ದೆಹಲಿ ಸ್ಫೋಟದ ಶಂಕಿತ ಆರೋಪಿ ಶಾಹೀನ್ ಸಹೋದರ ಅರೆಸ್ಟ್, ಸತತ ಐದು ಗಂಟೆ ವಿಚಾರಣೆ ನಡೆಸಿ ಪರ್ವೇಜ್ನ ಬಂಧಿಸಲಾಗಿದೆ. ದೆಹಲಿ ಸ್ಫೋಟದ ಹಿಂದೆ ಉಗ್ರರ ಕೈವಾಡದ ಹಲವು ಸಾಕ್ಷ್ಯಗಳು ತನಿಖಾ ತಂಡದ ಕೈಸೇರಿದೆ.
- Home
- News
- India News
- India News Live: ದೆಹಲಿ ಸ್ಫೋಟದ ಶಂಕಿತ ಆರೋಪಿ ಶಾಹೀನ್ ಸಹೋದರ ಅರೆಸ್ಟ್, ನಾಳೆ ಲಾಲ್ ಕ್ವಿಲಾ ಮೆಟ್ರೋ ಬಂದ್
India News Live: ದೆಹಲಿ ಸ್ಫೋಟದ ಶಂಕಿತ ಆರೋಪಿ ಶಾಹೀನ್ ಸಹೋದರ ಅರೆಸ್ಟ್, ನಾಳೆ ಲಾಲ್ ಕ್ವಿಲಾ ಮೆಟ್ರೋ ಬಂದ್

ನವದೆಹಲಿ (ನ.11): ದೆಹಲಿಯಲ್ಲಿ ನಡೆದ ಕಾರು ಸ್ಫೋಟದಲ್ಲಿ ಇಲ್ಲಿಯವರೆಗೂ 9 ಮಂದಿ ಬಲಿಯಾಗಿದ್ದಾರೆ. ಇದು ಆಕಸ್ಮಿಕ ಘಟನೆಯೋ ಅಥವಾ ಭಯೋತ್ಪಾದಕರ ಆತ್ಮಾಹುತಿ ದಾಳಿಯೋ? ಎನ್ನುವ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಐತಿಹಾಸಿಕ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿಯಲ್ಲಿಯೇ ಈ ಘಟನೆ ನಡೆದಿದೆ. ದೇಹಗಳು ಸಂಪೂರ್ಣ ಛಿದ್ರವಾಗಿದ್ದವು. 20 ಜನರಿಗೆ ಗಂಭೀರವಾಗಿ ಗಾಯವಾಗಿದ್ದರೆ, 9 ವಾಹನಗಳು ಸುಟ್ಟು ಭಸ್ಮವಾಗಿದೆ. ಇದರ ಬೆನ್ನಲ್ಲಿಯೇ ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, 3 ಟೆರರ್ ಡಾಕ್ಟರ್ಗಳು ಸೇರಿ 11 ಉಗ್ರರ ಬಂಧನವಾಗಿದೆ. 3 ಟನ್ ಸ್ಫೋಟಕ ವಶ ಬೆನ್ನಲ್ಲಿಯೇ ಈ ಘಟನೆ ನಡೆದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 11th November:ದೆಹಲಿ ಸ್ಫೋಟದ ಶಂಕಿತ ಆರೋಪಿ ಶಾಹೀನ್ ಸಹೋದರ ಅರೆಸ್ಟ್, ನಾಳೆ ಲಾಲ್ ಕ್ವಿಲಾ ಮೆಟ್ರೋ ಬಂದ್
India News Live 11th November:ಬಾಂಬ್ ಸ್ಫೋಟಕ್ಕೆ ಭಾರತ ಕಾರಣ ಎಂದ ಪಾಕಿಸ್ತಾನ ಪ್ರಧಾನಿ, ಹೊಣೆ ಹೊತ್ತ ಟಿಟಿಪಿ ಉಗ್ರ ಸಂಘಟನೆ
ಬಾಂಬ್ ಸ್ಫೋಟಕ್ಕೆ ಭಾರತ ಕಾರಣ ಎಂದ ಪಾಕಿಸ್ತಾನ ಪ್ರಧಾನಿ, ಹೊಣೆ ಹೊತ್ತ ಟಿಟಿಪಿ ಉಗ್ರ ಸಂಘಟನೆ, 12 ಮಂದಿ ಸಾವಿಗೆ ಕಾರಣವಾಗಿರುವ ಬಾಂಬ ಸ್ಫೋಟದ ಕುರಿತು ಆರೋಪಗಳು ನಡೆಯುತ್ತಿದ್ದು, ಶಹೆಬಾಜ್ ಷರೀಪ್, ಭಾರತವೇ ಹೊಣೆ ಎಂದಿದ್ದಾರೆ.
