‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!

ಪ್ರಧಾನಿ ಮೋದಿಯವರ ಇಟಲಿ ಪ್ರವಾಸ ಮತ್ತು 'ಮೆಲೋಡಿ' ಘಟನೆಯನ್ನು 'ನಾಟಕ' ಎಂದು ಕರೆದ ರಾಹುಲ್ ಗಾಂಧಿ, ಮೋದಿ ಮತ್ತು ಅಮಿತ್ ಶಾ ಅವರನ್ನು 'ದೇಶದ್ರೋಹಿಗಳು' ಎಂದು ತೀವ್ರವಾಗಿ ಟೀಕಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ನಡುವೆ ಪ್ರಧಾನಿಯ ವಿದೇಶಿ ಪ್ರವಾಸವನ್ನು ಪ್ರಶ್ನಿಸಿದ್ದಾರೆ.

Share this Video
  • FB
  • Linkdin
  • Whatsapp

ನವದೆಹಲಿ(ಮೇ.23):  ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು 'ದೇಶದ್ರೋಹಿಗಳು. ಎಂದು ಕರೆದಿದ್ದಾರೆ ಮತ್ತು "ಮೆಲೋಡಿ" (Melodi) ಕೃತ್ಯವನ್ನು "ನೌಟಂಕಿ (ನಾಟಕ)" ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕನ ಈ ಹೇಳಿಕೆಗೆ ತಿರುಗೇಟು ನೀಡಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಇದು "ಖೇದಕರ" ಮತ್ತು "ಅವರ ಅರಾಜಕ ಹಾಗೂ ವಿಭಜಕ ಮನಸ್ಥಿತಿಯನ್ನು ಬಹಿರಂಗಪಡಿಸುವಂತಹದ್ದಾಗಿದೆ" ಎಂದು ಕರೆದಿದೆ.

Add Asianetnews Kannada as a Preferred SourcegooglePreferred

ಪ್ರಧಾನಿ ಮೋದಿ ಅವರು ಇಟಲಿ ಪ್ರವಾಸದ ಅಂತಿಮ ಹಂತದಲ್ಲಿರುವಾಗ, ತಮ್ಮ ಇಟಲಿ ದೇಶದ ಕೌಂಟರ್‌ಪಾರ್ಟ್ (ಪ್ರಧಾನಿ) ಜಾರ್ಜಿಯಾ ಮೆಲೋನಿ ಅವರಿಗೆ 'ಮೆಲೋಡಿ ಟಾಫಿ'ಗಳನ್ನು (ಮಿಠಾಯಿ) ಉಡುಗೊರೆಯಾಗಿ ನೀಡಿದ ಅವರ ಕೃತ್ಯವು ಪ್ರಮುಖ ಗುರಿಯಾಗಿ ಹೊರಹೊಮ್ಮಿತು. ಈ ಕುರಿತು ಬೆಟ್ಟು ಮಾಡಿದ ರಾಹುಲ್, "ನಮ್ಮ ತಲೆಯ ಮೇಲೆ ಆರ್ಥಿಕ ಬಿರುಗಾಳಿ ಬೀಸುತ್ತಿದೆ, ಆದರೆ ನಮ್ಮ ಪ್ರಧಾನಿ ಇಟಲಿಗೆ ಹೋಗಿ ಸಿಹಿ ಹಂಚುತ್ತಿದ್ದಾರೆ!" ಎಂದು ಲೇವಡಿ ಮಾಡಿದರು.

Rahul Gandhi: ಪತ್ರಕರ್ತರು ಪ್ರಶ್ನೆ ಕೇಳಿದಾಗ ಪ್ರಧಾನಿ ಮೋದಿ ಓಡಿಹೋಗಿದ್ದೇಕೆ? ರಾಹುಲ್ ಗಾಂಧಿ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ ಇಂಧನ ಉಳಿಸುವಂತೆ ಮತ್ತು ವಿದೇಶಿ ಪ್ರವಾಸಗಳನ್ನು ನಿರ್ಬಂಧಿಸುವಂತೆ ಜನರಿಗೆ ಮನವಿ ಮಾಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಐದು ದೇಶಗಳ ಪ್ರವಾಸ ಕೈಗೊಂಡಿರುವುದು ವಿರೋಧ ಪಕ್ಷಗಳ ತೀವ್ರ ವಾಗ್ದಾಳಿಗೆ ಕಾರಣವಾಗಿದೆ.

Related Video