ಮಧ್ಯಪ್ರಾಚ್ಯದ ಬಿಕ್ಕಟ್ಟು ತಿಳಿಯಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ವಾಣಿಜ್ಯ ಮತ್ತು ಕೈಗಾರಿಕಾ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಈ ನಿರ್ಧಾರದಿಂದಾಗಿ ಹೋಟೆಲ್ ಮತ್ತು ಕೈಗಾರಿಕಾ ವಲಯಕ್ಕೆ ಶೇ. 50 ರಷ್ಟು ಗ್ಯಾಸ್ ಪೂರೈಕೆ ಮುಕ್ತವಾಗಲಿದೆ.
- Home
- News
- India News
- India Latest News Live: ಹೋಟೆಲ್ ಮಾಲೀಕರು, ಉದ್ಯಮಿಗಳಿಗೆ ಕೇಂದ್ರದ ಬಿಗ್ ರಿಲೀಫ್; ವಾಣಿಜ್ಯ LPG ಸಿಲಿಂಡರ್ ಪೂರೈಕೆ ನಿಯಮ ಸಡಿಲಿಕೆ!
India Latest News Live: ಹೋಟೆಲ್ ಮಾಲೀಕರು, ಉದ್ಯಮಿಗಳಿಗೆ ಕೇಂದ್ರದ ಬಿಗ್ ರಿಲೀಫ್; ವಾಣಿಜ್ಯ LPG ಸಿಲಿಂಡರ್ ಪೂರೈಕೆ ನಿಯಮ ಸಡಿಲಿಕೆ!

ಭಾರತದ ಪಾಸ್ಪೋರ್ಟ್ ಇದೆ ಎಂದರೆ ನೀವು ಭಾರತೀಯ ಪೌರರಾಗಲ್ಲ. ಸಿಟಿಜನ್ಶಿಪ್ಗೆ ಭಾರತದ ಪಾಸ್ಪೋರ್ಟ್ ದಾಖಲೆ ನೀಡಲು ಸಾಧ್ಯವಿಲ್ಲ. ಪಾಸ್ಪೋರ್ಟ್ ಪ್ರಯಾಣದ ದಾಖಲೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತ ಸರ್ಕಾರದ ಸೌಲಭ್ಯ ಪಡೆಯಲು ಪೌರತ್ವ ದಾಖಲೆಯಾಗಿ ಪಾಸ್ಪೋರ್ಟ್ ಸಲ್ಲಿಕೆ ಕುರಿತು ಇದ್ದ ಗೊಂದಲಕ್ಕೆ ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಭಾರತದ ಪಾಸ್ಪೋರ್ಟ್ ಭಾರತೀಯರ ವಿದೇಶ ಪ್ರಯಾಣಕ್ಕಾಗಿ ನೀಡುವ ದಾಖಲೆ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.
India Latest News Live 25 June 2026ಹೋಟೆಲ್ ಮಾಲೀಕರು, ಉದ್ಯಮಿಗಳಿಗೆ ಕೇಂದ್ರದ ಬಿಗ್ ರಿಲೀಫ್; ವಾಣಿಜ್ಯ LPG ಸಿಲಿಂಡರ್ ಪೂರೈಕೆ ನಿಯಮ ಸಡಿಲಿಕೆ!
India Latest News Live 25 June 2026Rajinikanth - ಟ್ರೋಲರ್ಗಳ ಅಸಲೀ ಮುಖ ಬಿಚ್ಚಿಟ್ಟು ಸೀರಿಯಸ್ಸಾಗಿಯೇ ಟಾಂಗ್ ಕೊಟ್ಟ 'ಡೆಡ್ಲಿ ಡಾಕ್ಟರ್'
ಕಳೆದ ಜೂನ್ 22ರಂದು ತಮಿಳುನಾಡು ಸಿಎಂ ವಿಜಯ್ ತಮ್ಮ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕವಾಗಿ ಶುಭ ಕೋರಿದ್ದರು. ಆದರೆ ರಜನಿ ಅವರು ಟ್ವಿಟರ್ನಲ್ಲಿ ಪೋಸ್ಟ್ ಹಾಕಿಲ್ಲ ಎಂಬ ಕಾರಣಕ್ಕೆ ಟ್ರೋಲರ್ಗಳು ಕಿಡಿಕಾರಿದ್ದರು.
India Latest News Live 25 June 2026ICC Womens T20 World Cup - ಬಾಂಗ್ಲಾ ವಿರುದ್ಧ ಭಾರತಕ್ಕೆ 5 ವಿಕೆಟ್ಗಳ ಭರ್ಜರಿ ಜಯ!; ಸೆಮಿಫೈನಲ್ ಆಸೆ ಜೀವಂತ
ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕ ಮತ್ತು ಜೆಮಿಮಾ ರೊಡ್ರಿಗಸ್ ಅವರ ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ ಭಾರತ 137 ರನ್ಗಳ ಗುರಿಯನ್ನು ಸುಲಭವಾಗಿ ತಲುಪಿತು.
India Latest News Live 25 June 2026ಸೇನಾಧಿಕಾರಿಯ ವಾಹನ ಸೀಜ್ ಮಾಡಿದ್ದಕ್ಕೆ ಪೊಲೀಸ್ ಸ್ಟೇಷನ್ ಮೇಲೆ ದಾಳಿ, 40 ಆರ್ಮಿ ಅಧಿಕಾರಿಗಳ ವಿರುದ್ಧ FIR
ಜಮ್ಮು-ಕಾಶ್ಮೀರದ ಕಿಶ್ತ್ವಾಡ್ನಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಸೇನಾ ಅಧಿಕಾರಿಯ ವಾಹನ ಜಪ್ತಿ ಮಾಡಿದ್ದಕ್ಕೆ ಪ್ರತಿಯಾಗಿ ಸೇನಾ ಯೋಧರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.
India Latest News Live 25 June 2026ಒಂದು ಫ್ಲೋರ್ ಇಳಿಯಲು ಸೋಮಾರಿಯಾಗಿ ಪ್ರಾಣಕ್ಕೇ ಕುತ್ತು ತಂದುಕೊಂಡ! ಶಾಕಿಂಗ್ ವಿಡಿಯೋ ವೈರಲ್
India Latest News Live 25 June 2026ಚಿನ್ನ ಪ್ರಿಯರಿಗೆ ಬಂಪರ್ - 8 ತಿಂಗಳಿನಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದ ಬಂಗಾರದ ರೇಟ್- ಎಲ್ಲಿ ಎಷ್ಟಿದೆ
India Latest News Live 25 June 2026ದೇಶದ ಮೊದಲ ಖಾಸಗಿ ಚಿನ್ನದ ಗಣಿ ಆಂಧ್ರದಲ್ಲಿ ಆರಂಭ, ಇದಕ್ಕಿದೆ ಮೌರ್ಯ ಸಾಮ್ರಾಜ್ಯದ ಅಶೋಕ ಚಕ್ರವರ್ತಿಯ ಕಾಲದ ನಂಟು!
ಆಂಧ್ರಪ್ರದೇಶದ ಜೊನ್ನಗಿರಿಯಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ ಯೋಜನೆ ಅಧಿಕೃತವಾಗಿ ಆರಂಭವಾಗಿದೆ. ಜಿಯೋಮೈಸೋರ್ ಸರ್ವೀಸಸ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಈ ಗಣಿಯು ವಾರ್ಷಿಕ 2 ಟನ್ ಚಿನ್ನ ಉತ್ಪಾದಿಸುವ ಗುರಿ ಹೊಂದಿದ್ದು, ಇದು ಸ್ಥಳೀಯ ಉದ್ಯೋಗ ಸೃಷ್ಟಿ .
India Latest News Live 25 June 2026ಕೊನೆಗೂ ಕೈಬಿಟ್ಟ ವಿವಿ ಹೆಸರು ಬದಲಾವಣೆ ಪ್ರಸ್ತಾಪ; 'ಬರಕತುಲ್ಲಾ ವಿಶ್ವವಿದ್ಯಾಲಯ' ಹೆಸರೇ ಮುಂದುವರಿಕೆ
ಭೋಪಾಲ್ನ ಬರಕತುಲ್ಲಾ ವಿಶ್ವವಿದ್ಯಾಲಯದ ಹೆಸರನ್ನು 'ವಾಗ್ದೇವಿ ಭೋಜಪಾಲ್ ವಿಶ್ವವಿದ್ಯಾಲಯ' ಎಂದು ಬದಲಾಯಿಸುವ ಪ್ರಸ್ತಾಪವನ್ನು ಅಂತಿಮವಾಗಿ ಕೈಬಿಡಲಾಗಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರ ತೀವ್ರ ವಿರೋಧ ಮತ್ತು ಉಪಕುಲಪತಿ ರಾಜೀನಾಮೆಯ ನಂತರ, ವಿಶ್ವವಿದ್ಯಾಲಯವು ತನ್ನ ಮೂಲ ಹೆಸರಿನಲ್ಲೇ ಮುಂದುವರಿಯಲಿದೆ.
India Latest News Live 25 June 2026PM Narendra Modi ಭೇಟಿಯಾದ Amazon ಸಿಇಒ ಆಂಡಿ ಜಾಸ್ಸಿ, ಭಾರತದಲ್ಲಿ 48 ಬಿಲಿಯನ್ ಡಾಲರ್ ಹೂಡಿಕೆ ಘೋಷಣೆ!
India Latest News Live 25 June 2026ರಾಜ್ಯದ ಜನತೆಗೆ ಗುಡ್ನ್ಯೂಸ್ - ರಾಮೇಶ್ವರಂ ಯಾತ್ರೆಗೆ ವಿಶೇಷ ರೈಲು- ಹುಬ್ಬಳ್ಳಿ ಸೇರಿ 20ಕ್ಕೂ ಅಧಿಕ ಕಡೆ ನಿಲುಗಡೆ
ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ದಕ್ಷಿಣ ರೈಲ್ವೆಯು ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವಿನ ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ. ಈ ರೈಲು ಜುಲೈ 2026 ರಲ್ಲಿ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದ್ದು, ಕರ್ನಾಟಕದ ಯಾತ್ರಾರ್ಥಿಗಳಿಗೆ ರಾಮೇಶ್ವರಂ ದೇವಸ್ಥಾನಕ್ಕೆ ಪ್ರಯಾಣ ಒದಗಿಸುತ್ತದೆ.
India Latest News Live 25 June 2026ಹನಿಮೂನ್ ಹಂತಕಿ ಸೋನಂ ರೀತಿಯೇ ಕೇತನ್ ಮರ್ಡರ್ ಕೇಸೂ ಆಗತ್ತಾ? ಸಾವಿಗೆ ಬೆಲೆಯೇ ಇಲ್ವಾ- ಗಂಭೀರ ಚರ್ಚೆ
India Latest News Live 25 June 2026ಪ್ರೀತಿಯ 'ಬೆಲ್ಲಾ' ಅಗಲಿಕೆಗೆ ದಿಶಾ ಪಟಾನಿ ಕಣ್ಣೀರು; ಸೋಲ್ಮೇಟ್ನನ್ನು ಕಳೆದುಕೊಂಡು ನಟಿ ಕಂಗಾಲು!
ದಿಶಾ ಪಟಾನಿ ಅವರ ಈ ಪೋಸ್ಟ್ ಅಡಿಯಲ್ಲಿ ಅಭಿಮಾನಿಗಳು ಮತ್ತು ಬಾಲಿವುಡ್ನ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ದಿಶಾ ಹಂಚಿಕೊಳ್ಳುತ್ತಿದ್ದ ವಿಡಿಯೋಗಳಲ್ಲಿ ಬೆಲ್ಲಾ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಹೀಗಾಗಿ ದಿಶಾ ಅಭಿಮಾನಿಗಳಿಗೂ ಬೆಲ್ಲಾ ಅಚ್ಚುಮೆಚ್ಚಿನದಾಗಿತ್ತು!
India Latest News Live 25 June 2026ದೀಪ್ತಿ ಶರ್ಮಾ ವಿಶ್ವದಾಖಲೆಗೆ ಬೇಕಿದೆ ಇನ್ನೊಂದು ವಿಕೆಟ್..! ಇಂದೇ ನಿರ್ಮಾಣವಾಗುತ್ತಾ ಮಹಿಳಾ ಕ್ರಿಕೆಟ್ನ ಹೊಸ ಮೈಲಿಗಲ್ಲು?
ಮ್ಯಾಂಚೆಸ್ಟರ್: ಭಾರತದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ, ಇದೀಗ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಬಾಂಗ್ಲಾದೇಶ ಎದುರಿನ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಇದರ ಬೆನ್ನಲ್ಲೇ ವಿಶ್ವದಾಖಲೆ ಬರೆಯಲು ದೀಪ್ತಿ ಶರ್ಮಾ ಸಜ್ಜಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
India Latest News Live 25 June 2026ಸುಳ್ಳು ಹೇಳಿದ ನೀರವ್ ಮೋದಿಗೆ ಜಾಡಿಸಿದ ಲಂಡನ್ ಕೋರ್ಟ್, ಬ್ಯಾಂಕ್ ಆಫ್ ಇಂಡಿಯಾಗೆ ₹100 ಕೋಟಿ ಪಾವತಿಸುವಂತೆ ಆದೇಶ
India Latest News Live 25 June 2026ಅಸ್ಲಂ ಹುಸೈನ್ ಜೊತೆ ಲೀವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಆಪ್ ಮಾಜಿ ಅಭ್ಯರ್ಥಿ ನಂದಿನಿ ಶವವಾಗಿ ಪತ್ತೆ
ಆಪ್ ಪಕ್ಷದ ಮುನ್ಸಿಪಲ್ ಚುನಾವಣೆಯ ಮಾಜಿ ಅಭ್ಯರ್ಥಿ 23 ವರ್ಷದ ನಂದಿನಿ ಬೊಸಮಿಯಾ ಶವವಾಗಿ ಪತ್ತೆಯಾಗಿದ್ದಾಳೆ. ಅಸ್ಲಂ ಸಾಮ ಜೊತೆ ಲೀವ್ ಇನ್ ರಿಲೇಶನ್ಶಿಪ್ನಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ನಂದಿನಿ ಸಾವು ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ.
India Latest News Live 25 June 2026ಆ ಮೂವರು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದೆ, ಆದ್ರೆ...? ಎಫ್ಸ್ಟೀನ್ ಬ್ಲ್ಯಾಕ್ಮೇಲ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಬಿಲ್ ಗೇಟ್ಸ್
Bill Gates on Jeffrey Epstein: ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ಜಗತ್ತಿನ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿರುವ ಬಿಲ್ ಗೇಲ್ಸ್, ಜೆಫ್ರಿ ಎಫ್ಸ್ಟೀನ್ ಜತೆಗಿನ ಒಡನಾಟ ಹಾಗೂ ತಮ್ಮ ಅಕ್ರಮ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಬಿಲ್ ಗೇಟ್ಸ್ ಹೇಳಿದ್ದೇನು? ನೋಡೋಣ ಬನ್ನಿ
India Latest News Live 25 June 2026Obsession - ಭಾರತದಲ್ಲಿ ‘ಒಬ್ಸೆಷನ್’ ಕಲೆಕ್ಷನ್ ರಿಪೋರ್ಟ್ ಕೇಳಿ ದಂಗಾದ ನಿರ್ದೇಶಕ; ಕರ್ನಾಟಕದಲ್ಲೂ ಭಾರೀ ಗಳಿಕೆ!
"ಕಂಟೆಂಟ್ ಈಸ್ ಕಿಂಗ್" ಎಂಬುದನ್ನು 'ಒಬ್ಸೆಷನ್' ಸಿನಿಮಾ ಮತ್ತೊಮ್ಮೆ ಸಾಬೀತುಪಡಿಸಿದೆ. ಸಿನಿಮಾ ಮಾಡಲು ಕೋಟಿ ಕೋಟಿ ಹಣ ಬೇಕಿಲ್ಲ, ಗಟ್ಟಿಯಾದ ಕಥೆ ಮತ್ತು ನಿರೂಪಣೆ ಇದ್ದರೆ ಸಾಕು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಈ ಚಿತ್ರದ ಗಳಿಕೆ ಎಷ್ಟು? ಈ ಸ್ಟೋರಿ ನೋಡಿ!
India Latest News Live 25 June 2026ಕ್ವಿಕ್ ಕಾಮರ್ಸ್ ಜಗತ್ತಿನಲ್ಲಿ ಅಪ್ಡೇಟ್ - 300ಸಿಟಿಗಳಿಗೆ 'ಅಮೆಜಾನ್ ನೌ' ವಿಸ್ತರಣೆ, ಭಾರತಕ್ಕೆ ಬಂದ್ರು ಜಾಗತಿಕ ಸಿಇಒ!
India Latest News Live 25 June 2026ಮೆಗಾ ಹವಾ - ಪ್ರಧಾನಿ ಮೋದಿಯಿಂದ ರಾಮ್ ಚರಣ್ಗೆ ಹೊಸ ಪಟ್ಟ! ಅಪ್ಪ ಚಿರಂಜೀವಿಗೆ ಖುಷಿ ತಡೆಯೋಕಾಗ್ತಿಲ್ಲ!
"ಮಗ ಬೆಳೆದಿದ್ದಾನೆ ಎಂದು ನಾನು ವಿಶ್ರಾಂತಿ ಪಡೆಯುವುದಿಲ್ಲ. ಕೆಲಸ ಮಾಡುವುದೇ ನಮಗೆ ಆನಂದ. ನಮ್ಮ ಕುಟುಂಬದಲ್ಲಿ ಸೋಮಾರಿತನಕ್ಕೆ ಜಾಗವೇ ಇಲ್ಲ" ಎನ್ನುವ ಮೂಲಕ ತಮ್ಮ ಸಿನಿಮಾ ಪಯಣ ಮುಂದುವರಿಯಲಿದೆ ಎಂಬ ಭರವಸೆ ನೀಡಿದರು. ಇನ್ನೂ ಏನ್ ಹೇಳಿದ್ರು? ಈ ಸ್ಟೋರಿ ನೋಡಿ..
India Latest News Live 25 June 2026ಸಾವಿನ ಸಂಖ್ಯೆ 10 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಸಾಧ್ಯತೆ, ವೆನಿಜುವೆಲಾ ಭೀಕರ ಭೂಕಂಪದ ಚಿತ್ರಣ
ವೆನಿಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದೆ. ಮೃತರ ಸಂಖ್ಯೆ 10 ಸಾವಿರಿಂದ 1 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ವೆನಿಜುವೆಲಾದ ಭೀಕರ ಭೂಕಂಪದ ಚಿತ್ರಗಳು ಇಲ್ಲಿವೆ.