Asianet Suvarna News Asianet Suvarna News

ರಾಜಧಾನಿಯಲ್ಲಿ ರೈತ ಕ್ರಾಂತಿ, ಖಾಕಿಪಡೆಯಿಂದ ಬಿಗಿ ಬಂದೋಬಸ್ತ್

ಮೆಜೆಸ್ಟಿಕ್ ಸುತ್ತಮುತ್ತ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ, ಮೌರ್ಯ ಸರ್ಕಲ್‌, ವಿಧಾನಸೌಧ, ರಾಜಭವನದ ಬಳಿ ಭಿಗಿ ಭದ್ರತೆ ಒದಗಿಸಲಾಗಿದೆ. 

ಬೆಂಗಳೂರು (ಜ. 26): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು , ವಿವಿಧ ಸಂಘ ಸಂಸ್ಥೆಗಳು ಇಂದು ಬೆಂಗಳೂರಿನಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದಾರೆ. ಹಸಿರು ಕ್ರಾಂತಿಗೆ ಸಾಕ್ಷಿಯಾಗಿದೆ ರಾಜಧಾನಿ. ಪ್ರತಿಭಟನೆಯ ಕಾವು ಈಗಾಗಲೇ ಶುರುವಾಗಿದೆ. 

'ಯಾರೇ ತಡೆದ್ರೂ ಫ್ರೀಡಂ ಪಾರ್ಕ್‌ಗೆ ಬಂದೇ ಬರುತ್ತೇವೆ, ಹೋರಾಟ ನಿಲ್ಲಿಸುವ ಮಾತೇ ಇಲ್ಲ'

ಮೆಜೆಸ್ಟಿಕ್ ಸುತ್ತಮುತ್ತ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ, ಮೌರ್ಯ ಸರ್ಕಲ್‌, ವಿಧಾನಸೌಧ, ರಾಜಭವನದ ಬಳಿ ಭಿಗಿ ಭದ್ರತೆ ಒದಗಿಸಲಾಗಿದೆ. ಎಲ್ಲಾ ವಾಹನಗಳನ್ನು ಪರಿಶೀಲಿಸಿದ ಬಳಿಕ ಬೆಂಗಳೂರು ಎಂಟ್ರಿಗೆ ಅನುಮತಿ ನೀಡಲಾಗುತ್ತಿದೆ. 

Video Top Stories