MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿ ಇಸ್ಕಾನ್ ವತಿಯಿಂದ 41ನೇ ವರ್ಷದ ಶ್ರೀ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ

ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿ ಇಸ್ಕಾನ್ ವತಿಯಿಂದ 41ನೇ ವರ್ಷದ ಶ್ರೀ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ

ಬೆಂಗಳೂರಿನ ಇಸ್ಕಾನ್ ವತಿಯಿಂದ 41ನೇ ವರ್ಷದ  ಶ್ರೀ ಕೃಷ್ಣ-ಬಲರಾಮ ರಥಯಾತ್ರೆಯು ಅತ್ಯಂತ ಸಂಭ್ರಮದಿಂದ ನಡೆಯಿತು. ಮಾಧವತೀರ್ಥ ಮಠದ ವಿದ್ಯಾ ವಲ್ಲಭ ಮಾಧವ ತೀರ್ಥ ಶ್ರೀಗಳು ಮತ್ತು ಮಧು ಪಂಡಿತ್ ದಾಸರ ಉಪಸ್ಥಿತಿಯಲ್ಲಿ ನಡೆದ ಈ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.  

2 Min read
Author : Ravi Janekal
Published : Jan 11 2026, 06:45 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ವೈಭವದ ರಥಯಾತ್ರೆಗೆ ಚಾಲನೆ

ಬೆಂಗಳೂರಿನ ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿ ಇಸ್ಕಾನ್ ವತಿಯಿಂದ 41ನೇ ವರ್ಷದ ಶ್ರೀ ಶ್ರೀ ಕೃಷ್ಣ-ಬಲರಾಮ ರಥಯಾತ್ರೆಯು ಅತ್ಯಂತ ಭಕ್ತಿಭಾವದಿಂದ ಜರುಗಿತು. ವೇದಘೋಷಗಳ ನಡುವೆ ರಥದ ಮೇಲೆ ವಿರಾಜಮಾನರಾಗಿದ್ದ ಕೃಷ್ಣ-ಬಲರಾಮರಿಗೆ ವಿಶೇಷ ದರ್ಶನ ಮತ್ತು ಆರತಿ ನೆರವೇರಿಸಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪ್ರದಾಯದಂತೆ ರಸ್ತೆ ಶುದ್ಧೀಕರಣ ಮಾಡಿ, ರಥವನ್ನು ಎಳೆಯುವ ಮೂಲಕ ಈ ಪವಿತ್ರ ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

25
Image Credit : Asianet News

ಪರಮಪೂಜ್ಯ ಶ್ರೀಗಳ ಆಶೀರ್ವಚನ

ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಂಬಿಹಳ್ಳಿಯ ಶ್ರೀ ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾ ವಲ್ಲಭ ಮಾಧವ ತೀರ್ಥ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಚನ ನೀಡಿದರು. "ಇದು ಕೇವಲ ಬೆಂಗಳೂರಿನ ಬೆಟ್ಟವಲ್ಲ, ಇದು ಸಾಕ್ಷಾತ್ ಮಥುರಾ-ಬೃಂದಾವನದಂತಹ ಪುಣ್ಯಕ್ಷೇತ್ರ. ಇಂತಹ ಉತ್ಸವಗಳು ಜನರ ಮನಸ್ಸಿನಲ್ಲಿ ಭಕ್ತಿ, ಶಾಂತಿ ಮತ್ತು ಒಗ್ಗಟ್ಟನ್ನು ಬೆಳೆಸುತ್ತವೆ" ಎಂದು ಮಾರ್ಮಿಕವಾಗಿ ನುಡಿದರು.

Related Articles

Related image1
Vaikuntha Ekadashi: ಇಸ್ಕಾನ್ ಹರೇ ಕೃಷ್ಣಗಿರಿ, ವೈಕುಂಠ ಗಿರಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ!
Related image2
ಇಸ್ಕಾನ್ ಬ್ರಹ್ಮಚಾರಿಗಳ ಜೀವನ ಶೈಲಿ, ವೇತನವೆಷ್ಟು ಸಿಗುತ್ತದೆ? ಖರ್ಚು ಯಾರು ಭರಿಸುತ್ತಾರೆ?
35
Image Credit : Asianet News

ಮಾನವೀಯ ಮೌಲ್ಯಗಳ ಸಾರಿದ ಮಧು ಪಂಡಿತ್ ದಾಸರು

ಇಸ್ಕಾನ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸರು ಈ ಸಂದರ್ಭದಲ್ಲಿ ಮಾತನಾಡಿ, ಶ್ರೀಲ ಪ್ರಭುಪಾದರು ಆರಂಭಿಸಿದ ಈ ರಥಯಾತ್ರೆಯ ಉದ್ದೇಶವನ್ನು ಸ್ಮರಿಸಿದರು. ಭಕ್ತಿ, ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಇನ್ನಷ್ಟು ಬಲಪಡಿಸಲು ಈ ರಥಯಾತ್ರೆ ಪೂರಕವಾಗಿದೆ ಎಂದು ಅವರು ತಿಳಿಸಿದರು. ಜಾಗತಿಕ ಹರೇ ಕೃಷ್ಣ ಚಳವಳಿಯ ಪ್ರಮುಖರು ಈ ದೈವಿಕ ಸಂಭ್ರಮಕ್ಕೆ ಸಾಕ್ಷಿಯಾದರು.

45
Image Credit : Asianet News

ರಾಜಾಜಿನಗರದ ಬೀದಿಗಳಲ್ಲಿ ಕೃಷ್ಣ-ಬಲರಾಮರ ಸವಾರಿ

ಸುಮಾರು 26 ಅಡಿ ಎತ್ತರದ, ಆಧುನಿಕ ಸುರಕ್ಷಾ ವ್ಯವಸ್ಥೆ ಹೊಂದಿದ ಭವ್ಯ ರಥವು ರಾಜಾಜಿನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಹರೇ ಕೃಷ್ಣ ಕೀರ್ತನೆಗಳು ಮತ್ತು ಭಕ್ತಿಗೀತೆಗಳ ಗಾಯನ ಇಡೀ ಪರಿಸರದಲ್ಲಿ ದೈವಿಕ ಕಳೆಯನ್ನು ಹೆಚ್ಚಿಸಿತ್ತು. ರಥ ಸಾಗುವ ಹಾದಿಯುದ್ದಕ್ಕೂ ಭಕ್ತರು ಸಾಲುಗಟ್ಟಿ ನಿಂತು ಭಗವಂತನ ದರ್ಶನ ಪಡೆದು ಪುನೀತರಾದರು.

55
Image Credit : Asianet News

ನಿರಂತರ ಸೇವೆ ಮತ್ತು ಪ್ರಸಾದ ವಿತರಣೆ

ಈ ಬೃಹತ್ ಉತ್ಸವದ ಯಶಸ್ಸಿಗಾಗಿ ನೂರಾರು ಸ್ವಯಂಸೇವಕರು ಹಗಲಿರುಳು ಶ್ರಮಿಸಿದರು. ರಥಯಾತ್ರೆಯ ಉದ್ದಕ್ಕೂ ವ್ಯವಸ್ಥಿತವಾಗಿ ಭಕ್ತರನ್ನು ನಿರ್ವಹಿಸುವುದರ ಜೊತೆಗೆ, ಬಂದಿದ್ದ ಸಾವಿರಾರು ಜನರಿಗೆ ಉಚಿತವಾಗಿ ಮಹಾಪ್ರಸಾದವನ್ನು ವಿತರಿಸಲಾಯಿತು. ಭಕ್ತರ ಸಂಭ್ರಮ ಮತ್ತು ಸ್ವಯಂಸೇವಕರ ಶ್ರದ್ಧೆ ರಥಯಾತ್ರೆಗೆ ವಿಶೇಷ ಮೆರುಗು ನೀಡಿತು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕೃಷ್ಣ
ಹಬ್ಬ
ಬೆಂಗಳೂರು

Latest Videos
Recommended Stories
Recommended image1
ಶನಿಗೆ ಕೋಪ ಬಂದ್ರೆ ಸರ್ವನಾಶ, ಶನಿ ದಾನವನ್ನು ಇವರಿಗೆ ಅಪ್ಪಿತಪ್ಪಿಯೂ ನೀಡ್ಬೇಡಿ
Recommended image2
ಮಕರ ಸಂಕ್ರಾಂತಿಯಂದು ಅಪರೂಪದ ಯೋಗ, ಈ 4 ರಾಶಿ ಮೇಲೆ ಹಣದ ಮಳೆ
Recommended image3
ಜನವರಿ 17 ರಿಂದ ಈ ಮೂರು ರಾಶಿಗೆ ಉತ್ತಮ ದಿನ ಆರಂಭ, ಬಡ್ತಿ,ಲಾಭ ಪಕ್ಕಾ
Related Stories
Recommended image1
Vaikuntha Ekadashi: ಇಸ್ಕಾನ್ ಹರೇ ಕೃಷ್ಣಗಿರಿ, ವೈಕುಂಠ ಗಿರಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ!
Recommended image2
ಇಸ್ಕಾನ್ ಬ್ರಹ್ಮಚಾರಿಗಳ ಜೀವನ ಶೈಲಿ, ವೇತನವೆಷ್ಟು ಸಿಗುತ್ತದೆ? ಖರ್ಚು ಯಾರು ಭರಿಸುತ್ತಾರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved