08:40 AM (IST) Jul 15

Karnataka News Live 15 July 2026ನಾಡಗೀತೆಗೆ ಬೌದ್ಧ ಪದ ಸೇರ್ಪಡೆಗೆ ತಜ್ಞರ ಸಮಿತಿಯಿಂದ ಶಿಫಾರಸು; ಮಹತ್ವದ ಬದಲಾವಣೆ ಸಾಧ್ಯತೆ

ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯಲ್ಲಿ 'ಪಾರಸಿಕ ಜೈನರುದ್ಯಾನ' ಎಂಬ ಸಾಲಿಗೆ 'ಬೌದ್ಧ' ಪದವನ್ನು ಸೇರಿಸಲು ತಜ್ಞರ ಸಮಿತಿಯು ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ. ಕುವೆಂಪು ಅವರ ಮೂಲ ಕರಡಿನಲ್ಲಿ ಈ ಪದವಿದ್ದು, ಈ ಸೇರ್ಪಡೆಯಿಂದ ಗೀತೆಯ ಲಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ಸಮಿತಿ ಖಚಿತಪಡಿಸಿದೆ.
Read Full Story
08:35 AM (IST) Jul 15

Karnataka News Live 15 July 2026ಫುಟ್ಪಾತ್ ಒತ್ತುವರಿ, ವಾಹನ ತೆರವು ಬಳಿಕ, ಈಗ ಮತ್ತೊಂದು ಮಹತ್ವದ ಅಭಿಯಾನ ಘೋಷಿಸಿದ ಸಚಿವ ಕೃಷ್ಣಬೈರೇಗೌಡ! ಆ.1ರಿಂದಲೇ ಶುರು!

ಕಸದಿಂದ ಸ್ವಾತಂತ್ರ್ಯ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಲು ‘ಕಸ ಮುಕ್ತ ಬೆಂಗಳೂರು’ ಹೆಸರಿನ ವಿಶೇಷ ಅಭಿಯಾನವನ್ನು ಆಗಸ್ಟ್‌ 1ರಿಂದ 1 ತಿಂಗಳು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Read Full Story
07:57 AM (IST) Jul 15

Karnataka News Live 15 July 2026ಮುಂಡಗೋಡ-ಸವದತ್ತಿ - ಭಕ್ತರ ಬಹುದಿನದ ಕನಸು ನನಸು, ನೂತನ ಬಸ್‌ಗೆ ಶಾಸಕ ಹೆಬ್ಬಾರ್ ಚಾಲನೆ

ಮಂಗಳವಾರ ಮುಂಡಗೋಡ ಬಸ್ ನಿಲ್ದಾಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಮುಂಡಗೋಡ-ಸವದತ್ತಿ ನೂತನ ಬಸ್ ಸೇವೆಗೆ ಹಸಿರು ನಿಶಾನೆ ತೋರಿದರು. ಈ ಹೊಸ ಬಸ್ ಸೇವೆಯು ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಉತ್ತರ ಕನ್ನಡ ಜಿಲ್ಲೆಯ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ.
Read Full Story
07:56 AM (IST) Jul 15

Karnataka News Live 15 July 202614 ವರ್ಷಗಳ ದ್ವೇಷ... ತಪ್ಪಿಸಿಕೊಂಡಿದ್ದ ಕುಟುಂಬದ ಮೇಲೆ ಒಂಟಿ ಸಲಗದ ದಾಳಿ... ನಾಲ್ವರು ಬಲಿ!

ನೇಪಾಳದ ಕುಖ್ಯಾತ "ಧುರ್ಬೆ" ಆನೆ 14 ವರ್ಷಗಳ ಅವಧಿಯಲ್ಲಿ ಶನಿಚಾರ ಬೋಟೆ ಎಂಬುವವರ ಒಂದೇ ಕುಟುಂಬದ ನಾಲ್ವರನ್ನು ಬಲಿಪಡೆದಿದೆ. 2012 ರಲ್ಲಿ ಹೆತ್ತವರನ್ನು ಕೊಂದ ಆನೆಗೆ ಹೆದರಿ 9 ಮೈಲು ದೂರ ವಲಸೆ ಹೋಗಿದ್ದ ಕುಟುಂಬವನ್ನು ಬೆನ್ನಟ್ಟಿದ ಆನೆ, ಜುಲೈ 2026 ರಲ್ಲಿ ಸೊಸೆ ಹಾಗೂ 4 ವರ್ಷದ ಮೊಮ್ಮಗನನ್ನು ಕೊಂದಿದೆ. 25 ಜನರನ್ನು ಬಲಿಪಡೆದಿರುವ ಈ ಆನೆ ನೇಪಾಳದ ಅತ್ಯಂತ ಅಪಾಯಕಾರಿ ವನ್ಯಜೀವಿಯಾಗಿದೆ.

Read Full Story
07:41 AM (IST) Jul 15

Karnataka News Live 15 July 2026ಬೆಂಗಳೂರಿನಲ್ಲಿದ್ದ ಚುಂಚನಗಿರಿ ಮಠದ 100 ಕೋಟಿ ಮೌಲ್ಯದ 6 ಎಕರೆ ಭೂಮಿ ಕಬಳಿಕೆ ಯತ್ನ

ಆದಿಚುಂಚನಗಿರಿ ಮಠಕ್ಕೆ ಸೇರಿದ ಸುಮಾರು 100 ಕೋಟಿ ರೂ. ಮೌಲ್ಯದ 6 ಎಕರೆ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ ಪ್ರಕರಣವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಆರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.
Read Full Story