- Home
- News
- State
- Karnataka News Live: ನಾಡಗೀತೆಗೆ ಬೌದ್ಧ ಪದ ಸೇರ್ಪಡೆಗೆ ತಜ್ಞರ ಸಮಿತಿಯಿಂದ ಶಿಫಾರಸು; ಮಹತ್ವದ ಬದಲಾವಣೆ ಸಾಧ್ಯತೆ
Karnataka News Live: ನಾಡಗೀತೆಗೆ ಬೌದ್ಧ ಪದ ಸೇರ್ಪಡೆಗೆ ತಜ್ಞರ ಸಮಿತಿಯಿಂದ ಶಿಫಾರಸು; ಮಹತ್ವದ ಬದಲಾವಣೆ ಸಾಧ್ಯತೆ

ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಕೆಆರ್ಎಸ್ ಅಣೆಕಟ್ಟೆಯಿಂದ ನೀರು ಹರಿಸದ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುವುದರ ಮೂಲಕ ಕಿವುಡುತನ ಪ್ರದರ್ಶಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಜಮೀನುಗಳಲ್ಲಿ ಒಣಗುತ್ತಿರುವ ಕಬ್ಬು ಬೆಳೆಗಳನ್ನು ಮಂಗಳವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 3 ದಿನದಲ್ಲಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡದಿದ್ದರೆ ಬಿಜೆಪಿ ವತಿಯಿಂದ ಕೆಆರ್ಎಸ್ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೀರಿಲ್ಲದ ಸಂದರ್ಭದಲ್ಲಿ ಕುಡಿಯುವ ನೀರನ್ನು ಯಾವ ರೀತಿ ಪೂರೈಕೆ ಮಾಡಬೇಕು. ತಮಿಳುನಾಡಿನವರು ನ್ಯಾಯಾಲಯಕ್ಕೆ ಹೋದರೆ ನ್ಯಾಯಾಲಯದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಏನು ಮಾಡಬೇಕೆಂದು ಚರ್ಚಿಸಲು ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ವಿಪಕ್ಷವನ್ನು ಬಿಟ್ಟು ನೀರಾವರಿ ಸಭೆ ನಡೆಸಬಾರದು. ಎಲ್ಲರನ್ನೂ ಆಹ್ವಾನ ಮಾಡಬೇಕೆಂದು ಅಶೋಕ್ ಆಗ್ರಹಿಸಿದರು.
Karnataka News Live 15 July 2026ನಾಡಗೀತೆಗೆ ಬೌದ್ಧ ಪದ ಸೇರ್ಪಡೆಗೆ ತಜ್ಞರ ಸಮಿತಿಯಿಂದ ಶಿಫಾರಸು; ಮಹತ್ವದ ಬದಲಾವಣೆ ಸಾಧ್ಯತೆ
Karnataka News Live 15 July 2026ಫುಟ್ಪಾತ್ ಒತ್ತುವರಿ, ವಾಹನ ತೆರವು ಬಳಿಕ, ಈಗ ಮತ್ತೊಂದು ಮಹತ್ವದ ಅಭಿಯಾನ ಘೋಷಿಸಿದ ಸಚಿವ ಕೃಷ್ಣಬೈರೇಗೌಡ! ಆ.1ರಿಂದಲೇ ಶುರು!
ಕಸದಿಂದ ಸ್ವಾತಂತ್ರ್ಯ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಲು ‘ಕಸ ಮುಕ್ತ ಬೆಂಗಳೂರು’ ಹೆಸರಿನ ವಿಶೇಷ ಅಭಿಯಾನವನ್ನು ಆಗಸ್ಟ್ 1ರಿಂದ 1 ತಿಂಗಳು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
Karnataka News Live 15 July 2026ಮುಂಡಗೋಡ-ಸವದತ್ತಿ - ಭಕ್ತರ ಬಹುದಿನದ ಕನಸು ನನಸು, ನೂತನ ಬಸ್ಗೆ ಶಾಸಕ ಹೆಬ್ಬಾರ್ ಚಾಲನೆ
Karnataka News Live 15 July 202614 ವರ್ಷಗಳ ದ್ವೇಷ... ತಪ್ಪಿಸಿಕೊಂಡಿದ್ದ ಕುಟುಂಬದ ಮೇಲೆ ಒಂಟಿ ಸಲಗದ ದಾಳಿ... ನಾಲ್ವರು ಬಲಿ!
ನೇಪಾಳದ ಕುಖ್ಯಾತ "ಧುರ್ಬೆ" ಆನೆ 14 ವರ್ಷಗಳ ಅವಧಿಯಲ್ಲಿ ಶನಿಚಾರ ಬೋಟೆ ಎಂಬುವವರ ಒಂದೇ ಕುಟುಂಬದ ನಾಲ್ವರನ್ನು ಬಲಿಪಡೆದಿದೆ. 2012 ರಲ್ಲಿ ಹೆತ್ತವರನ್ನು ಕೊಂದ ಆನೆಗೆ ಹೆದರಿ 9 ಮೈಲು ದೂರ ವಲಸೆ ಹೋಗಿದ್ದ ಕುಟುಂಬವನ್ನು ಬೆನ್ನಟ್ಟಿದ ಆನೆ, ಜುಲೈ 2026 ರಲ್ಲಿ ಸೊಸೆ ಹಾಗೂ 4 ವರ್ಷದ ಮೊಮ್ಮಗನನ್ನು ಕೊಂದಿದೆ. 25 ಜನರನ್ನು ಬಲಿಪಡೆದಿರುವ ಈ ಆನೆ ನೇಪಾಳದ ಅತ್ಯಂತ ಅಪಾಯಕಾರಿ ವನ್ಯಜೀವಿಯಾಗಿದೆ.