಾಡಿದ ಅಪ್ಪು ಪುತ್ರಿ ವಂದಿತಾ - ಏನಿದು 'ನುಕಾಸ್​' ಕೆಫೆ

ನಟ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ, ತಂದೆಯ ಆಸೆಯಂತೆ 'ನುಕಾಸ್ ಕೆಫೆ' ಹೋಮ್ ಬೇಕರಿ ಉದ್ಯಮವನ್ನು ಆರಂಭಿಸಿದ್ದಾರೆ. ಅಪ್ಪು ಪ್ರೀತಿಯಿಂದ ಕರೆಯುತ್ತಿದ್ದ 'ನುಕ್ಕಿ' ಎಂಬ ಅಡ್ಡ ಹೆಸರನ್ನೇ ತಮ್ಮ ಬ್ರ್ಯಾಂಡ್‌ಗೆ ಇಟ್ಟಿರುವ ಅವರು, ಮನೆಯಲ್ಲಿಯೇ ಬೇಕರಿ ತಿನಿಸುಗಳನ್ನು ತಯಾರಿಸುತ್ತಿದ್ದಾರೆ.

Read Full Story
04:56 PM (IST) Jul 15

Karnataka News Live 15 July 2026ಗರ್ಭಿಣಿ ಸಮಂತಾರ ವೆಲ್‌ನೆಸ್ ವೆಕೇಷನ್ - ಪತಿ ರಾಜ್ ಜೊತೆಗಿನ ಕ್ಯೂಟ್ ಫೋಟೋಸ್ ವೈರಲ್

ನಟಿ ಸಮಂತಾ ಸದ್ಯದಲ್ಲೇ ತಾಯಿಯಾಗುತ್ತಿದ್ದು, ಪತಿ ರಾಜ್ ನಿಡಿಮೋರು ಜೊತೆ 'ವೆಲ್‌ನೆಸ್' ವೆಕೇಷನ್‌ಗೆ ತೆರಳಿದ್ದಾರೆ. ಈ ಭಾವಿ ಪೋಷಕರು ಒಟ್ಟಿಗೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Read Full Story
04:40 PM (IST) Jul 15

Karnataka News Live 15 July 2026ಕಾಯುವಿಕೆಗೆ ಬ್ರೇಕ್, ದಳಪತಿ ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಜನ ನಾಯಗನ್' ರಿಲೀಸ್ ಡೇಟ್ ಫಿಕ್ಸ್

ದಳಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ಜುಲೈ 23 ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ.

Read Full Story
04:39 PM (IST) Jul 15

Karnataka News Live 15 July 2026ಸಿಲಿಕಾನ್ ಸಿಟಿ ಹವಾಮಾನ ಇತಿಹಾಸದಲ್ಲಿಯೇ 112 ವರ್ಷಗಳ ಹಳೆಯ ದಾಖಲೆ ಬ್ರೇಕ್, ಜುಲೈ ಬಿಸಿಲಿಗೆ ಬೆಂದ ಬೆಂಗಳೂರು!

ಬೆಂಗಳೂರಿನಲ್ಲಿ ಜುಲೈ 112 ವರ್ಷಗಳಲ್ಲೇ ಅತ್ಯಧಿಕ 33.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ದುರ್ಬಲಗೊಂಡ ನೈಋತ್ಯ ಮಾನ್ಸೂನ್ ಮತ್ತು ಎಲ್ ನಿನೊದಂತಹ ಜಾಗತಿಕ ಹವಾಮಾನ ವಿದ್ಯಮಾನಗಳು ಈ ಅಸಾಮಾನ್ಯ ತಾಪಮಾನ ಏರಿಕೆಗೆ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ.

