ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ 'ಸ್ಪಿರಿಟ್' ಸಿನಿಮಾ ಬಿಡುಗಡೆ ಬಗ್ಗೆ ಹಬ್ಬಿದ್ದ ಎಲ್ಲಾ ಗಾಸಿಪ್ಗಳಿಗೆ ಚಿತ್ರತಂಡ ಫುಲ್ ಸ್ಟಾಪ್ ಇಟ್ಟಿದೆ. ಸಿನಿಮಾ ರಿಲೀಸ್ ತಡವಾಗಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
- Home
- News
- India News
- India Latest News Live: ಡಾರ್ಲಿಂಗ್ ಪ್ರಭಾಸ್ ಆ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ - ಕೊನೆಗೂ ಗಾಸಿಪ್ಗೆ ಬ್ರೇಕ್ ಹಾಕಿದ ಚಿತ್ರತಂಡ!
India Latest News Live: ಡಾರ್ಲಿಂಗ್ ಪ್ರಭಾಸ್ ಆ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ - ಕೊನೆಗೂ ಗಾಸಿಪ್ಗೆ ಬ್ರೇಕ್ ಹಾಕಿದ ಚಿತ್ರತಂಡ!

ಚಂಡೀಗಢ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್ಗೆ ಹೊರಡಲು ನಿಂತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರನ್ನು ಅಲ್ಲಿಂದ ತೆರವುಗೊಳಿಸಲಾಯಿತು.

ಪವರ್ ಬ್ಯಾಂಕ್ನಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಓವರ್ಹೆಡ್ಬಿನ್ಗಳಲ್ಲಿ ಹೊಗೆ ಕಾಣಿಸಿಕೊಂಡಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ.
ಈ ಬಗ್ಗೆ ಇಂಡಿಗೋ ಪ್ರಕಟಣೆ ಹೊರಡಿಸಿದ್ದು, ‘ಹೈದರಾಬಾದ್ನಿಂದ ಚಂಡೀಗಢಕ್ಕೆ ಪ್ರಯಾಣಿಸಿದ್ದ ಇಂಡಿಗೋ ವಿಮಾನ ಲ್ಯಾಂಡಿಂಗ್ ಬಳಿಕ ಪ್ರಯಾಣಿಕರ ವೈಯಕ್ತಿಕ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೆಂಕಿ ಹತ್ತಿಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು’ ಎಂದಿದೆ.
India Latest News Live 6 May 2026ಡಾರ್ಲಿಂಗ್ ಪ್ರಭಾಸ್ ಆ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ - ಕೊನೆಗೂ ಗಾಸಿಪ್ಗೆ ಬ್ರೇಕ್ ಹಾಕಿದ ಚಿತ್ರತಂಡ!
India Latest News Live 6 May 2026'ಆರ್ಟ್ ಆಫ್ ಲಿವಿಂಗ್'ನ 45ನೇ ವಾರ್ಷಿಕೋತ್ಸವ - ಪ್ರಧಾನಿ ಮೋದಿ ಭಾಷಣದ ಮೇಲೆ ವಿಶ್ವದ ಕಣ್ಣು!
ಪ್ರಧಾನಿ ನರೇಂದ್ರ ಮೋದಿಯವರು, ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು ಅದರ ಸಂಸ್ಥಾಪಕರಾದ ರವಿಶಂಕರ್ ಗುರೂಜಿಯವರ 70 ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾದ…
India Latest News Live 6 May 2026ತಮಿಳುನಾಡಿನಲ್ಲಿ ರಾಜಕೀಯ ಸುನಾಮಿ, ಬದ್ಧವೈರಿಗಳಾದ ಡಿಎಂಕೆ-ಎಐಡಿಎಂಕೆ ನಡುವೆ ಮೈತ್ರಿ?
ತಮಿಳುನಾಡಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ಬೆಳವಣಿಗೆಯನ್ನು ತಡೆಯಲು, ದಶಕಗಳ ಬದ್ಧವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗುವ ಸಾಧ್ಯತೆಗಳಿವೆ. ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಎರಡೂ ಪಕ್ಷಗಳು ಗುಪ್ತ ಮಾತುಕತೆ ನಡೆಸುತ್ತಿದೆ.
India Latest News Live 6 May 2026ತ್ರಿಶಾ ಸಿಎಂ ಆಗ್ತಾರಾ? ದಳಪತಿ 'ಗೆಳತಿ'ಯ ರಾಜಕೀಯ ಎಂಟ್ರಿ ಫಿಕ್ಸ್? ತ್ರಿಶಾಗೆ ತಿರುಚ್ಚಿ ಟಿಕೆಟ್?
ದಳಪತಿ ವಿಜಯ್ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ, ಎಲ್ಲರ ಚಿತ್ತ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ಅದ್ರಲ್ಲೂ ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ರು. ಅದೀಗ ನಿಜವಾಗುತ್ತಾ?
India Latest News Live 6 May 2026ಸಾಮಾನ್ಯ ಮಹಿಳೆಯಂತೆ ಬಸ್ ಸ್ಟಾಪ್ನಲ್ಲಿ ನಿಂತಿದ್ದ ಕಮಿಷನರ್; ಹತ್ತಿರ ಸುಳಿದ 40 ಪುರುಷರಿಗೆ ಸಿಕ್ಕಿತು ಶಾಕ್!
ಮಲ್ಕಾಜ್ಗಿರಿ ಪೊಲೀಸ್ ಕಮಿಷನರ್ ಸುಮತಿ ಅವರು ಮಹಿಳಾ ಸುರಕ್ಷತೆಯ ವಾಸ್ತವ ಸ್ಥಿತಿಯನ್ನು ತಿಳಿಯಲು ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ವೇಷ ಮರೆಸಿ ಕಾರ್ಯಾಚರಣೆ ನಡೆಸಿದರು. ಈ ವೇಳೆ 40 ಪುರುಷರಿಂದ ಅಸಭ್ಯ ವರ್ತನೆ ಎದುರಿಸಿದ ಅವರು, ಆರೋಪಿಗಳಿಗೆ ಶಿಕ್ಷೆ ಬದಲು ಕೌನ್ಸೆಲಿಂಗ್ ನೀಡಿದ್ದಾರೆ.
India Latest News Live 6 May 2026ಗೂಗಲ್ನಲ್ಲಿ ಭಾರೀ ಹುಡುಕಾಟ.. 'ದಳಪತಿ' ಧರ್ಮ ಯಾವುದು ಎಂಬ ಕನ್ಫ್ಯೂಸನ್ನಲ್ಲಿ ವಿಜಯ್ ಫ್ಯಾನ್ಸ್!
ಭಾರತದಲ್ಲಿ ಜಾತಿ, ಧರ್ಮ ಅನ್ನೋದು ಮೈಗಂಟಿಕೊಂಡ ಚರ್ಮದಂತೆ. ನಾವು ಬಿಟ್ಟೇನೆಂದರೂ ಜನ ಇದನ್ನ ಬಿಡೋದಿಲ್ಲ. ಸದ್ಯ ವಿಜಯ್ವಿಚಾರದಲ್ಲೂ ಅದೇ ನಡೀತಾ ಇದೆ. ಆದ್ರೆ ನಿಜವಾಗ್ಲೂ ವಿಜಯ್ಗೆ ಮತ ಹಾಕಿ ಗೆಲ್ಲಿಸಿದ್ದು ಯಾರು? ಈ ಸ್ಟೋರಿ ನೋಡಿ..
India Latest News Live 6 May 2026ಕಾರ್ಪೊರೇಟ್ ಲೋಕಕ್ಕೆ 'ಗುಡ್ಬೈ' - 11 ವರ್ಷಗಳ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ 35 ವರ್ಷದ ಯುವಕ!
