Asianet Suvarna News Asianet Suvarna News

ತುಮಕೂರಿಗೆ ಕಂಟಕವಾದ ಪಾದರಾಯನಪುರದ ಆಸಾಮಿ..!

ತುಮಕೂರಿನವರ ಪಾಲಿಗೆ ಪಾದರಾಯನಪುರದ ವ್ಯಕ್ತಿ ಕಂಟಕವಾಗಿ ಪರಿಣಮಿಸಿದ್ದಾನೆ. ಸ್ಥಳೀಯ ಮಾಹಿತಿಯ ಮೇರೆಗೆ ಆ ವ್ಯಕ್ತಿಯನ್ನು ಪತ್ತೆಹಚ್ಚಿ ತಪಾಸಣೆಗೆ ಒಳಪಡಿಸಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ.

ತುಮಕೂರು(ಮೇ.09): ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ತುಮಕೂರಿನ ಶಿರಾಗೆ ಪಾದಾರಾಯನಪುರದ ವ್ಯಕ್ತಿ ಎಸ್ಕೇಪ್ ಆಗಿದ್ದ, ಇದೀಗ ಆ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೇ.04ರ ರಾತ್ರಿ ಶಿರಾದ ಸಂಬಂಧಿಕರ ಮನೆಗೆ ಪಾದರಾಯನಪುರದ ವ್ಯಕ್ತಿ ಭೇಟಿ ನೀಡಿದ್ದ ಎನ್ನುವ ಆತಂಕಕಾರಿ ವಿಚಾರ ಬಯಲಾಗಿದೆ.

ಇದೀಗ ತುಮಕೂರಿನವರ ಪಾಲಿಗೆ ಪಾದರಾಯನಪುರದ ವ್ಯಕ್ತಿ ಕಂಟಕವಾಗಿ ಪರಿಣಮಿಸಿದ್ದಾನೆ. ಸ್ಥಳೀಯ ಮಾಹಿತಿಯ ಮೇರೆಗೆ ಆ ವ್ಯಕ್ತಿಯನ್ನು ಪತ್ತೆಹಚ್ಚಿ ತಪಾಸಣೆಗೆ ಒಳಪಡಿಸಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ..!

ಶಿರಾಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತತ್ತು. ಕೊರೋನಾ ಟೆಸ್ಟ್ ನಡೆಸಿದ ಬಳಿಕ ಆತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಕುರಿತಾದ ಮತ್ತಷ್ಟು ಡೀಟೈಲ್ಸ್ ಇಲ್ಲಿದೆ ನೋಡಿ.