India News Live 11th November:Bihar Exit Polls ಬಿಹಾರದಲ್ಲಿ ಮತ್ತೆ ಬಿಜೆಪಿ-ಜೆಡಿಯು ಸರ್ಕಾರ, ಮಹಾಘಟಬಂದನ್, ಪಿಕೆ ತಿರಸ್ಕಾರ
Bihar Exit Polls ಬಿಹಾರದಲ್ಲಿ ಮತ್ತೆ ಬಿಜೆಪಿ-ಜೆಡಿಯು ಸರ್ಕಾರ, ಮಹಾಘಟಬಂದನ್, ಪಿಕೆ ತಿರಸ್ಕಾರ , ಪ್ರಮುಖ ಎಜೆನ್ಸಿಗಳ ಸಮೀಕ್ಷೆ ಪ್ರಕಟಗೊಂಡಿದೆ. ಈ ಸಮೀಕ್ಷೆಗಳು ಬಿಜೆಪಿ-ಜೆಡಿಯು, ಮಹಾಘಟನಬಂದನ್ ಹಾಗೂ ಜನ ಸೂರಾಜ್ಗೆ ನೀಡಿದ ಸ್ಥಾನವೆಷ್ಟು?
India News Live 11th November:Red Fort Blast - 'ಪರೀಕ್ಷೆ ಇದೆ, ಮುಗಿಸಿ ಬರುವೆ' ಎಂದಿದ್ದ ಶಂಕಿತ ಡಾ.ಉಮರ್! ಪತ್ನಿಗೆ ಕೊಟ್ಟಿದ್ದನಾ ಸೂಚನೆ? ಆಕೆ ಹೇಳಿದ್ದೇನು?
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, ಪ್ರಕರಣದ ಶಂಕಿತ ಆತ್ಮಾಹುತಿ ಬಾಂಬರ್ ಡಾ. ಉಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಸ್ಫೋಟದ ಬಗ್ಗೆ ತನ್ನ ಪತ್ನಿಗೆ ಮುನ್ಸೂಚನೆ ನೀಡಿದ್ದನೇ ಎಂಬ ಅನುಮಾನ ತನಿಖೆ ವೇಳೆ ವ್ಯಕ್ತವಾಗಿದೆ.
India News Live 11th November:Bihar Exit Polls ಬಿಹಾರ ಚುನಾವಣೆ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಗೆ ಗೆಲುವು
Bihar Exit Polls ಬಿಹಾರ ಚುನಾವಣೆ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಗೆ ಗೆಲುವು , ಬಹುತೇಕ ಎಜೆನ್ಸಿಗಳ ಎಕ್ಸಿಟ್ ಪೋಲ್ ಫಲಿತಾಂಶ ಬಹಿರಂಗವಾಗಿದ್ದು, ಎಲ್ಲಾ ಮತಗಟ್ಟೆ ಸಮೀಕ್ಷೆ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದಿದೆ.
India News Live 11th November:Bihar Exit Poll ಬಿಹಾರ ಮತಗಟ್ಟೆ ಸಮೀಕ್ಷೆ ಬಹಿರಂಗ, 131 ಸ್ಥಾನದೊಂದಿಗೆ ಎನ್ಡಿಎಗೆ ಬಹುಮತ
Bihar Exit Poll ಬಿಹಾರ ಮತಗಟ್ಟೆ ಸಮೀಕ್ಷೆ ಬಹಿರಂಗ, 131 ಸ್ಥಾನದೊಂದಿಗೆ ಎನ್ಡಿಎಗೆ ಬಹುಮತ, ಬಿಹಾರದ ಎರಡು ಹಂತದ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಬಹಿರಂಗಗೊಂಡಿದೆ.
India News Live 11th November:ಶ್ರೇಯಸ್ ಅಯ್ಯರ್ ಆಕ್ಸಿಜನ್ ಲೆವೆಲ್ 50%ಗೆ ಕುಸಿದಿತ್ತು! ಮತ್ತೊಂದು ಸರಣಿಯಿಂದಲೂ ಔಟ್?
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಆ ಸಮಯದಲ್ಲಿ ಅವರ ಆಮ್ಲಜನಕದ ಮಟ್ಟ 50%ಕ್ಕೆ ಇಳಿದಿತ್ತು. ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಅಯ್ಯರ್ ಹೊರಗುಳಿಯುವ ಸಾಧ್ಯತೆ ಇದೆ.
India News Live 11th November:ರಣಜಿ ಇತಿಹಾಸದಲ್ಲಿ ಹೊಸ ಶಕೆ - ದೆಹಲಿಯನ್ನು ಮೊದಲ ಬಾರಿಗೆ ಸೋಲಿಸಿದ ಜಮ್ಮು ಮತ್ತು ಕಾಶ್ಮೀರ!
ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡವು ದೆಹಲಿಯನ್ನು ಮಣಿಸಿ ಐತಿಹಾಸಿಕ ಜಯ ದಾಖಲಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಕಮ್ರಾನ್ ಇಕ್ಬಾಲ್ ಅವರ ಅಜೇಯ ಶತಕದ ನೆರವಿನಿಂದ ಜಮ್ಮು ಮತ್ತು ಕಾಶ್ಮೀರ ತಂಡವು 179 ರನ್ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿತು.
India News Live 11th November:ಶಾಲಾ ಮಕ್ಕಳಿಗೆ ಹೈಬ್ರಿಡ್ ಮಾಡೆಲ್ ಘೋಷಿಸಿದ ಸರ್ಕಾರ, 3 ದಿನ ಕ್ಲಾಸ್ ಇನ್ನುಳಿದ ದಿನ ಆನ್ಲೈನ್
ಶಾಲಾ ಮಕ್ಕಳಿಗೆ ಹೈಬ್ರಿಡ್ ಮಾಡೆಲ್ ಘೋಷಿಸಿದ ಸರ್ಕಾರ, 3 ದಿನ ಕ್ಲಾಸ್ ಇನ್ನುಳಿದ ದಿನ ಆನ್ಲೈನ್ ಕ್ಲಾಸ್ ನಡೆಸಲು ಸೂಚಿಸಲಾಗಿದೆ. ದಿಢೀರ್ ಸರ್ಕಾರ ಶಾಲಾ ಮಕ್ಕಳಿಗೆ ಆಫ್ ಲೈನ್ ಕ್ಲಾಸ್ ಘೋಷಿಸಿದ್ದೇಕೆ?
India News Live 11th November:ಭಾರತದಲ್ಲಿ ದತ್ತು ಪಡೆದ ಮಗಳಿಗೆ ಹಿಂಸೆ - ಅಮೆರಿಕನ್ ಪೋಷಕರಿಂದ ರಕ್ಷಿಸುವಂತೆ ಸಿಎಂಗೆ ಮನವಿ
Odisha girl tortured in USA: ಅಮೆರಿಕನ್ ದಂಪತಿಯಿಂದ 7 ವರ್ಷಗಳ ಹಿಂದೆ ದತ್ತು ಪಡೆಯಲ್ಪಟ್ಟ ಒಡಿಶಾದ ಯುವತಿಯೊಬ್ಬಳು, ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾಳೆ. ತನ್ನನ್ನು ರಕ್ಷಿಸಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾಳೆ.
