Mukesh Ambani Loses ₹223 Crore in 5 Days ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸತತ ಐದು ದಿನಗಳ ಕಾಲ ಕುಸಿದ ಪರಿಣಾಮ, ಮುಖೇಶ್ ಅಂಬಾನಿ ತಮ್ಮ ನಿವ್ವಳ ಮೌಲ್ಯದಲ್ಲಿ ₹223 ಕೋಟಿ ಕಳೆದುಕೊಂಡಿದ್ದಾರೆ. ರಷ್ಯಾದ ತೈಲಕ್ಕೆ ಸಂಬಂಧಿಸಿದ ವರದಿಯು ಈ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ.
- Home
- News
- India News
- India Latest News Live: ಐದೇ ದಿನದಲ್ಲಿ ವೈಯಕ್ತಿಕವಾಗಿ 223 ಕೋಟಿ ನಷ್ಟ ಕಂಡ ಮುಖೇಶ್ ಅಂಬಾನಿ, ಕಾರಣವೇನು?
India Latest News Live: ಐದೇ ದಿನದಲ್ಲಿ ವೈಯಕ್ತಿಕವಾಗಿ 223 ಕೋಟಿ ನಷ್ಟ ಕಂಡ ಮುಖೇಶ್ ಅಂಬಾನಿ, ಕಾರಣವೇನು?

ಚೆನ್ನೈ: ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಅವರ ಕೊನೆಯ ಚಿತ್ರ ‘ಜನನಾಯಕನ್’ಗೆ ಕೇಂದ್ರೀಯ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡದೇ ಇರುವುದಕ್ಕೆ ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡವೇ ಕಾರಣ ಎಂದು ತಮಿಳುನಾಡಿನ ಕಾಂಗ್ರೆಸ್ ಮತ್ತು ಡಿಎಂಕೆ ಆರೋಪಿಸಿವೆ. ರಾಜಕೀಯ ಕಾರಣಕ್ಕಾಗಿ ಚಿತ್ರದ ಬಿಡುಗಡೆಗೆ ಅಡ್ಡಿ ಮಾಡಲಾಗುತ್ತಿದೆ ಎಂದು ಅವು ಆರೋಪಿಸಿವೆ. ಆದರೆ ಈ ಆರೋಪವನ್ನು ಕೇಂದ್ರ ಸಚಿವ ಮುರುಗನ್ ತಳ್ಳಿಹಾಕಿದ್ದಾರೆ. ಈ ನಡುವೆ ಪ್ರಮಾಣಪತ್ರ ನಿರಾಕರಣೆ ಪ್ರಶ್ನಿಸಿ ಚಿತ್ರ ತಂಡ ಸಲ್ಲಿಸಿರುವ ಅರ್ಜಿ ಕುರಿತು ಮದ್ರಾಸ್ ಹೈಕೋರ್ಟ್ ಜ.9ರಂದು ತೀರ್ಪು ನೀಡಲಿದೆ.
India Latest News Live 9 January 2026ಐದೇ ದಿನದಲ್ಲಿ ವೈಯಕ್ತಿಕವಾಗಿ 223 ಕೋಟಿ ನಷ್ಟ ಕಂಡ ಮುಖೇಶ್ ಅಂಬಾನಿ, ಕಾರಣವೇನು?
India Latest News Live 9 January 2026WPL - ಕೊನೇ 4 ಎಸೆತದಲ್ಲಿ 20 ರನ್ ಸಿಡಿಸಿ ಸ್ಮೃತಿ ಮಂಧನಾ ಆರ್ಸಿಬಿಗೆ ಮಹಾಗೆಲುವು ತಂದ ನಡಿನ್ ಡಿ ಕ್ಲರ್ಕ್!
ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್ನಲ್ಲಿ 18 ರನ್ಗಳ ಅವಶ್ಯಕತೆಯಿದ್ದಾಗ, ಡಿ ಕ್ಲರ್ಕ್ ಅವರ ಸ್ಫೋಟಕ ಬ್ಯಾಟಿಂಗ್ ಗೆಲುವಿಗೆ ಕಾರಣವಾಯಿತು.
India Latest News Live 9 January 2026ಭಾರತದಲ್ಲಿ ಸಂಬಳ ಕಡಿಮೆ, ವಿದೇಶದಲ್ಲಿ ಕೆಲಸ ಮಾಡಲು ಶೇ. 52ರಷ್ಟು ಯುವಕರಿಗೆ ಇಷ್ಟ ಎಂದ ಅಧ್ಯಯನ!
ಟರ್ನ್ ಗ್ರೂಪ್ ಅಧ್ಯಯನದ ಪ್ರಕಾರ ಭಾರತದ ಶೇ. 52ರಷ್ಟು ಯುವಕರಿಗೆ ವಿದೇಶದಲ್ಲಿ ಕೆಲಸ ಮಾಡುವುದೇ ಇಷ್ಟ. ಅದಕ್ಕೆ ಕಾರಣ ಭಾರತದಲ್ಲಿ ಅವರಿಗೆ ಸಿಗುವ ಕಡಿಮೆ ವೇತನ ಎಂದು ತಿಳಿಸಿದೆ. ಜರ್ಮನಿ ಮತ್ತು ಯುಕೆ ಉತ್ತಮ ವೇತನ, ವೃತ್ತಿ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಗೆ ಪ್ರಮುಖ ಆಯ್ಕೆಗಳಾಗಿವೆ.
India Latest News Live 9 January 202610 ತಿಂಗಳ ಮಗನಿಗೆ ವಿಷವುಣಿಸಿ ಅಮ್ಮ ಆ*ತ್ಮಹ*ತ್ಯೆ, ಮೊಮ್ಮಗನ ಸಾವು ಕಂಡು ತಾನೂ ಸಾಯಲು ಯತ್ನಿಸಿದ ಅಜ್ಜಿ!
Hyderabad Horror: Mother Kills 10-Month-Old Baby, Ends Life; Mother-in-Law Critical ಹೈದರಾಬಾದ್ನಲ್ಲಿ ನಡೆದ ಕೌಟುಂಬಿಕ ಕಲಹದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಬದುಕುಳಿಯಲು ಕಷ್ಟಪಡುತ್ತಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟ್ನಲ್ಲಿ ಈ ದುರಂತ ಘಟನೆ ನಡೆದಿದೆ.
India Latest News Live 9 January 2026ಪಂದ್ಯ ಆಡುವಾಗಲೇ ಕುಸಿದು ಬಿದ್ದು ಭಾರತೀಯ ಕ್ರಿಕೆಟಿಗನ ದಾರುಣ ಸಾವು, ಬಿಸಿಸಿಐ ಸಂತಾಪ!
Mizoram Cricketer K Lalremruata Dies After Collapsing on Field; BCCI Mourns ಕ್ರಿಕೆಟ್ ಪಂದ್ಯದ ವೇಳೆ ಕುಸಿದು ಬಿದ್ದು ನಿಧನರಾದ ಮಿಜೋರಾಂನ ಮಾಜಿ ರಣಜಿ ಆಟಗಾರ ಕೆ. ಲಾಲ್ರೆಮ್ರುಟಾ ಅವರ ನಿಧನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿದೆ.
India Latest News Live 9 January 2026ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ - ಕೇಕ್ ಜೊತೆ ಮೇಕಪ್ ಸೆಟ್ ನೀಡಿ ಪತ್ನಿಗೆ ಸರ್ಫ್ರೈಸ್ ನೀಡಿದ ವೃದ್ಧ
ಇಂಟರ್ನೆಟ್ನಲ್ಲಿ ಪ್ರೀತಿ ಹುಡುಕುವ ಇಂದಿನ ಕಾಲಘಟದಲ್ಲಿ ಇಲ್ಲೊಂದು ವೃದ್ಧ ಜೋಡಿಯ ಮಾಗಿದ ಪ್ರೀತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ
India Latest News Live 9 January 2026ಸ್ಟಾಕ್ ಮಾರ್ಕೆಟ್ನಲ್ಲಿ ಈ ವಾರ ಭೂಕಂಪವಾದ್ರೂ, ಈ ಷೇರಲ್ಲಿ ಹಣ ಹೂಡಿದವರಿಗೆ ಜಾಕ್ಪಾಟ್, ರಾತ್ರೋರಾತ್ರಿ ಆದ್ರು ಕೋಟ್ಯಧಿಪತಿ
Share Market:ಈ ವಾರ ಷೇರು ಮಾರುಕಟ್ಟೆಯಲ್ಲಿ ಭೂಕಂಪ ಸಂಭವಿಸಿದೆ. ಅಮೆರಿಕ ಶೇ. 500 ರಷ್ಟು ಸುಂಕ ವಿಧಿಸುವ ಸುದ್ದಿ ಬಂದಾಗಿನಿಂದ ಷೇರು ಮಾರುಕಟ್ಟೆ ಗೊಂದಲದಲ್ಲಿದೆ. ಆದರೆ ಈ ಪರಿಸ್ಥಿತಿಯಲ್ಲೂ ಈ ಷೇರುಗಳು ಏರಿವೆ. ಇದರಿಂದಾಗಿ ಹೂಡಿಕೆದಾರರು ಶ್ರೀಮಂತರಾಗಿದ್ದಾರೆ.
