MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ತಮಿಳುನಾಡಿಗೆ ಹರಿಯುತ್ತಿದ್ದ ನೀರು ತಡೆಯಲು ಗ್ರಾಮಸ್ಥರೇ ಮುಂದಾದರು: ಚಾಮರಾಜನಗರದಲ್ಲಿ ಅನನ್ಯ ಪ್ರಯತ್ನ

ತಮಿಳುನಾಡಿಗೆ ಹರಿಯುತ್ತಿದ್ದ ನೀರು ತಡೆಯಲು ಗ್ರಾಮಸ್ಥರೇ ಮುಂದಾದರು: ಚಾಮರಾಜನಗರದಲ್ಲಿ ಅನನ್ಯ ಪ್ರಯತ್ನ

Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..

2 Min read
Author : Govindaraj S
Published : Jul 15 2026, 06:12 PM IST
Share this Photo Gallery
  • FB
  • TW
  • Linkdin
  • Whatsapp
15
ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ.
Image Credit : Asianet News

ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಜು.15): ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ ಹಾಗೂ ತಮಿಳುನಾಡಿಗೆ ಹರಿದು ಹೋಗುವ ನೀರು ತಡೆಯಿರಿ ಅಂತಾ ಗ್ರಾಮಸ್ಥರು, ರೈತರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಕೂಡ ಸ್ಪಂದಿಸದ ಹಿನ್ನಲೆ ಗ್ರಾಮಸ್ಥರೇ ಚಂದಾ ಎತ್ತಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಅದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕುಡಿಯುವ ನೀರಿಗೂ ಹಾಹಾಕಾರ
Image Credit : Asianet News

ಕುಡಿಯುವ ನೀರಿಗೂ ಹಾಹಾಕಾರ

ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೊರತೆ ನಡುವೆಯೂ ಕೂಡ ಹನೂರು ಭಾಗದ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಚೆಕ್ ಡ್ಯಾಂಗಳು ತುಂಬಿತ್ತು. ಆದ್ರೆ ಚೆಕ್ ಡ್ಯಾಂಗಳ ಹೂಳೆತ್ತದ ಹಿನ್ನಲೆ ನೀರೆಲ್ಲ ಪಾಲಾರ್ ಹಳ್ಳಕ್ಕೆ ಹರಿದು ಕಾವೇರಿ ಮೂಲಕ ತಮಿಳುನಾಡು ಸೇರಿದೆ. ಆದ್ರೆ ಇದೀಗ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ, ಕೊಳವೆ ಬಾವಿಗಳು ಕೂಡ ನಿಂತು ಹೋಗಿವೆ.

Related Articles

Related image1
ಸರ್ವರ್ ಸಮಸ್ಯೆ, ಒಟಿಪಿ ವಿಳಂಬ: ಕಾಗದರಹಿತ ನೋಂದಣಿ ವ್ಯವಸ್ಥೆಗೆ ಸಾರ್ವಜನಿಕರ ಅಸಮಾಧಾನ
Related image2
ರೈಲ್ವೆ ಅಂಡರ್ ಪಾಸ್‌ಗಾಗಿ ಹಕ್ಕೊತ್ತಾಯ: ರೈತರು ಹಾಗೂ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ!
35
ಚೆಕ್ ಡ್ಯಾಂ ಸಾಮರ್ಥ್ಯ
Image Credit : Asianet News

ಚೆಕ್ ಡ್ಯಾಂ ಸಾಮರ್ಥ್ಯ

ಅಧಿಕಾರಿಗಳು ಸ್ಪಂದಿಸದೆ ಹಿನ್ನಲೆ ತಾವೇ ಚಂದಾ ಎತ್ತಿ ಹೂಳೆತ್ತಿ, ಚೆಕ್ ಡ್ಯಾಂ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದ್ದಾರೆ. ಸಂದನಪಾಳ್ಯ ಸಮೀಪದ ಚಾರ್ಲಿಸ್ ಸರ್ವೇರ್ ಡ್ಯಾಂ ಅನ್ನೂ 15 ವರ್ಷಗಳ ಹಿಂದೆ ಸ್ಥಳೀಯರೆ ನಿರ್ಮಿಸಿಕೊಂಡಿದ್ದರು. ಮಾರ್ಟಳ್ಳಿ ಬೆಟ್ಟಗುಡ್ಡದಲ್ಲಿ ಸುರಿಯುವ ಮಳೆ ನೀರು ಪಣಂಕೋಬೆ ಡ್ಯಾಂ ಮೂಲಕ ಹರಿದು ಮಾರ್ಟಳ್ಳಿ, ಸಂದನಪಾಳ್ಯ, ನಾಲ್ ರೋಡ್ ಮೂಲಕ ಹರಿದು ಹೋಗಿ ಪಾಲಾರ್ ಹಳ್ಳದ ಮೂಲಕ ಕಾವೇರಿ ನದಿ ಸೇರುತ್ತಿತ್ತು.

