ಮಂಗಳೂರಿನ ಎಡಪದವಿನಲ್ಲಿ, ಅಯ್ಯಪ್ಪ ಪೂಜಾ ಸ್ಥಳದ ಬಳಿ ಚುರುಮುರಿ ಅಂಗಡಿ ಹಾಕಿದ್ದ ಉಮರಬ್ಬ ಎಂಬಾತ, ಆಹಾರಕ್ಕಾಗಿ ಬಂದ ಹಸುವಿನ ಮೂತಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದಾನೆ. ಈ ಅಮಾನುಷ ಕೃತ್ಯಕ್ಕೆ ಸ್ಥಳೀಯರು ಹಾಗೂ ಅಯ್ಯಪ್ಪ ಭಕ್ತರಿಂದ ತೀವ್ರ ಆಕ್ರೋಶ .
- Home
- Karnataka Districts
- Bengaluru Urban
- Karnataka News Live: ಮಂಗಳೂರು - ಎಡಪದವಿನಲ್ಲಿ ಅಮಾನವೀಯ ಕೃತ್ಯ; ಹಸುವಿನ ಮೂತಿಗೆ ಚೂರಿ ಹಾಕಿದ ವ್ಯಾಪಾರಿ ಉಮರಬ್ಬ!
Karnataka News Live: ಮಂಗಳೂರು - ಎಡಪದವಿನಲ್ಲಿ ಅಮಾನವೀಯ ಕೃತ್ಯ; ಹಸುವಿನ ಮೂತಿಗೆ ಚೂರಿ ಹಾಕಿದ ವ್ಯಾಪಾರಿ ಉಮರಬ್ಬ!

ಬೆಂಗಳೂರಿನಲ್ಲಿ ಫಿಲ್ಮಿ ಶೈಲಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಕಸರತ್ತು ಮಾಡುವ ಪುಂಡರಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಸುರಂಜನ್ ದಾಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ 19 ವರ್ಷದ ಭಾಸ್ಕರ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರ ಕಾರ್ಯಾಚರಣೆ ವೇಳೆ ಭಾಸ್ಕರ್ ಸಿಕ್ಕಿ ಬಿದ್ದಿದ್ದಾನೆ. ಭಾಸ್ಕರ್ ಮೊಬೈಲ್ನಲ್ಲಿ ಇದೇ ರೀತಿ ವ್ಹೀಲಿಂಗ್ ಮಾಡಿರುವ ಹಲವು ವಿಡಿಯೋಗಳು ಪತ್ತೆಯಾಗಿದೆ. ಇತ್ತ ಬೆಂಗಳೂರಲ್ಲಿ ಥಣಿಸಂದ್ರದಲ್ಲಿ ಮನೆಗಳ ತೆರವು ಪ್ರಕರಣ ಕೋಲಾಹಲ ಸೃಷ್ಟಿಸಿದೆ. ಕೋಗಿಲು ಬಳಿ ಇದೀಗ ಥಣಿಸಂದ್ರದಲ್ಲಿ ರಾಜಕೀಯ ಮೇಲಾಟಗಳು ಶುರುವಾಗಿದೆ. ರಾಜ್ಯ ರಾಜಾಕರಣ ಸೇರಿದಂತೆ ಇಂತಿನ ಪ್ರತಿ ಕ್ಷಣದ ಅಪ್ಡೇಟ್ ಇಲ್ಲಿದೆ.
Karnataka News Live 11 January 2026ಮಂಗಳೂರು - ಎಡಪದವಿನಲ್ಲಿ ಅಮಾನವೀಯ ಕೃತ್ಯ; ಹಸುವಿನ ಮೂತಿಗೆ ಚೂರಿ ಹಾಕಿದ ವ್ಯಾಪಾರಿ ಉಮರಬ್ಬ!
Karnataka News Live 11 January 2026ಬಾಗಲಕೋಟೆ - ಕಬ್ಬು ಕಟಾವು ಮಷಿನ್ನಲ್ಲಿ ಶಾರ್ಟ್ ಸರ್ಕಿಟ್; 20 ಎಕರೆ ಕಬ್ಬು ಬೆಂಕಿಗೆ ಆಹುತಿ!
Karnataka News Live 11 January 2026ದ್ವೇಷ ಭಾಷಣ ಮಾಡಲೆಂದೇ ವಿರೋಧ ಪಕ್ಷದವರು ಮಸೂದೆಗೆ ವಿರೋಧ? - ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ
ದ್ವೇಷ ಭಾಷಣ ಮಸೂದೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಶಾಸಕ ಎ.ಎಸ್. ಪೊನ್ನಣ್ಣ ಪ್ರಶ್ನಿಸಿದ್ದಾರೆ. ದ್ವೇಷ ಭಾಷಣ ಮಾಡಲೆಂದೇ ಅವರು ಮಸೂದೆಯನ್ನು ವಿರೋಧಿಸುತ್ತಿದ್ದಾರೆಯೇ ಎಂದು ಕೇಳಿದ್ದು, ಸದನದಲ್ಲಿ ಸರಿಯಾಗಿ ಚರ್ಚಿಸದ ವಿಪಕ್ಷಗಳ ನಡೆಯನ್ನು ಟೀಕಿಸಿದರು.
Karnataka News Live 11 January 2026ರಾಯಚೂರು - ಟಿಪ್ಪರ್ ಡಿಕ್ಕಿಯಾಗಿ ಟ್ರಾಕ್ಟರ್ ಪಲ್ಟಿ; ಹತ್ತಿ ಮಾರಲು ಹೋಗಿದ್ದ ರೈತ ಸಾವು!
Karnataka News Live 11 January 2026ಬಿಗ್ಬಾಸ್ ಮನೆಯಿಂದ ಹೊರಬಿದ್ದ ರಾಶಿಕಾ, ಶೋ ಮುಗಿಯುವ ಮುನ್ನ ಶಾಕಿಂಗ್ ನ್ಯೂಸ್ ಹೇಳಿದ ಸುದೀಪ್!
Karnataka News Live 11 January 2026MGNREGA - ಗಾಂಧೀಜಿಯವರ ಇತಿಹಾಸ ಮುಚ್ಚಿ ಹಾಕುವ ಯತ್ನ; ಹೀಗಾಗಿಯೇ ನರೇಗಾ ಹೆಸರು ಬದಲಾವಣೆ ಎಂದ ಪೊನ್ನಣ್ಣ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮನ್ರೇಗಾ ತಿದ್ದುಪಡಿ ಹೇಳಿಕೆಗೆ ಶಾಸಕ ಎ.ಎಸ್. ಪೊನ್ನಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಿದ್ದುಪಡಿಯು ಉದ್ಯೋಗ ಖಾತ್ರಿಗೆ ಮಾರಕವಾಗಿದ್ದು, ಚರ್ಚೆ ನಡೆಸದೇ ಜಾರಿಗೊಳಿಸಿರುವುದು ಗಾಂಧೀಜಿಯವರ ಕೊಡುಗೆ ಮುಚ್ಚಿಹಾಕುವ ಪ್ರಯತ್ನ ಎಂದು ಅವರು ಆರೋಪಿಸಿದರು.
Karnataka News Live 11 January 2026ಕಾಂಗ್ರೆಸ್ ಶಾಸಕಿ ನಯನಾ ಮೊಟಮ್ಮಗೂ ಅಶ್ಲೀಲ ಕಾಮೆಂಟ್ಸ್ ಕಾಟ; ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್!
Karnataka News Live 11 January 2026'ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾದ್ದು ಕೊ*ಲೆ..' ಪೊಲೀಸರಿಗೆ ಈ ಅನುಮಾನ ಬಂದಿದ್ದಕ್ಕೆ ಇದೇ ಕಾರಣ..
