
ಹೊರ ಬಂದ ಪವಿತ್ರಾ ಗೌಡ, ವಿಜಯಲಕ್ಷ್ಮೀಗೆ ಆತಂಕ! ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ ‘ಪವಿತ್ರ’ ನಾರಿ?
ಜಾಮೀನು ಪಡೆದು ಹೊರಬಂದ ಎ-1 ಪವಿತ್ರಾ, ಎ-2 ದರ್ಶನ್. ಸುಬ್ಬಿಗೆ ಬಿಡುಗಡೆ ಭಾಗ್ಯ.. ಮತ್ತೆ ಸೇರುತ್ತಾ ಕೇ‘ಡಿ’ ಜೋಡಿ? 6 ತಿಂಗಳ ಬಳಿಕ ಬೇಲ್ ಪಡೆದು ಹೊರಬಂದ ಪವಿತ್ರಾ.
ರೆಗ್ಯೂಲರ್ ಬೇಲ್ ಮಂಜೂರಾದ ಮೇಲೆ ದರ್ಶನ್ ಇವತ್ತು ಕೋರ್ಟ್ಗೆ ಹಾಜರಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ್ದಾನೆ. ಅತ್ತ ಪವಿತ್ರಾ ಗೌಡ ಕೂಡ ಬೇಲ್ ಪಡೆದು ಮನೆಗೆ ಮರಳಿದ್ದಾಳೆ. ಹಾಗಾದ್ರೆ ಈ ಕೇಡಿ ಮತ್ತೆ ಒಂದಾಗುತ್ತಾ..? ಇಷ್ಟು ದಿನ ಪತ್ನಿ ಜೊತೆಗಿದ್ದ ದರ್ಶನ್ ಮತ್ತೆ ಸುಬ್ಬಿ ಹಿಂದೆ ಹೋಗ್ತಾನಾ..? ಈ ಪತಿ-ಪತ್ನಿ & ಪವಿತ್ರಾಳ ಟ್ರಯಾಂಗಲ್ ಕಹಾನಿಯಲ್ಲಿ ಮುಂದೇನಾಗಲಿದೆ? ಇದೀಗ ಈ ಪ್ರಕರಣದ ಕೇಂದ್ರಬಿಂದು ಪವಿತ್ರಾ ಗೌಡ ರಿಲೀಸ್ ಆಗಿದ್ದಾಳೆ. ದರ್ಶನ್ ಗೂ ರೆಗ್ಯೂಲರ್ ಬೇಲ್ ಸಿಕ್ಕಾಗಿದೆ. ಆದ್ರೆ ದರ್ಶನ್ ಕೇಸ್ನಲ್ಲಿ ಒಳಹೋದ ಮೇಲಿಂದ ಪತಿಯ ಬೆಂಬಲಕ್ಕೆ ನಿಂತುಕೊಂಡಿದ್ದು ವಿಜಯಲಕ್ಷ್ಮೀ ದರ್ಶನ್. ಬಹುಶಃ ಯಾವ ಪತ್ನಿಯೇ ಆದ್ರೂ ಪತಿ ಮಾಡಿದ ಕೆಲಸಕ್ಕೆ ಆತನನ್ನ ಕ್ಷಮಿಸ್ತಾ ಇರಲಿಲ್ಲ. ಆದ್ರೆ ವಿಜಯಲಕ್ಷ್ಮೀ ಮಾತ್ರ ಪತಿಯ ತಪ್ಪನ್ನ ಮನ್ನಿಸಿದ್ರು. ಜಾಮೀನು ಕೊಡಿಸೋದಕ್ಕೆ ವಕೀಲರ ಮನೆಗೆ ಅಲೆಯುತ್ತಾ ಶತಪ್ರಯತ್ನ ಮಾಡಿದ್ದರು.
Add Asianetnews Kannada as a Preferred Source

ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್