- Home
- News
- India News
- India Latest News Live: ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡಿದ್ರೆ ಮನೆಗೆ ಗ್ಯಾಸ್ ಪೂರೈಕೆ ಕಟ್
LIVE NOW
India Latest News Live: ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡಿದ್ರೆ ಮನೆಗೆ ಗ್ಯಾಸ್ ಪೂರೈಕೆ ಕಟ್

ಸಾರಾಂಶ
ಜೈಪುರ: ಅನಿಲಕ್ಕಾಗಿ ದೇಶದಲ್ಲಿ ಹಾಹಾಕಾರ ಎದ್ದಿರುವ ನಡುವೆ, ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡುವವರ ಮನೆಗೆ ಗ್ಯಾಸ್ ಪೂರೈಕೆ ಕಟ್ ಮಾಡಲಾಗುವುದು ಎಂದು ರಾಜಸ್ಥಾನ ಸರ್ಕಾರ ಘೋಷಿಸಿದೆ.
‘ವರದಕ್ಷಿಣೆಗಾಗಿ ಪೀಡಿಸುವ ಪ್ರಕರಣಗಳ ಮೇಲೆ ಹತ್ತಿರದಿಂದ ನಿಗಾ ವಹಿಸಲಾಗುತ್ತಿದ್ದು, ಅದು ಸಾಬೀತಾದಲ್ಲಿ ಆ ಮನೆಗೆ ಗ್ಯಾಸ್ ಸಿಲಿಂಡರ್ಗಳನ್ನು ಕೊಡಲಾಗುವುದಿಲ್ಲ’ ಎಂದು ರಾಜಸ್ಥಾನ ಪೊಲೀಸರು ಎಕ್ಸ್ನಲ್ಲಿ ತಿಳಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ ಸಿಲಿಂಡರ್ ಕಟ್ ಕ್ರಮ ಎಂದಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.