Sharmila Kushalappa Murder: How Bengaluru Police Cracked the Techie’s Death Case ಬೆಂಗಳೂರಿನಲ್ಲಿ ಟೆಕ್ಕಿ ಶರ್ಮಿಳಾ ಕುಶಾಲಪ್ಪ ಅವರ ಸಾವು ಶಾರ್ಟ್ ಸರ್ಕ್ಯೂಟ್ನಿಂದಲ್ಲ, ಅದೊಂದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
Karnataka News Live 11 January 2026Bigg Boss ಟ್ವಿಸ್ಟ್ ಮೇಲೆ ಟ್ವಿಸ್ಟ್ - ಅವರಲ್ಲ, ಇವರಲ್ಲ ರೋಬೋಟ್ ಹೇಳಿದ್ದೇ ಬೇರೆ ಹೆಸ್ರನ್ನು! ಕಿಚ್ಚನ ರಿಯಾಕ್ಷನ್ ನೋಡಿ
ಬಿಗ್ಬಾಸ್ ಕನ್ನಡ 12 ಫಿನಾಲೆ ಸಮೀಪಿಸುತ್ತಿದ್ದಂತೆ, ಮನೆಗೆ ರೋಬೋಟ್ ಒಂದು ಅಚ್ಚರಿಯ ಪ್ರವೇಶ ನೀಡಿದೆ. ಸುದೀಪ್ ಅವರು ಇಷ್ಟದ ಸ್ಪರ್ಧಿ ಯಾರೆಂದು ಕೇಳಿದಾಗ, ರೋಬೋಟ್ ಇಬ್ಬರ ಹೆಸರನ್ನು ಹೇಳುವ ಮೂಲಕ ಬಿಗ್ಬಾಸ್ ಜಾಣ್ಮೆಯಿಂದ ವಿವಾದವನ್ನು ತಪ್ಪಿಸಿದೆ.
Karnataka News Live 11 January 2026ಮದುವೆ ಆಗೋದೇ ಕೆಲಸ, ಮೂರಾಯ್ತು ಈಗ 4ನೇ ಗಂಡ ಬೇಕಂತೆ - ಪತಿ ಸೈಕೋ ಎಂದು ಕೇಸ್ ಹಾಕಿದ್ದ ಟೆಕ್ಕಿಗೆ ಗಂಡನ ತಿರುಗೇಟು!
Karnataka News Live 11 January 2026ಬೆಂಗಳೂರು - ಮಂಗಳೂರು ಟೆಕ್ಕಿ ಉಸಿರುಗಟ್ಟಿ ಸಾವು ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರನ ಬಂಧಿಸಿದ ಪೊಲೀಸರು!
Karnataka News Live 11 January 2026ಬೆಳಗಾವಿ ರೈಲು, ರಸ್ತೆ, ವಿಮಾನ ಯೋಜನೆಗಳು ವಿಳಂಬ, ರೈಲ್ವೆ ಯೋಜನೆಗೆ 407 ಎಕರೆ ಜಮೀನು ಈಗಾಗಲೇ ಸ್ವಾಧೀನ
ಸಂಸದ ಜಗದೀಶ ಶೆಟ್ಟರ ಅವರು ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ, ಆರು ಪಥದ ಹೆದ್ದಾರಿ, ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಭೂಸ್ವಾಧೀನ, ಕಾಮಗಾರಿ ವಿಳಂಬ ಹಲವು ಅಡಚಣೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು
Karnataka News Live 11 January 2026ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿ ಇಸ್ಕಾನ್ ವತಿಯಿಂದ 41ನೇ ವರ್ಷದ ಶ್ರೀ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ
ಬೆಂಗಳೂರಿನ ಇಸ್ಕಾನ್ ವತಿಯಿಂದ 41ನೇ ವರ್ಷದ ಶ್ರೀ ಕೃಷ್ಣ-ಬಲರಾಮ ರಥಯಾತ್ರೆಯು ಅತ್ಯಂತ ಸಂಭ್ರಮದಿಂದ ನಡೆಯಿತು. ಮಾಧವತೀರ್ಥ ಮಠದ ವಿದ್ಯಾ ವಲ್ಲಭ ಮಾಧವ ತೀರ್ಥ ಶ್ರೀಗಳು ಮತ್ತು ಮಧು ಪಂಡಿತ್ ದಾಸರ ಉಪಸ್ಥಿತಿಯಲ್ಲಿ ನಡೆದ ಈ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
Karnataka News Live 11 January 2026Shobhaa De - ಸೈಫ್ ಅಲಿ ಖಾನ್ ಚಾಕು ಇರಿತದ ಪ್ರಕರಣ; ಹಲವು ಸಂಶಯ ಹೇಳಿ ಪ್ರಶ್ನೆಗಳನ್ನು ಕೇಳಿದ ಶೋಭಾ ಡೇ!
"ಅವನು ಹುಚ್ಚನಂತೆ ನನ್ನ ಮೇಲೆರಗಿ ಎರಡು ಚಾಕುಗಳಿಂದ ಮನಬಂದಂತೆ ಇರಿಯಲು ಶುರುಮಾಡಿದ. ನಾನು ತಡೆಯಲು ಪ್ರಯತ್ನಿಸಿದೆ, ಆದರೆ ನನ್ನ ಬೆನ್ನಿಗೆ ಜೋರಾದ ಪೆಟ್ಟು ಬಿತ್ತು. ಅಲ್ಲಿಗೆ ಅರ್ಧ ಚಾಕು ನನ್ನ ಬೆನ್ನಿನೊಳಗೆ ಇಳಿದಿತ್ತು" ಎಂದು ಸೈಫ್ ಆ ಕರಾಳ ಕ್ಷಣಗಳನ್ನು ನೆನಪಿಸಿಕೊಂಡಿದ್ದರು. ಆ ಕೇಸ್ ಏನಾಯ್ತು?
Karnataka News Live 11 January 2026ಪರಶುರಾಮ ಥೀಂ ಪಾರ್ಕ್ನ ಲಕ್ಷಾಂತರ ಮೌಲ್ಯದ ಸೊತ್ತು ಕದ್ದವರು ಅರೆಸ್ಟ್, ಕಳ್ಳರು ಕಾಂಗ್ರೆಸ್ ಬ್ರದರ್ಸ್ ಎಂದ ಶಾಸಕ ಸುನೀಲ್ ಕುಮಾರ್!
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ನಲ್ಲಿ ನಡೆದ ತಾಮ್ರದ ಹೊದಿಕೆ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹2.18 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಶಾಸಕ ಸುನಿಲ್ ಕುಮಾರ್ ಕಳ್ಳರನ್ನು 'ಕಾಂಗ್ರೆಸ್ ಬ್ರದರ್ಸ್' ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka News Live 11 January 2026ಜಾತಿ ನಿಂದನೆ ಮಾಡಿ ಶ್ರೀರಾಮುಲು ಮೇಲೆ ದಾಳಿಗೆ ಸಂಚು? ಬಳ್ಳಾರಿ ಗಲಾಟೆಗೆ ರೆಡ್ಡಿ ಬಿಗ್ ಟ್ವಿಸ್ಟ್, ಬೆಚ್ಚಿಬಿಳಿಸುವ ಸಾಕ್ಷ್ಯ ಬಿಡುಗಡೆ!
ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಫೋಟಕ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಶ್ರೀರಾಮುಲು ಅವರ ಮೇಲಿನ ಪೂರ್ವನಿಯೋಜಿತ ದಾಳಿ ಎಂದು ಆರೋಪಿಸಿರುವ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
Karnataka News Live 11 January 2026ಚಡ್ಡಿ ಹಾಕಿ ಓಡಾಡಬೇಡಮ್ಮ ಅಂತ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ಹೋಂಗಾರ್ಡ್ಗೆ ರಕ್ತಬರುವಂತೆ ಥಳಿಸಿದ ಯುವತಿ!
ಬೆಂಗಳೂರಿನ ಕೆ.ಆರ್ ಪುರಂನಲ್ಲಿ, ಚಡ್ಡಿ ಧರಿಸಿದ್ದ ಯುವತಿಗೆ ಬುದ್ಧಿವಾದ ಹೇಳಿದ ಹಿರಿಯ ಹೋಂಗಾರ್ಡ್ ಲಕ್ಷ್ಮಿನರಸಮ್ಮ ಅವರ ಮೇಲೆ ಯುವತಿ ತೀವ್ರವಾಗಿ ಹಲ್ಲೆ ಮಾಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Karnataka News Live 11 January 2026Udyami Vokkaliga Expo 2026 - ಸಾಲ ಕೊಡುವ ಮುನ್ನ ಹುಷಾರ್, ನಿಮ್ಮ ನೆರಳನ್ನೂ ನಂಬಬೇಡಿ - ಡಿಕೆಶಿ ಲೈಫ್ ಲೆಸನ್
ಬೆಂಗಳೂರಿನ 'ಉದ್ಯಮಿ ಒಕ್ಕಲಿಗ ಎಕ್ಸ್ಪೋ'ದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಉದ್ಯಮದಲ್ಲಿ ನಂಬಿಕೆಯ ಮಹತ್ವ ಮತ್ತು ಸಾಲ ನೀಡುವಲ್ಲಿನ ಎಚ್ಚರಿಕೆ ಕುರಿತು ಸಲಹೆ ನೀಡಿದರು. ತಮ್ಮನ್ನು 'ಬಂಡೆ' ಎಂದು ಕರೆಯುವುದರ ಹಿಂದಿನ ಶ್ರಮ, ರಾಜಕೀಯ ಏರಿಳಿತಗಳನ್ನು ಹಂಚಿಕೊಂಡರು.
Karnataka News Live 11 January 2026ನರೇಗಾ ಸಮರ - ಹೆಚ್ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್ಗೆ ಬರ್ತೀನಿ ಎಂದು ಪಂಥಾಹ್ವಾನ!
ನರೇಗಾ ಯೋಜನೆ ಕುರಿತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನೀಡಿದ್ದ ಚರ್ಚೆಯ ಸವಾಲನ್ನು ಡಿಸಿಎಂ ಡಿಕೆ ಶಿವಕುಮಾರ್ ಅಧಿಕೃತವಾಗಿ ಸ್ವೀಕರಿಸಿದ್ದಾರೆ. ತಮ್ಮ ಕನಕಪುರ ತಾಲೂಕಿಗೆ ನರೇಗಾದಲ್ಲಿ ನಂಬರ್ ಒನ್ ಪ್ರಶಸ್ತಿ ಬಂದಿದ್ದು, ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಬೆರಳ ತುದಿಯಲ್ಲಿದೆ ಎಂದು ಹೇಳಿದ್ದಾರೆ.
Karnataka News Live 11 January 2026ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ - ಎಷ್ಟು ಬುದ್ಧಿವಂತನೋ, ಅಷ್ಟೇ ಹಠವಾದಿ, ಏನೂ ಉಳಿದೇ ಇಲ್ಲ ಬೂದಿಯಾಗಿ ಬಿಟ್ಟಿದ್ದಾನೆ - ಮಾವ ಕಣ್ಣೀರು
ದಾವಣಗೆರೆಯ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಅವರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ ಅವರ ಇಬ್ಬರು ಮಕ್ಕಳು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಚಂದ್ರಶೇಖರ್ ಅವರ ಹಠಮಾರಿ ಸ್ವಭಾವವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರ ಹೇಳಿಕೆ.