
ಗೆಳತಿ ಮನೆಯಲ್ಲಿ Vaishak ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
Krishi Thapanda: ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ ಗೆಳಯನ ಸೂಸೈಡ್ ! - ಗೆಳತಿ ಮನೆಯಲ್ಲಿ ವೈಶಾಖ್ ನೇಣಿಗೆ ಶರಣಾಗಿದ್ದೇಕೆ ? - 7 ಕೋಟಿ ಕೇಸ್.. ಜೈಲು.. ಬೇಲು.. ಮಾನಸಿಕ ಖಿನ್ನತೆ..! - ಕೌಟಂಬಿಕ ಕಲಹ..
ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ ಗೆಳಯನ ಸೂಸೈಡ್ ! - ಗೆಳತಿ ಮನೆಯಲ್ಲಿ ವೈಶಾಖ್ ನೇಣಿಗೆ ಶರಣಾಗಿದ್ದೇಕೆ ? - 7 ಕೋಟಿ ಕೇಸ್.. ಜೈಲು.. ಬೇಲು.. ಮಾನಸಿಕ ಖಿನ್ನತೆ..! - ಕೌಟಂಬಿಕ ಕಲಹ.. ಅಂತ್ಯಕ್ರಿಯೆ ಮಿಸ್.. ತಲೆ ಚಚ್ಚಿಕೊಂಡ ತಾಪಂಡ ! - ಇದೇ ಈ ಹೊತ್ತಿನ ವಿಶೇಷ ಸೂಸೈಡ್ ಸುತ್ತ ಕೃಷಿ ತಾಪಂಡ. ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ ಕಳೆದ ಎರಡ್ಮೂರು ವರ್ಷಗಳಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ತಾನೆ ಇದ್ದಾರೆ.. ಇದೀಗ ಗೆಳೆಯನ ಆತ್ಮ*ಹ*ತ್ಯೆ ಪ್ರಕರಣದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಕೃಷಿಯ ಮಾಜಿ ಸ್ನೇಹಿತ ಅರವಿಂದ್ ರೆಡ್ಡಿ ಬೆದರಿಕೆ ಕೇಸ್ನಲ್ಲಿ ಜೈಲು ಸೇರಿದ್ದ ವೈಶಾಖ್ ಇದೀಗ ಆತ್ಮ*ಹ*ತ್ಯೆ ಮಾಡ್ಕೊಂಡಿದ್ದಾರೆ.
ಅದು ಕೂಡ ಕೃಷಿ ತಾಪಂಡ ಮನೆಯಲ್ಲಿ.. ಈ ಆತ್ಮ*ಹ*ತ್ಯೆ ಹಿಂದಿನ ರಿಯಲ್ ಸ್ಟೋರಿಗಳು ಏನೇನು? ಹೌದು, ಕೃಷಿ ವೈಶಾಖ್ ಇಬ್ಬರ ಸ್ನೇಹ ಮುಂದ್ವರೆದಿದ್ರೆ ಯಾರಿಗೂ ಅಭ್ಯಂತರವಿರಲಿಲ್ಲ.. ಆದ್ರೆ, ಈ ಸ್ನೇಹದ ಗಾಢ ಎಷ್ಟಿತ್ತು ಅಂದ್ರೆ.. ರೆಡ್ಡಿಗೆ ವಾರ್ನಿಂಗ್ ಮಾಡುವವರೆಗೂ ಬೆಳೆಯಿತು. ಕೃಷಿ ತಾಪಂಡ - ವೈಶಾಖ್ ಸ್ನೇಹ ಜಗತ್ತಿಗೆ ಗೊತ್ತಾಗಿದ್ದೆ ಅರವಿಂದ್ ರೆಡ್ಡಿಗೆ ಬಂದ ಆ ಒಂದು ಬೆದರಿಕೆಯಿಂದಾಗಿ.. ಅದಾಗಲೇ ರೆಡ್ಡಿ ವಿಚಾರಕ್ಕೆ ವಿವಾದ ಮಾಡ್ಕೊಂಡಿದ್ದ ತಾಪಂಡ ಮತ್ತೊಂದು ವಿವಾದವನ್ನು ಮೈಮೇಲೆ ಎಳ್ಕೊಂಡಿದ್ದಳು.. ಇದ್ರಿಂದಾಗಿ ವೈಶಾಖ್ ವೈಯಕ್ತಿಕ ಬದುಕ ಮೂರಾಬಟ್ಟೆಯಾಗಿದ್ದು ಮಾತ್ರವಲ್ಲ.
ಆತ್ಮ*ಹ*ತ್ಯೆವರೆಗೂ ಬಂದು ನಿಲ್ತು. ಕೃಷಿ ತಾಪಂಡ ಬುದುಕು ಈಗ ಹೇಗಾಗಿದೆ ನೋಡಿ.. ಆದ್ರೆ, ಆಕೆಯ ಬದುಕು ಎಷ್ಟು ಸಂದರವಾಗಿತ್ತು.. ಏನೆಲ್ಲಾ ಇತ್ತು ಏನೆಲ್ಲಾ ಕಳ್ಕೊಂಡಿದ್ದಾಳೆ. ಕೃಷಿ ತಾಪಂಡ.. ಸ್ಯಾಂಡಲ್ವುಡ್ ಗ್ಲಾಮರಸ್ ನಟಿ.. ವೃತ್ತಿ ಬದುಕಿನಲ್ಲಿ ಎತ್ತರಕ್ಕೆ ಬೆಳೆಯುತ್ತಿರುವಾಗಲೇ ಮಾಡಬಾರದ್ದನ್ನ ಮಾಡ್ಕೊಂಡು ಮೂಲೆಗುಂಪಾಗುವಂತೆ ಆಗೋಗಿದೆ.. ಇದೀಗ ಸ್ನೇಹಿತನ ಆತ್ಮ*ಹ*ತ್ಯೆ ಪ್ರಕರಣವೂ ಆಕೆಯ ಸುತ್ತಲೆ ಸುತ್ತುತ್ತಿದೆ.. ಆದ್ರೆ, ಆಕೆಯ ಸ್ಯಾಂಡಲ್ವುಡ್ ಬದುಕು ಹೇಗಿತ್ತು ಅನ್ನೋದನ್ನ ಈ ಸಂದರ್ಭದಲ್ಲಿ ನೀವು ನೋಡಲೇಬೇಕಿದೆ.