- Home
- News
- India News
- India Latest News Live: FIFA World Cup 2026 ಅರ್ಧ ಟೂರ್ನಿ ಮುಗಿದಿದೆ! ನಾಕೌಟ್ಗೆ ಯಾರು, ಹೊರಬಿದ್ದವರು ಯಾರು?
India Latest News Live: FIFA World Cup 2026 ಅರ್ಧ ಟೂರ್ನಿ ಮುಗಿದಿದೆ! ನಾಕೌಟ್ಗೆ ಯಾರು, ಹೊರಬಿದ್ದವರು ಯಾರು?

ಉದ್ಯಮಿ ಪುತ್ರ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಮದುವೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಕೇತನ್ ಹತ್ಯೆ ಮಾಡಿದ ಭಾವಿ ಪತ್ನಿ ಸಿಯಾ ಗೋಯೆಲ್ ಕ್ರೂ ಮನಸ್ಸನ್ನು ಜನರು ಖಂಡಿಸುತ್ತಿದ್ದಾರೆ. ಇದೇ ವೇಳೆ ಸಿಯಾ ಗೋಯೆಲ್ ತಾಯಿ ಘಟನೆ ಕುರಿತು ಮಾತನಾಡಿದ್ದಾರೆ. ನನ್ನ ಮಗಳು ತಪ್ಪು ಮಾಡಿದ್ದರೆ ನೇಣಿಗೆ ಹಾಕಿ. ಇತ್ತ ಸಿಯಾ ಗೊಯೆಲ್ ತಂದೆ ಕೂಡ ಇದೇ ಮಾತನ್ನು ಹೇಳಿದ್ದಾರೆ. ಮೋದಿ ಸರ್ಕಾರದ ಯೋಜನೆ, ವಿಪಕ್ಷಗಳ ಟೀಕೆ, ಹೊರ್ಮುಜ್ನಲ್ಲಿ ಸರಕು ಹಡಗಿನ ಮೇಲೆ ಇರಾನ್ ದಾಳಿ, ದೇಶ, ವಿದೇಶಗಳ ಕ್ಷಣ ಕ್ಷಣದ ಲೈವ್ ಸುದ್ದಿ ಅಪ್ಡೇಟ್ ಇಲ್ಲಿದೆ.
India Latest News Live 26 June 2026FIFA World Cup 2026 ಅರ್ಧ ಟೂರ್ನಿ ಮುಗಿದಿದೆ! ನಾಕೌಟ್ಗೆ ಯಾರು, ಹೊರಬಿದ್ದವರು ಯಾರು?
India Latest News Live 26 June 2026ಅಸ್ವಸ್ಥಗೊಂಡ ಸಿಯಾ ಗೊಯೆಲ್ ತಂದೆ ಆಸ್ಪತ್ರೆ ದಾಖಲು
ಸಿಯಾ ಗೊಯೆಲ್ ಅರೆಸ್ಟ್ ಆಗುತ್ತಿದ್ದಂತೆ ಕೇತನ್ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯಿಂದ ಆಘಾತಗೊಂಡಿರುವ ಸಿಯಾ ಗೊಯೆಲ್ ತಂದೆ ಪ್ರವೀಣ್ ಗೊಯೆಲ್ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಇತ್ತ ಕೇತನ್ ಹತ್ಯೆಯಲ್ಲಿ ಯಾರ ಕೈವಾಡವಿದ್ದರೂ ಶಿಕ್ಷೆ ಆಗಬೇಕು. ತಪ್ಪು ಯಾರೇ ಮಾಡಿದ್ದರು, ಅದು ನನ್ನ ಮಗಳಾಗಿದ್ದರೂ ಕಠಿಣ ಶಿಕ್ಷೆಯಾಗಲಿ ಎಂದು ಪ್ರವೀಣ್ ಗೊಯೆಲ್ ಆಗ್ರಹಿಸಿದ್ದಾರೆ.