India Latest News Live 6 May 2026ಸಲ್ಮಾನ್ ಖಾನ್ ಸೂಪರ್ಹೀರೋ ಸಿನಿಮಾಗೆ ಹಾಲಿವುಡ್ ಟಚ್ - ವಿಶ್ವದ ನಂ.1 VFX ಕಂಪನಿ ಎಂಟ್ರಿ?
ಸಲ್ಮಾನ್ ಖಾನ್ ಅವರ ಮುಂದಿನ ಸೂಪರ್ಹೀರೋ ಸಿನಿಮಾ, ಹಿಂದಿ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ಗಳಲ್ಲಿ ಒಂದಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ..
India Latest News Live 6 May 2026'ಬೇಕಾದರೆ ವಜಾ ಮಾಡಲಿ, ನಾನಂತೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡೋದಿಲ್ಲ..' ಹಠ ಸಡಿಲಿಸದ ನಿಂತ ಮಮತಾ ಬ್ಯಾನರ್ಜಿ!
ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ನಂತರ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ ಐತಿಹಾಸಿಕ ಬಹುಮತ ಗಳಿಸಿದೆ. ಈ ಸೋಲನ್ನು "ಬಲವಂತದ ಸೋಲು" ಎಂದು ಕರೆದಿರುವ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡಲು ನಿರಾಕರಿಸಿ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.
India Latest News Live 6 May 2026Vijay Trisha - ತೆರೆ ಜೋಡಿಯಿಂದ ವೈರಲ್ ವದಂತಿವರೆಗೆ.. ವಿಜಯ್-ತ್ರಿಶಾ ಸಂಬಂಧದ ಅಸಲಿಯತ್ತೇನು?
ಕಾಲಿವುಡ್ನ ಅಚ್ಚುಮೆಚ್ಚಿನ ಜೋಡಿ ವಿಜಯ್ ಮತ್ತು ತ್ರಿಶಾ ಅವರ ಸ್ನೇಹ, ಹಲವು ಯಶಸ್ವಿ ಚಿತ್ರಗಳ ನಂತರವೂ ಮುಂದುವರೆದಿದೆ. ವಿಜಯ್ ರಾಜಕೀಯ ಪ್ರವೇಶದ ನಂತರ, ಅವರ ಸಂಬಂಧದ ಕುರಿತ ವದಂತಿಗಳು ಮತ್ತು ಸಾರ್ವಜನಿಕರ ಕುತೂಹಲ ಮತ್ತೆ ಹೆಚ್ಚಾಗಿದೆ.
India Latest News Live 6 May 2026ದಳಪತಿ ಪಟ್ಟಾಭಿಷೇಕಕ್ಕೆ ಮ್ಯಾಜಿಕ್ ನಂಬರ್ ಅಡ್ಡಿ - ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್ಗೆ ರಾಜ್ಯಪಾಲರ ಶಾಕ್!
India Latest News Live 6 May 2026Raaka - ಅಲ್ಲು ಅರ್ಜುನ್ 'ರಾಕಾ' ಸಿನಿಮಾಕ್ಕೂ 'ಪುಷ್ಪ'ಗೂ ಲಿಂಕ್ ಇದ್ಯಾ? ಇಲ್ಲಿದೆ ಅಸಲಿ ಸತ್ಯ!
ಅಲ್ಲು ಅರ್ಜುನ್ ಅವರ ಮುಂಬರುವ ಸಿನಿಮಾ 'ರಾಕಾ' ಬಗ್ಗೆ ಭಾರೀ ಕುತೂಹಲ ಮೂಡಿದೆ. ಇದಕ್ಕೆ 'ಪುಷ್ಪ: ದಿ ರೈಸ್' ಜೊತೆಗಿನ ನಂಟು ಕಾರಣ ಎನ್ನಲಾಗುತ್ತಿದೆ. ಆದರೆ ಇದು ನಿಜವಾದ ಕಥೆಯ ಲಿಂಕ್ ಅಥವಾ ಕೇವಲ ಒಂದು ಸ್ಮಾರ್ಟ್ ಸ್ಟ್ರಾಟೆಜಿನಾ? ವಿವರ ಇಲ್ಲಿದೆ.
India Latest News Live 6 May 2026ಇಲ್ಲಿದೆ ಐಪಿಎಲ್ ಪ್ಲೇಆಫ್ ಲೆಕ್ಕಾಚಾರ - ಆರ್ಸಿಬಿಗೆ ಹೇಗಿದೆ ಚಾನ್ಸ್? ಉಳಿದ ತಂಡಗಳ ಅವಕಾಶ ಎಷ್ಟಿದೆ?
ಐಪಿಎಲ್ 2026ರ ಸೀಸನ್ನಲ್ಲಿ ಆರಂಭದಲ್ಲಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಪ್ಲೇಆಫ್ ರೇಸ್ಗೆ ಮರಳಿದೆ. ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಮತ್ತು ರಾಜಸ್ಥಾನ್ ರಾಯಲ್ಸ್ ಜೊತೆ 3 ಮತ್ತು 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.
India Latest News Live 6 May 2026ಬಂಗಾಳದಲ್ಲಿ ಬಿಜೆಪಿ ಗೆಲುವು - ಕಾಂಗ್ರೆಸ್ ಕಾರ್ಯಕರ್ತರ ಭರ್ಜರಿ ಸಂಭ್ರಮ- ಪಾರ್ಟಿ ಆಫೀಸ್ ಓಪನ್
India Latest News Live 6 May 2026ನರಕದಿಂದ ಬಂದ ಕುಟುಂಬದ ಜೊತೆ ಪಾರ್ಟಿ - ಬೆಚ್ಚಿಬೀಳಿಸೋ 'ಈವಿಲ್ ಡೆಡ್ ಬರ್ನ್' ಟ್ರೇಲರ್ ರಿಲೀಸ್
ಬಹುನಿರೀಕ್ಷಿತ 'ಈವಿಲ್ ಡೆಡ್ ಬರ್ನ್' ಸಿನಿಮಾದ ಟ್ರೇಲರ್ ಕೊನೆಗೂ ರಿಲೀಸ್ ಆಗಿದ್ದು, ಪ್ರೇಕ್ಷಕರನ್ನು ಮತ್ತೆ ಭಯಾನಕ ಜಗತ್ತಿಗೆ ಕರೆದೊಯ್ದಿದೆ. ಖ್ಯಾತ ಹಾರರ್ ಸರಣಿಯ ಆರನೇ ಸಿನಿಮಾ ಇದಾಗಿದ್ದು, ಸೆಬಾಸ್ಟಿಯನ್ ವಾನಿಸೆಕ್ ಇದರ ನಿರ್ದೇಶನ ಮಾಡಿದ್ದಾರೆ.
India Latest News Live 6 May 2026Viral Video - ಪಾಪರಾಜಿಗಳ ಮೇಲೆ ರಣಬೀರ್ ಗರಂ! 'ಸ್ವಲ್ಪ ದೂರ ನಿಲ್ಲಿ' ಅಂತ ಕ್ಲಾಸ್ ತಗೊಂಡಿದ್ದು ಯಾಕೆ?
ಮುಂಬೈನಲ್ಲಿ ಫ್ಯಾಮಿಲಿ ಜೊತೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಯನ್ನು ಪಾಪರಾಜಿಗಳು ಸುತ್ತುವರಿದರು. ಇದರಿಂದ ತಾಳ್ಮೆ ಕಳೆದುಕೊಂಡ ರಣಬೀರ್, ಫೋಟೋಗ್ರಾಫರ್ಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
India Latest News Live 6 May 2026ತಮಿಳುನಾಡು ಸಿಎಂ ಆಗಲಿರುವ ವಿಜಯ್ 10ನೇ ಕ್ಲಾಸ್ ಮಾರ್ಕ್ಸ್ ಕಾರ್ಡ್ ವೈರಲ್, ಗಣಿತದಲ್ಲಿ ವೀಕು, ಈ ವಿಷಯದಲ್ಲಿ ಟಾಪ್
India Latest News Live 6 May 2026ಜಾರ್ಜ್ಕುಟ್ಟಿಯ 'ದೃಶ್ಯಂ 3' ಫಸ್ಟ್ ಶೋ ಕೇರಳದಲ್ಲಲ್ಲ, ಹಾಗಾದ್ರೆ ಎಲ್ಲಿ? ಇಲ್ಲಿದೆ ಅಸಲಿ ಮಾಹಿತಿ
ಮಲಯಾಳಂ ಸಿನಿಮಾರಂಗದ ಸಾರ್ವಕಾಲಿಕ ಹಿಟ್ ಫ್ರಾಂಚೈಸಿಗಳಲ್ಲಿ 'ದೃಶ್ಯಂ' ಕೂಡ ಒಂದು. ಈಗ 'ದೃಶ್ಯಂ 3' ಸಿನಿಮಾ ಮೇ 21ಕ್ಕೆ ಥಿಯೇಟರ್ಗೆ ಬರ್ತಿದೆ. ಆದ್ರೆ, ಒಂದು ಹೊಸ ವರದಿ ಪ್ರಕಾರ, ಸಿನಿಮಾದ ಮೊದಲ ಶೋ ಕೇರಳದಲ್ಲಿ ನಡೆಯಲ್ಲ.
India Latest News Live 6 May 2026Jana Nayagan - ತಮಿಳುನಾಡಲ್ಲಿ ವಿಜಯ್ ಹವಾ, ಈಗ 'ಜನ ನಾಯಗನ್' ಸರದಿ! ಸಿನಿಮಾ ರಿಲೀಸ್ಗೆ ಸಿದ್ಧತೆ?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ 108 ಸೀಟುಗಳನ್ನು ಗೆದ್ದು ಅಧಿಕಾರದತ್ತ ಹೆಜ್ಜೆ ಇಟ್ಟಿದೆ. ಈ ರಾಜಕೀಯ ಸಂಭ್ರಮದ ನಡುವೆಯೇ, ಸೆನ್ಸಾರ್ ವಿವಾದದಿಂದಾಗಿ ನಿಂತುಹೋಗಿದ್ದ ಅವರ 'ಜನ ನಾಯಗನ್' ಸಿನಿಮಾವನ್ನು ಬಿಡುಗಡೆ ಮಾಡಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.
India Latest News Live 6 May 2026John Arokiasamy - ಸಿಎಂ ಪಟ್ಟಕ್ಕೆ ದಳಪತಿ ವಿಜಯ್; TVK ಐತಿಹಾಸಿಕ ಗೆಲುವಿನ ಹಿಂದಿನ 'ಚಾಣಕ್ಯ' ಇವರೇ ನೋಡಿ!
ಇಂದು ಗೂಗಲ್ನಲ್ಲಿ ವಿಜಯ್ ಹೆಸರಿಗಿಂತ ಹೆಚ್ಚಾಗಿ ಜಾನ್ ಆರೋಕಿಯಾಸಾಮಿ ಬಗ್ಗೆ ಜನ ಹುಡುಕಾಡುತ್ತಿದ್ದಾರೆ. ಸಿನಿಮಾ ಪರದೆಯ ಮೇಲೆ ನೂರಾರು ವಿಲನ್ಗಳನ್ನು ಒದ್ದೋಡಿಸುತ್ತಿದ್ದ ದಳಪತಿಯನ್ನು, ರಾಜಕೀಯದಲ್ಲಿ ಒಬ್ಬ ರಿಯಲ್ ಹೀರೊ ಆಗಿ ರೂಪಿಸಿದ ಶ್ರೇಯ ಈ 'ಪೊಲಿಟಿಕಲ್ ಮಾಸ್ಟರ್ಮೈಂಡ್'ಗೆ ಸಲ್ಲುತ್ತದೆ!