ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!

ಮಧ್ಯ ಪ್ರಾಚ್ಯದ ಯುದ್ಧ ಶುರುವಾಗ್ತಿದ್ದ ಹಾಗೇ, ಭಾರತದಲ್ಲಿ ಆತಂಕದ ಕಾರ್ಮೋಡ ಆವರಿಸಿಕೊಳ್ತು. ಏನೋ ಅನಾಹುತ ಆಗ್ತಿದೆ ಅನ್ನೋದು ಅರ್ಥವಾಗೋದ್ರಲ್ಲಿ, ಮೊದಲಿಗೆ ಏರಿಕೆಯಾಗಿದ್ದು ಎಲ್‌ಪಿಜಿ ಗ್ಯಾಸ್ ಬೆಲೆ. ಅದರ ಪರಿಣಾಮ ಏನೇನಾಯ್ತು ನೆನಪಿದೆ ಅಲ್ವಾ? ಈಗ ಆ ಕತೆ ಏನಾಗಿದೆ ನೋಡಿ.

Share this Video
  • FB
  • Linkdin
  • Whatsapp

ಫೆಬ್ರವರಿ ಮುಗಿಯೋ ಹೊತ್ತಿಗೆ ಸರಿಯಾಗಿ ಶುರುವಾಗಿತ್ತು, ಆಪರೇಷನ್ ಎಪಿಕ್ ಫ್ಯೂರಿ. ಅಮೆರಿಕಾ ಇಸ್ರೇಲ್ ಒಟ್ಟಾಗಿ ನಡೆಸಿದ ಆ ದಾಳಿ, ಇಡೀ ಪ್ರಪಂಚದ ನಿದ್ದೆಗೆಡಿಸಿತ್ತು. ಅದಕ್ಕೆ ಮುಖ್ಯ ಕಾರಣ, ಹಾರ್ಮುಜ್ ಜಲಸಂಧಿ. ಅದು ಬಂದ್ ಆಗ್ತಿದ್ದ ಹಾಗೇ, ಭಾರತದ ಪಾಲಿಗೆ ಬರೋಬ್ಬರಿ 40% ಕಚ್ಚಾ ತೈಲ, ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆಯೇ ಅಪಾಯದಲ್ಲಿ ಬಿದ್ದಿತ್ತು. 90ರ ದಶಕದ ಗಲ್ಫ್ ಯುದ್ಧದ ನೆನಪು ತರುವಷ್ಟು ಭಯಾನಕವಾಗಿತ್ತು ಈ ಪರಿಸ್ಥಿತಿ. 

ಆದ್ರೆ ಈಗ ಅಂತೂ ಆ ಯುದ್ಧ ಮುಗಿಗಿದೆ. ಯುದ್ಧ ಘೋಷಿಸಿದ್ದ ರಾಷ್ಟ್ರಗಳು, ಕೂತು ಮಾತಾಡೋ ನಿರ್ಣಯಕ್ಕೆ ಬಂದಿವೆ. ಆತಂಕದ ಕಾರ್ಮೋದ ಕರಗಿ, ನೀಲ ಗಗನ ಹೊಳೆಯುತ್ತಿದೆ. ಆದ್ರೆ ಇದರಿಂದ ಭಾರತಕ್ಕೇನು ಲಾಭ? ನಮ್ಮ ಜೇಬಿನ ಭಾರ ಕಡಿಮೆಯಾಗುತ್ತಾ? ಅಸಲಿಗೆ ಆ ಯುದ್ಧಕ್ಕೂ, ನಮ್ಮನೆ ಖರ್ಚಿಗೂ ಏನು ನಂಟು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

Related Video