45
ನಿರ್ಲಕ್ಷ್ಯ ಧೋರಣೆ
Image Credit : Asianet News

ನಿರ್ಲಕ್ಷ್ಯ ಧೋರಣೆ

ಆ ಮೂಲಕ ಲೆಕ್ಕಕ್ಕೆ ಸಿಗದ ನೀರು ತಮಿಳುನಾಡು ಪಾಲಾಗ್ತಿದೆ ಅಂತಾ ರೈತರು ಆರೋಪ ಮಾಡ್ತಿದ್ದಾರೆ. ಇನ್ನೂ ಬಹಳ ವರ್ಷಗಳ ಹಿಂದೆಯೇ ಪಣಂಕೋಬೆ ಬಳಿ ಚೆಕ್ ಡ್ಯಾಂ ನಿರ್ಮಿಸುವ ಪ್ರಸ್ತಾಪವಿತ್ತು. ಆದ್ರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಯೋಜನೆ ಕೈ ಬಿಡಲಾಗಿತ್ತು. ಆ ಯೋಜನೆಗೆ ಮರುಜೀವ ನೀಡುವಂತೆ ರೈತರು ಹಾಗೂ ಸ್ಥಳೀಯ 15 ಕ್ಕೂ ಹೆಚ್ಚು ಗ್ರಾಮದ ಜನರು ಅಧಿಕಾರಿಗಳನ್ನು ಒತ್ತಾಯಿಸಿದರು ಕೂಡ ಪ್ರಯೋಜನವಾಗಿಲ್ಲ.

55
ಮಾದರಿ ನಡೆ
Image Credit : Asianet News

ಮಾದರಿ ನಡೆ

ಈ ಹಿನ್ನಲೆ ಮಳೆಯ ನೀರು ಬಂದ್ರು ಚೆಕ್ ಡ್ಯಾಂ ನಲ್ಲಿ ನೀರು ನಿಲ್ಲುತ್ತಿಲ್ಲ ಅಂತಾ ಅರಿತ ರೈತರು ಸರ್ಕಾರದ ಅನುದಾನಕ್ಕೆ ಕಾಯದೆ ತಾವೇ ಸ್ವಂತ ಹಣ ಸಂಗ್ರಹಿಸಿ ಚೆಕ್ ಡ್ಯಾಂ ಹೂಳೆತ್ತುವ ಕಾಯಕಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಹನೂರಿನ ಬಿಜೆಪಿ ಮುಖಂಡರು ಕೂಡ ಕೈ ಜೋಡಿಸಿದ್ದೇವೆ ಅಂತಿದ್ದಾರೆ. ಒಟ್ನಲ್ಲಿ ಮಾರ್ಟಳ್ಳಿ ಭಾಗದಲ್ಲಿ ಬೀಳುವ ಮಳೆಯ ನೀರಿನಿಂದ ಭರ್ತಿಯಾಗಿದ್ದ ಚೆಕ್ ಡ್ಯಾಂ ನೀರು ಕೇವಲ 15 ದಿನಕ್ಕೆ ಹರಿದು ತಮಿಳುನಾಡು ಪಾಲಾಗಿದೆ. ಅಧಿಕಾರಿಗಳು ಹಾಗೂ ಶಾಸಕರು ಜನರ ಕಷ್ಟಕ್ಕೆ ಸ್ಪಂದಿಸದ ಹಿನ್ನಲೆ ಗ್ರಾಮಸ್ಥರೇ ಹೂಳೆತ್ತಲೂ ಮುಂದಾಗಿರುವುದು ಮಾತ್ರ ಮಾದರಿ ನಡೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನೀರು
ಚಾಮರಾಜನಗರ
ಸುದ್ದಿ
ರೈತರು

Latest Videos
Recommended Stories
Recommended image1
Now Playing
ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Recommended image2
ಸಿಲಿಕಾನ್ ಸಿಟಿ ಹವಾಮಾನ ಇತಿಹಾಸದಲ್ಲಿಯೇ 112 ವರ್ಷಗಳ ಹಳೆಯ ದಾಖಲೆ ಬ್ರೇಕ್, ಜುಲೈ ಬಿಸಿಲಿಗೆ ಬೆಂದ ಬೆಂಗಳೂರು!
Recommended image3
ರಾತ್ರಿ ಆಗ್ತಿದ್ದಂತೆ ಇಂದಿರಾನಗರ ಲೇಡಿಸ್‌ ಪಿಜಿಯಲ್ಲಿ ಒಳಉಡುಪುಗಳ ಕಳ್ಳತನ, ಯುವತಿಯರ ಕ್ಯಾಮೆರಾ ಕಾರ್ಯಾಚರಣೆಗೆ ಸಿಕ್ಕ ವಿಕೃತ ಕಾಮಿ!
Related Stories
Recommended image1
ಸರ್ವರ್ ಸಮಸ್ಯೆ, ಒಟಿಪಿ ವಿಳಂಬ: ಕಾಗದರಹಿತ ನೋಂದಣಿ ವ್ಯವಸ್ಥೆಗೆ ಸಾರ್ವಜನಿಕರ ಅಸಮಾಧಾನ
Recommended image2
ರೈಲ್ವೆ ಅಂಡರ್ ಪಾಸ್‌ಗಾಗಿ ಹಕ್ಕೊತ್ತಾಯ: ರೈತರು ಹಾಗೂ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved