MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ: ಎಷ್ಟು ಬುದ್ಧಿವಂತನೋ, ಅಷ್ಟೇ ಹಠವಾದಿ, ಏನೂ ಉಳಿದೇ ಇಲ್ಲ ಬೂದಿಯಾಗಿ ಬಿಟ್ಟಿದ್ದಾನೆ: ಮಾವ ಕಣ್ಣೀರು

ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ: ಎಷ್ಟು ಬುದ್ಧಿವಂತನೋ, ಅಷ್ಟೇ ಹಠವಾದಿ, ಏನೂ ಉಳಿದೇ ಇಲ್ಲ ಬೂದಿಯಾಗಿ ಬಿಟ್ಟಿದ್ದಾನೆ: ಮಾವ ಕಣ್ಣೀರು

ದಾವಣಗೆರೆಯ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಅವರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ ಅವರ ಇಬ್ಬರು ಮಕ್ಕಳು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಚಂದ್ರಶೇಖರ್ ಅವರ ಹಠಮಾರಿ ಸ್ವಭಾವವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರ ಹೇಳಿಕೆ.

3 Min read
Author : Gowthami K
| Updated : Jan 11 2026, 04:03 PM IST
Share this Photo Gallery
  • FB
  • TW
  • Linkdin
  • Whatsapp
17
ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ
Image Credit : Asianet News

ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ

ದಾವಣಗೆರೆ ನಗರವನ್ನು ಬೆಚ್ಚಿಬೀಳಿಸಿದ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರಶೇಖರ ಅವರ ಮಾವ ಕರಿಬಸಪ್ಪ ಅವರು ಈ ಕುರಿತು ಭಾವುಕ ಹೇಳಿಕೆ ನೀಡಿದ್ದಾರೆ. ಒಂದು ಕಡೆ ಚಂದ್ರಶೇಖರ್ ಸಂಕೋಳ್ ಇಬ್ಬರು ಮಕ್ಕಳು ಕೂಡ ಆತ್ಮ*ಹತ್ಯೆಗೆ ಯತ್ನಿಸಿದ್ದು ಇಬ್ಬರ ಸ್ಥಿತಿ ಕೂಡ ಚಿಂತಾಜನಕವಾಗಿದೆ.

27
“ಬುದ್ಧಿವಂತನಾಗಿದ್ದರೂ ಹಠ ಜಾಸ್ತಿ ಇತ್ತು”
Image Credit : Asianet News

“ಬುದ್ಧಿವಂತನಾಗಿದ್ದರೂ ಹಠ ಜಾಸ್ತಿ ಇತ್ತು”

ಚಂದ್ರಶೇಖರ ಬಗ್ಗೆ ಮಾತನಾಡಿದ ಕರಿಬಸಪ್ಪ ಅವರು, ಅವನು ಎಷ್ಟು ಬುದ್ಧಿವಂತನಾಗಿದ್ದನೋ, ಅಷ್ಟೇ ಹಠವಾದಿಯಾಗಿದ್ದ. ರಾಜಕೀಯ ಬಿಟ್ಟು ಯಾವುದಾದರೂ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳು ಎಂದರೂ ಅವನು ಕೇಳುತ್ತಿರಲಿಲ್ಲ. ಚಂದ್ರಶೇಖರ ಬಳಿ 40 ರಿಂದ 50 ಲಕ್ಷ ರೂಪಾಯಿ ಮೌಲ್ಯದ ಹಾರ್ಡ್‌ವೇರ್ ಅಂಗಡಿ ದಾಸ್ತಾನು ಇದ್ದು, ಯುಗಾದಿ ನಂತರ ಮತ್ತೆ ವ್ಯಾಪಾರ ಆರಂಭಿಸುವ ಯೋಜನೆಯಲ್ಲಿದ್ದರು ಅವರ ವೈಯಕ್ತಿಕ ಸಮಸ್ಯೆಗಳು ನಮಗೆ ತಿಳಿದಿರಲಿಲ್ಲ. ಈಗ ನೋಡಿದರೆ ಏನೂ ಉಳಿದಿಲ್ಲ, ಎಲ್ಲವೂ ಬೂದಿಯಾಗಿ ಹೋಗಿದೆ. ಏನೂ ಉಳಿದೇ ಇಲ್ಲ ಬೂದಿಯಾಗಿ ಬಿಟ್ಟಿದ್ದಾನೆ ಎಂದು ನೋವಿನಿಂದ ಹೇಳಿದ್ದಾರೆ.

Related Articles

Related image1
ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ಮಕ್ಕಳಿಂದ ದುಡುಕಿನ ನಿರ್ಧಾರ
Related image2
ಹುಬ್ಬಳ್ಳಿಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆ, ಹಾವೇರಿ ಮಹಿಳೆಯ ಅತ್ಯಾ*ಚಾರವೆಸಗಿ ವಿಡಿಯೋ ಹರಿಬಿಟ್ಟ ಯುವಕರು!
37
ಆಸ್ತಿ, ಕುಟುಂಬ ಇದ್ದರೂ ಹಠವೇ ಕಾರಣ?
Image Credit : Asianet News

ಆಸ್ತಿ, ಕುಟುಂಬ ಇದ್ದರೂ ಹಠವೇ ಕಾರಣ?

ಅವನಿಗೆ ಜಮೀನೂ ಇತ್ತು. ಎಷ್ಟೇ ಸಾಲ ಇದ್ದರೂ ಕೂಲಿ ಕೆಲಸ ಮಾಡಿಕೊಂಡು ಬದುಕಬಹುದಿತ್ತು. ತಂದೆ ಇದ್ದರು, ತಮ್ಮನೂ ಇದ್ದ. ಸಹಾಯ ಮಾಡುವವರು ಸಾಕಷ್ಟು ಇದ್ದರೂ ಅವನ ಹಠ ಮಾತ್ರ ಜಾಸ್ತಿ ಇತ್ತು ಎಂದು ಕರಿಬಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಒಳ್ಳೆಯದು ಮಾಡಿದರೂ ವ್ಯರ್ಥವಾದಂತಾಯಿತು

ಈ ಘಟನೆಯಾಗುವ ಎಂಟು ದಿನಗಳ ಹಿಂದಷ್ಟೇ ಚಂದ್ರಶೇಖರ ಅವರ ಮಕ್ಕಳ ಮದುವೆ ವಿಚಾರವಾಗಿ ತಂದೆಯವರು ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆದರೆ, ಅದನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ, ನನಗೆ ಬಿಟ್ಟು ಬಿಡಿ ಎಂದು ಚಂದ್ರಶೇಖರ ಹೇಳುತ್ತಿದ್ದ ಎಂದು ಕರಿಬಸಪ್ಪ ತಿಳಿಸಿದ್ದಾರೆ. ಚಂದ್ರಶೇಖರ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ, ಅದು ಹೊಳೆಯಲ್ಲಿ ಹುಣಸೇಹಣ್ಣು ತೊಳೆದ ಹಾಗೆ ಆಯ್ತು. ಯಾರಿಗೂ ಅದು ನೆನಪಾಗಲಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.

47
ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ
Image Credit : Asianet News

ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ

ಮಕ್ಕಳು ಆತ್ಮ*ಹತ್ಯೆಗೆ ಯತ್ನಿಸಿದ ಬಗ್ಗೆ ಮಾತನಾಡಿದ ಕರಿಬಸಪ್ಪ, ಅವನೂ ದಾವಣಗೆರೆ ನಗರದಲ್ಲಿ ಇದ್ದಾಗ ಮಕ್ಕಳು ಆತ್ಮ*ಹತ್ಯೆ ಯತ್ನಿಸಿದ ಮಾಹಿತಿ ಸಿಕ್ಕಿದೆ. ಮಗ ಚೇತರಿಸಿಕೊಳ್ಳುತ್ತಿದ್ದು, ಮಗಳ ಸ್ಥಿತಿ ಗಂಭೀರವಾಗಿದೆ. ಮಕ್ಕಳು ಹೀಗೆ ಮಾಡಿಕೊಂಡರಲ್ಲ ಎಂದು ಮನನೊಂದು ಮಾಡಿಕೊಂಡಿರಬಹುದು ಎಂದು ಕರಿಬಸಪ್ಪ ಹೇಳಿದ್ದಾರೆ.

57
ಉದ್ಧಟತನ ಮಾಡಿ ಹೀಗೆ ಮಾಡಿಕೊಂಡುಬಿಟ್ಟ: ಮಾಜಿ ಸಚಿವ ರವೀಂದ್ರನಾಥ ಕಣ್ಣೀರು
Image Credit : Asianet News

ಉದ್ಧಟತನ ಮಾಡಿ ಹೀಗೆ ಮಾಡಿಕೊಂಡುಬಿಟ್ಟ: ಮಾಜಿ ಸಚಿವ ರವೀಂದ್ರನಾಥ ಕಣ್ಣೀರು

ಇನ್ನು ಚಂದ್ರಶೇಖರ ಸಂಕೋಳ್ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ ಸಂಬಂಧಿಯಾಗಿದ್ದು, ಘಟನಾ ಸ್ಥಳಕ್ಕೆ ಭೇಟಿಕೊಟ್ಟರು. ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿರುವ ಮೃತದೇಹ ಕಂಡು ಕಣ್ಣೀರಾದರು. ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಕಣ್ಣೀರಿಟ್ಟ ಎಸ್.ಎ.ರವೀಂದ್ರನಾಥ, ಎಷ್ಟು ಜನಮನ್ನಣೆ ಗಳಿಸಿದ್ರೆ ಏನ್ ಮಾಡೋದು ಹೀಗೆ ಮಾಡಿಕೊಂಡುಬಿಟ್ಟ. ಕೆಲಸ ಚೆನ್ನಾಗಿ ಮಾಡ್ತಿದ್ದ ಆದ್ರೆ ಕಂಟ್ರೋಲ್‌‌ನಲ್ಲಿ ಇರಲಿಲ್ಲ ಅವನಿಗೆ. ನನಗೂ ಈಗ ಬೆಳಗ್ಗೆ ಗೊತ್ತಾಯಿತು. ಏನಾಗಿದೆಯೋ ಗೊತ್ತಿಲ್ಲ, ಮನೆಯಲ್ಲಿ ಜಗಳವಾಡುತ್ತಿದ್ದ ಅಂತಾ ಹೇಳುತ್ತಿದ್ರು. ಎಷ್ಟೇ ಜನಪರ ಕೆಲಸ ಮಾಡಿದರೂ ಉಪಯೋಗ ಆಗಲಿಲ್ಲ ಅಲ್ಲ. ಕರೆದು ಬುದ್ದಿವಾದ ಹೇಳಬೇಕಂದ್ರೆ ಕರೆದರೂ ಅವನು ಮಾತನಾಡುತ್ತಿರಲಿಲ್ಲ. ಉದ್ಧಟತನ ಮಾಡಿ ಹೀಗೆ ಮಾಡಿಕೊಂಡುಬಿಟ್ಟ. ಚಂದ್ರಶೇಖರ ಯಾರ ಮಾತೂ ಕೇಳುತ್ತಿರಲಿಲ್ಲ. ಹೀಗೆ ನಡೆಯಬಾರದಿತ್ತು ನಡೆದಿದೆ ಎಂದರು.

67
ಸಾವಿನ ಸುತ್ತ ಅನುಮಾನ ಹಲವು
Image Credit : Asianet News

ಸಾವಿನ ಸುತ್ತ ಅನುಮಾನ ಹಲವು

ಇನ್ನು ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ ಅವರ ಶವ ಪತ್ತೆಯಾಗಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಾಥಮಿಕ ಮಾಹಿತಿಯಂತೆ, ತಮ್ಮ ಮಕ್ಕಳು ಆತ್ಮ*ಹತ್ಯೆಗೆ ಯತ್ನಿಸಿದ ಸುದ್ದಿ ತಿಳಿದು ಮನನೊಂದೇ ಚಂದ್ರಶೇಖರ ಆತ್ಮ*ಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ತಂದೆ ಸಮಯಕ್ಕೆ ಸರಿಯಾಗಿ ಮನೆಗೆ ಬರ್ತಿಲ್ಲ ಎಂಬ ಕಾರಣಕ್ಕೆ ಮನನೊಂದ ಮಗ ಮತ್ತು ಮಗಳು ಆತ್ಮ*ಹತ್ಯೆಗೆ ಯತ್ನಿಸಿದ್ದರು. ಮಕ್ಕಳಿಬ್ಬರೂ ತಾಯಿಗೆ ವಿಷಯ ತಿಳಿಸಿ, ಮೂವರು ಸೇರಿ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೇಳಿದ್ದಾರಂತೆ. ಆದರೆ ತಾಯಿ ಬುದ್ಧಿವಾದ ಹೇಳಿದರೂ, ಮಕ್ಕಳು ದುಡುಕಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಮನೆಯ ಮೇಲ್ಮಹಡಿಗೆ ಹೋಗುವಷ್ಟರಲ್ಲಿ ಮಕ್ಕಳು ಫ್ಯಾನ್‌ಗೆ ನೇಣು ಬಿಗಿದು ಆತ್ಮ*ಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

77
ಸಾವಿಗೂ ಮುನ್ನ ಫೋನ್ ಮಾಡಿದ್ದ ಮಕ್ಕಳು
Image Credit : Asianet News

ಸಾವಿಗೂ ಮುನ್ನ ಫೋನ್ ಮಾಡಿದ್ದ ಮಕ್ಕಳು

ಇನ್ನೊಂದೆಡೆ, ಘಟನೆಯ ದಿನ ರಾತ್ರಿ ಮಕ್ಕಳು ಚಂದ್ರಶೇಖರರಿಗೆ ಫೋನ್ ಮಾಡಿ ನಿಮ್ಮ ಜೊತೆ ಮಾತನಾಡಬೇಕು ಎಂದು ಕೇಳಿದ್ದಾರಂತೆ. ಆಗ ಚಂದ್ರಶೇಖರ, “ನಾನು ಬರುತ್ತೇನೆ, ಇರಿ” ಎಂದು ಮಕ್ಕಳಿಗೆ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಅದಾದ ಬಳಿಕ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರು, ಮೇಲ್ನೋಟಕ್ಕೆ ಇದು ಆತ್ಮ*ಹತ್ಯೆಯ ಪ್ರಕರಣವಾಗಿ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ. ಸೊಕೊ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಎಫ್‌ಎಸ್‌ಎಲ್ ತಂಡವೂ ಪರಿಶೀಲನೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಚಂದ್ರಶೇಖರ ಅವರು ಕಾರಿನ ಹಿಂಬದಿ ಸೀಟ್‌ನಲ್ಲಿಯೇ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ದಾವಣಗೆರೆ
ಆತ್ಮಹತ್ಯೆ
ಸುದ್ದಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಧಾರವಾಡ: ಅಂಡಮಾನ್–ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಹೃದಯಾಘಾಕ್ಕೆ ಬಲಿ!
Recommended image2
ಹುಬ್ಬಳ್ಳಿಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆ, ಹಾವೇರಿ ಮಹಿಳೆಯ ಅತ್ಯಾ*ಚಾರವೆಸಗಿ ವಿಡಿಯೋ ಹರಿಬಿಟ್ಟ ಯುವಕರು!
Recommended image3
ಶಾಂತಿ ಸಾಗರ ಈ ಗವಿಸಿದ್ಧೇಶ್ವರ ಮಹಾಜಾತ್ರೆ
Related Stories
Recommended image1
ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ಮಕ್ಕಳಿಂದ ದುಡುಕಿನ ನಿರ್ಧಾರ
Recommended image2
ಹುಬ್ಬಳ್ಳಿಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆ, ಹಾವೇರಿ ಮಹಿಳೆಯ ಅತ್ಯಾ*ಚಾರವೆಸಗಿ ವಿಡಿಯೋ ಹರಿಬಿಟ್ಟ ಯುವಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved