Asianet Suvarna News Asianet Suvarna News

ಜೂನ್ 7ರವರೆಗೆ ಯಾವುದೇ ಬದಲಾವಣೆ ಇಲ್ಲ, ಸಿಎಂ ಸಭೆ ಬಳಿಕ ನಿರ್ಧಾರ: ಬೊಮ್ಮಾಯಿ

- ಜೂನ್ 7 ರವರೆಗೆ ಯಾವುದೇ ಬದಲಾವಣೆ ಇಲ್ಲ, ಯಥಾಸ್ಥಿತಿ ಮುಂದುವರಿಕೆ

- ಜನರು ಸಹಕರಿಸಿ ಸೋಂಕು ತಗ್ಗಿದರೆ ಲಾಕ್‌ಡೌನ್ ಮುಂದುವರೆಸುವುದಿಲ್ಲ: ಬಿಎಸ್‌ವೈ

- 'ಪಾಸಿಟಿವಿಟಿ ದರ ಶೇ. 10 ಕ್ಕಿಂತ ಕಡಿಮೆಯಾದಲ್ಲಿ ಸಡಿಲಿಕೆ ಸಾಧ್ಯತೆ

ಬೆಂಗಳೂರು (ಮೇ. 30): ಜೂನ್ 7 ರವರೆಗೆ ಯಾವುದೇ ಬದಲಾವಣೆ ಇಲ್ಲ, ಯಥಾಸ್ಥಿತಿ ಮುಂದುವರೆಯುವುದು. ಲಾಕ್‌ಡೌನ್ ವಿಸ್ತರಣೆ ಮಾಡುವ ಬಗ್ಗೆ ಸಿಎಂ ಸಿಎಂ ನಿರ್ಧರಿಸುತ್ತಾರೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

18 ವರ್ಷದೊಳಗಿನ ಲಕ್ಷಾಂತರ ಮಕ್ಕಳಿಗೆ ಕೊರೋನಾ ಅಟ್ಯಾಕ್

'ಪಾಸಿಟಿವಿಟಿ ದರ ಶೇ. 10 ಕ್ಕಿಂತ ಕಡಿಮೆಯಾದಲ್ಲಿ ಜೂನ್ 7 ರ ಬಳಿಕ ಒಂದಿಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದೆ. ಇನ್ನು ಸೋಂಕು ಪ್ರಮಾಣ ಇಳಿಕೆಯಾದಲ್ಲಿ ಲಾಕ್‌ಡೌನ್ ಮುಂದುವರೆಸುವ ಪ್ರಶ್ನೆ ಉದ್ಭವಿಸುವುದಿಲ್ಲ' ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.