India Latest News Live 9 January 2026ಸುಂಟರಗಾಳಿಗೆ ಸಿಲುಕಿದ ವಿಮಾನ - ಸ್ವಲ್ಪದರಲ್ಲಿ ತಪ್ಪಿದ ಅನಾಹುತ - ಭಯಾನಕ ವೀಡಿಯೋ ವೈರಲ್
ಟರ್ಕಿಯ ಇಸ್ತಾಂಬುಲ್ನಲ್ಲಿ ಪ್ರಬಲ ಸುಂಟರಗಾಳಿಗೆ ಸಿಲುಕಿದ ಪೆಗಸಾಸ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ಅಪಾಯಕ್ಕೆ ಸಿಲುಕಿತ್ತು. ಆದರೆ, ಪೈಲಟ್ನ ಚಾಣಾಕ್ಷತನದಿಂದ ವಿಮಾನವು ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿ, ಸುರಕ್ಷಿತವಾಗಿ ಮತ್ತೆ ಟೇಕಾಫ್ ಆಗಿದೆ.
India Latest News Live 9 January 2026ಹೆದ್ದಾರಿಯಲ್ಲಿ ಬಿದ್ದ ಬೈಕರ್ ಐಫೋನ್ ಮೇಲಿಂದ ಪಾಸಾಯ್ತು 7 ಕಾರು, ಮಾಲೀಕನಿಗೆ ಉಳಿದಿದ್ದೇನು?
ಹೆದ್ದಾರಿಯಲ್ಲಿ ಬಿದ್ದ ಬೈಕರ್ ಐಫೋನ್ ಮೇಲಿಂದ ಪಾಸಾಯ್ತು 7 ಕಾರು, ಒಂದ ಹಿಂದೆ ಮತ್ತೊಂದರಂತೆ 7 ಕಾರುಗಳು ಐಫೋನ್ ಮೇಲಿಂದ ತೆರಳಿದೆ. ಕೊನೆಗೂ ಐಫೋನ್ ಎತ್ತಿಕೊಂಡ ಮಾಲೀಕ ಹೇಳಿದ್ದೇನು?
India Latest News Live 9 January 2026ದೇವಳದ ಚಿನ್ನ ಕದ್ದ ಕೇಸ್, ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕನ ಬಂಧನ!
India Latest News Live 9 January 2026ಖಾಸಗಿ ಬಸ್ ಭೀಕರ ಅಪಘಾತ, ಪ್ರಪಾತಕ್ಕೆ ಉರುಳಿ 8 ಪ್ರಯಾಣಿಕರು ಸಾವು, ಹಲವರಿಗೆ ಗಾಯ
ಖಾಸಗಿ ಬಸ್ ಭೀಕರ ಅಪಘಾತ, ಪ್ರಪಾತಕ್ಕೆ ಉರುಳಿ 8 ಪ್ರಯಾಣಿಕರು ಸಾವು, ಹಲವರಿಗೆ ಗಾಯ, 30 ರಿಂದ 35 ಮಂದಿ ಪ್ರಯಾಣಿಸುತ್ತಿದ್ದ ಬಸ್ ಪ್ರವಾತಕ್ಕೆ ಉರುಳಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ. ರಕ್ಷಣಾ ಕಾರ್ಯಾಚರಣೆ ಸಾಗಿದೆ.
India Latest News Live 9 January 2026IPL 2026 - ಆರ್ಸಿಬಿ ತವರು ಮೈದಾನ ಬೆಂಗಳೂರಿನಿಂದ ಶಿಫ್ಟ್ ಆಗುತ್ತಾ? ಪುಣೆ ಬಳಿಕ ಮತ್ತೆ 2 ಸ್ಟೇಡಿಯಂ ಎಂಟ್ರಿ!
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತನ್ನ ತವರು ಮೈದಾನವನ್ನಾಗಿ ಚಿನ್ನಸ್ವಾಮಿ ಸ್ಟೇಡಿಯಂ ಬಿಟ್ಟು ಬೇರೆ ಸ್ಟೇಡಿಯಂ ಆಯ್ಕೆ ಮಾಡುತ್ತಾ? ಇದೀಗ ಹೊಸದೊಂದು ಬೆಳವಣಿಗೆ ನಡೆದಿದೆ.
India Latest News Live 9 January 2026ಗಿರಿಜಾ ಓಕ್ ಬಳಿಕ ಇಂಟರ್ನೆಟ್ನಲ್ಲಿ ಹಲ್ಚಲ್ ಎಬ್ಬಿಸಿದ ನಟಿಯ ಫೋಟೋ..!
India Latest News Live 9 January 2026ಪತ್ನಿ ಇಬ್ಬರು ಮುದ್ದಾದ ಮಕ್ಕಳಿಗೆ ಗುಂಡಿಕ್ಕಿ ತಾನು ಸಾವಿಗೆ ಶರಣಾದ ಬಿಲ್ಡರ್ - ಮನೆಕೆಲಸದಾಕೆ ಬಂದಾಗ ಪ್ರಕರಣ ಬೆಳಕಿಗೆ
India Latest News Live 9 January 2026ಎರಡು ವರ್ಷಗಳ ಬಳಿಕ ದಿಟ್ಟ ನಿರ್ಧಾರ ಮಾಡಿದ ವಿರಾಟ್ ಕೊಹ್ಲಿ; ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿದ ಈ ಪೋಸ್ಟ್!
ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ಇದೀಗ ನ್ಯೂಜಿಲೆಂಡ್ ಸರಣಿಗೆ ಸಜ್ಜಾಗುತ್ತಿದ್ದಾರೆ. ಎರಡು ವರ್ಷಗಳ ಬಳಿಕ ತಮ್ಮ ಕ್ರಿಕೆಟ್ ಅಭ್ಯಾಸದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
India Latest News Live 9 January 2026ಇಂದೋರ್ನಲ್ಲಿ ಭೀಕರ ಕಾರು ಅಪಘಾತ, ಮಾಜಿ ಗೃಹ ಸಚಿವರ ಪುತ್ರಿ ಸೇರಿ ಮೂವರ ಸಾವು
ಇಂದೋರ್ನಲ್ಲಿ ಭೀಕರ ಕಾರು ಅಪಘಾತ, ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮಧ್ಯಪ್ರದೇಶ ಮಾಜಿ ಗೃಹ ಸಚಿವರ ಪುತ್ರಿ ಸೇರಿದಂತೆ ಮೂವರು ಮೃತಪಟ್ಟರೆ, ಮತ್ತೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
India Latest News Live 9 January 2026ಮದ್ಯ ಆಗಸದಲ್ಲಿ ಅಸ್ವಸ್ಥ - ಜೈಪುರ ಬೆಂಗಳೂರು ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ - ಆಸ್ಪತ್ರೆಯಲ್ಲಿ ಮಗು ಸಾವು
ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಒಂದು ವರ್ಷದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವಿಮಾನವನ್ನುಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯ್ತು. ಆದರೂ ಮಗು ಸಾವನ್ನಪ್ಪಿದಂತಹ ಘಟನೆ ನಡೆದಿದೆ.
India Latest News Live 9 January 2026ರೋಹಿತ್ ಗುಂಗಿನಿಂದ ಹೊರಬರದ ಜಯ್ ಶಾ! ಹಿಟ್ಮ್ಯಾನ್ಗೆ ಕ್ಯಾಪ್ಟನ್ ಎಂದು ಕರೆದ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ಐಸಿಸಿ ಚೇರ್ಮಬ್
India Latest News Live 9 January 2026ತಡರಾತ್ರಿ ಇಲಿ ವಿಷ ಆರ್ಡರ್ ಮಾಡಿದ ಮಹಿಳೆ, ಅಪಾಯ ಊಹಿಸಿದ ಡೆಲಿವರಿ ಎಜೆಂಟ್, ಮುಂದೇನಾಯ್ತು?
ತಡರಾತ್ರಿ ಇಲಿ ವಿಷ ಆರ್ಡರ್ ಮಾಡಿದ ಮಹಿಳೆ, ಪಾರ್ಸೆಲ್ ಹಿಡಿದು ಮಹಿಳೆಯ ಮನೆ ವಿಳಾಸಕ್ಕೆ ತೆರಳುತ್ತಿದ್ದಂತೆ ಡೆಲಿವರಿ ಎಜೆಂಟ್ ಅಪಾಯ ಊಹಿಸಿದ್ದಾನೆ. ಮಹಿಳೆಗೆ ಆರ್ಡರ್ ಡೆಲಿವರಿ ಮಾಡಲು ಬಾಗಿಲು ತಟ್ಟಿದ್ದಾನೆ, ಮುಂದೇನಾಯ್ತು?