India News Live 11th November:ದೆಹಲಿ ಸ್ಫೋಟದ ಕುರಿತು ಆಗಸ್ಟ್ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಆಪರೇಶನ್ ಸಿಂದೂರ್2 ಸುಳಿವು
ದೆಹಲಿ ಸ್ಫೋಟದ ಕುರಿತು ಆಗಸ್ಟ್ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಆಪರೇಶನ್ ಸಿಂದೂರ್2 ಸುಳಿವು ನೀಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಕೆಲ ತಿಂಗಳ ಹಿಂದೆ ಭವಿಷ್ಯ ನುಡಿದಿದ್ದರು.
India News Live 11th November:2026ರ ಐಸಿಸಿ ಟಿ20 ವಿಶ್ವಕಪ್ ತಂಡದಿಂದ ಇಬ್ಬರು ಆಟಗಾರರು ಔಟ್?
2026ರ ಐಸಿಸಿ ಟಿ20 ವಿಶ್ವಕಪ್ಗೆ ಭಾರತೀಯ ತಂಡದ ಆಯ್ಕೆ ಬಗ್ಗೆ ಚರ್ಚೆ ಜೋರಾಗಿದೆ. ನಿತೀಶ್ ಕುಮಾರ್ ರೆಡ್ಡಿ ತಂಡದಿಂದ ಹೊರಗುಳಿಯುವುದು ಖಚಿತ ಎನ್ನುತ್ತಿದ್ದಾರೆ ತಜ್ಞರು, ಆದರೆ ಹರ್ಷಿತ್ ರಾಣಾಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆ ವಿವರಗಳು ಏನು ಗೊತ್ತಾ?
India News Live 11th November:ಪಾಕ್ ಕ್ರಿಕೆಟಿಗನ ಮನೆ ಮೇಲೆ ಯದ್ವಾತದ್ವಾ ಗುಂಡಿನ ದಾಳಿ! ಬಚಾವಾದ ಮಾರಕ ವೇಗಿ! ವಿಡಿಯೋ ವೈರಲ್
India News Live 11th November:ಇಸ್ಲಾಮಾಬಾದ್ ಕೋರ್ಟ್ ಬಳಿ ಆತ್ಮಾಹುತಿ ದಾಳಿ, 12 ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
Pakistan blast: ಪಾಕಿಸ್ತಾನ ರಾಜಧಾನಿಯ ಹೃದಯಭಾಗದಲ್ಲಿ ಸಂಭವಿಸಿದ ಸ್ಫೋಟಕ್ಕೆ ಇಸ್ಲಾಮಾಬಾದ್ ನ್ಯಾಯಾಲಯ ಸಂಕೀರ್ಣದಲ್ಲಿ ನಿಲ್ಲಿಸಿದ್ದ ವಾಹನದೊಳಗೆ ಅಳವಡಿಸಲಾದ ಗ್ಯಾಸ್ ಸಿಲಿಂಡರ್ ಕಾರಣ ಎಂದು ಶಂಕಿಸಲಾಗಿದೆ.
India News Live 11th November:ಧನುಷ್ ಜೊತೆ ಚೊಚ್ಚಲ ಸಿನಿಮಾದಲ್ಲಿ ನಟಿಸಿದ್ದ ನಟ ಅಭಿನಯ್ ನಿಧನ
Thulluvadho Ilamai actor Abhinay death: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳಿನ ನಟ ಅಭಿನಯ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ಒಂಟಿಯಾಗಿ ವಾಸಿಸುತ್ತಿದ್ದ ಅಭಿನಯ್ ಸೋಮವಾರ ಮುಂಜಾನೆ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
India News Live 11th November:ನಿಥಾರಿಯಲ್ಲಿ ಮಕ್ಕಳ ಸರಣಿ ಹತ್ಯೆಗೆ ಸಿಗದ ನ್ಯಾಯ - ಕೊನೆಯ ಕೇಸ್ನಿಂದಲೂ ಆರೋಪಿಯ ಖುಲಾಸೆ ಮಾಡಿದ ಸುಪ್ರೀಂ ಕೋರ್ಟ್
Nithari Serial Killings Surender Koli Acquitted ದೇಶವನ್ನೆ ಬೆಚ್ಚಿ ಬೀಳಿಸಿದ್ದ 2005-2006ರ ನಿಥಾರಿ ಸರಣಿ ಹತ್ಯೆ ಪ್ರಕರಣದ ಆರೋಪಿ ಸುರೀಂದರ್ ಕೋಲಿಯನ್ನು ಸುಪ್ರೀಂ ಕೋರ್ಟ್ ಕೊನೆಯ ಪ್ರಕರಣದಲ್ಲೂ ದೋಷಮುಕ್ತಗೊಳಿಸಿದೆ.
India News Live 11th November:ಫಿಟ್ ಆಗಿರುವ ಶಮಿಗೆ ಭಾರತ ತಂಡದಲ್ಲಿ ಯಾಕೆ ಚಾನ್ಸ್ ಸಿಕ್ತಿಲ್ಲ! ಕೊನೆಗೂ ಬಯಲಾಯ್ತು ರಿಯಲ್ ಕಾರಣ!
ನವದೆಹಲಿ: ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶಮಿ ಸಂಪೂರ್ಣ ಫಿಟ್ ಆಗಿದ್ದರೂ, ಭಾರತ ತಂಡದಿಂದ ಅವರನ್ನು ಹೊರಗಿಟ್ಟಿರುವುದೇಕೆ ಎನ್ನುವ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.
India News Live 11th November:ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಶೌಚಾಲಯದ ಹೊರಗೆ ರೈಲಿನ ಬೋಗಿಯೊಳಗೆ ಸ್ನಾನ ಮಾಡಿದ ಯುವಕ
Bathing in a moving train: ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿಯಾಗಲು ವ್ಯಕ್ತಿಯೊಬ್ಬ ಚಲಿಸುವ ರೈಲಿನ ಬೋಗಿಯೊಳಗೆ ಸ್ನಾನ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ನಂತರ ರೈಲ್ವೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
India News Live 11th November:ಈ 5 ಆಟಗಾರರನ್ನು ರಿಲೀಸ್ ಮಾಡಲು ರೆಡಿಯಾದ ಹಾಲಿ ಚಾಂಪಿಯನ್ ಆರ್ಸಿಬಿ! ಪಟ್ಟಿಯಲ್ಲಿದೆ ಒಂದು ಅಚ್ಚರಿ ಹೆಸರು!
2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ, ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಕಳಪೆ ಪ್ರದರ್ಶನ ನೀಡಿದ ಲಿವಿಂಗ್ಸ್ಟೋನ್ ಮತ್ತು ಲುಂಗಿ ಎಂಗಿಡಿ ಸೇರಿದಂತೆ ಒಟ್ಟು 5 ಆಟಗಾರರನ್ನು ತಂಡದಿಂದ ಕೈಬಿಡುವ ಬಗ್ಗೆ ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ.
India News Live 11th November:ದೆಹಲಿ ಕೆಂಪುಕೋಟೆ ಬ್ಲಾಸ್ಟ್ ಇಂಪ್ಯಾಕ್ಟ್, MTAR Tech ಸೇರಿದಂತೆ ರಕ್ಷಣಾ ವಲಯದ ಷೇರುಗಳ ಗೂಳಿ ಓಟ!
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದ ನಂತರ, ಭಯೋತ್ಪಾದಕ ಕೃತ್ಯದ ಶಂಕೆಯ ನಡುವೆ ಭಾರತೀಯ ರಕ್ಷಣಾ ವಲಯದ ಷೇರುಗಳು ಭಾರಿ ಏರಿಕೆ ಕಂಡಿವೆ. ಮಾರುಕಟ್ಟೆ ಕುಸಿದಿದ್ದರೂ, MTAR ಟೆಕ್ನಾಲಜೀಸ್, ಡೇಟಾ ಪ್ಯಾಟರ್ನ್ಸ್ನಂತಹ ಷೇರುಗಳು ಗಣನೀಯ ಲಾಭ ಗಳಿಸಿವೆ.