Read Full Story
04:26 PM (IST) Jul 15

Karnataka News Live 15 July 2026ಕಣ್ಣೀರಿನ ಲೆಕ್ಕ ಕೇಳಬೇಡಿ, ಅಜ್ಜಿ ಮೇಲಿನ ನನ್ನ ಪ್ರೀತಿ ಅಳೆಯಬೇಡಿ.. ಟ್ರೋಲ್‌ಗೆ ಬೇಸರಗೊಂಡ ಎಸ್‌ ಜಾನಕಿ ಮೊಮ್ಮಗಳು ಅಪ್ಸರಾ

ಅಪ್ಸರಾ ಅವರ ಪೋಸ್ಟ್‌ನಲ್ಲಿ ಅಡಗಿರುವ ಅತಿದೊಡ್ಡ ನೋವೆಂದರೆ ಅವರ ಅಕ್ಕ ವರ್ಷಾ ಅವರ ನೆನಪು. ಅಜ್ಜಿಗೆ ತನ್ನ ಮೊಮ್ಮಕ್ಕಳಲ್ಲಿ ಅತಿ ಹೆಚ್ಚು ಪ್ರಿಯವಾಗಿದ್ದವಳು ವರ್ಷಾ. ಅವರಿಬ್ಬರ ನಡುವಿನ ಸಂಬಂಧ ವರ್ಣನಾತೀತವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು...

Read Full Story
04:21 PM (IST) Jul 15

Karnataka News Live 15 July 2026380 ಕೋಣಗಳು, 700 ವರ್ಷದ ಇತಿಹಾಸ... 'ಕರಾವಳಿ' ಬಗ್ಗೆ ಹೊಸ ಮಾಹಿತಿ ಹೊರಬಿತ್ತು!

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಸೆನ್ಸಾರ್ ಮಂಡಳಿಯ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡು ಯು/ಎ (U/A) ಪ್ರಮಾಣಪತ್ರ ಪಡೆದಿದೆ.

Read Full Story
04:19 PM (IST) Jul 15

Karnataka News Live 15 July 2026ರಾತ್ರಿ ಆಗ್ತಿದ್ದಂತೆ ಇಂದಿರಾನಗರ ಲೇಡಿಸ್‌ ಪಿಜಿಯಲ್ಲಿ ಒಳಉಡುಪುಗಳ ಕಳ್ಳತನ, ಯುವತಿಯರ ಕ್ಯಾಮೆರಾ ಕಾರ್ಯಾಚರಣೆಗೆ ಸಿಕ್ಕ ವಿಕೃತ ಕಾಮಿ!

ಇಂದಿರಾನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಯುವತಿಯರ ಒಳ ಉಡುಪುಗಳನ್ನು ಕದ್ದು ವಿಕೃತಿ ಮೆರೆಯುತ್ತಿದ್ದ ಡೆಲಿವರಿ ಬಾಯ್‌ನನ್ನು ಇಬ್ಬರು ಯುವತಿಯರು ರಹಸ್ಯ ಕ್ಯಾಮೆರಾ ಅಳವಡಿಸಿ ಪತ್ತೆಹಚ್ಚಿದ್ದಾರೆ. ಆರೋಪಿ ಅಬ್ದುಲ್ ಹುಸೇನ್‌ನನ್ನು ಪೊಲೀಸರು ಬಂಧಿಸಿದ್ದು, ಈತ ಜಾಮೀನಿನ ಮೇಲೆ ಹೊರಬಂದಿದ್ದಾನೆ.
Read Full Story
03:42 PM (IST) Jul 15

Karnataka News Live 15 July 2026ಬಟ್ಟೆ ಎಳೆದಾಡಿ "ಬೇಬಿ ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?, ವಿದ್ಯಾರ್ಥಿನಿಯರಿಗೆ ದಾವಣಗೆರೆ ಉಪನ್ಯಾಸಕನ ಕಾಟ!

ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ, ಆರೋಪಿ ಉಪನ್ಯಾಸಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಜಿಲ್ಲಾಧಿಕಾರಿಗಳು ಆತನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
Read Full Story