Asianet Suvarna News Asianet Suvarna News

ಶ್ರಾವಣದಲ್ಲಿ ಮಾರಿ ಹಬ್ಬ ಮಾಡುತ್ತೆ ಸ್ಯಾಂಡಲ್‌ವುಡ್‌: ಸಿಕ್ಕಿದೆ ಮಾರಿಗೆ ದಾರಿ..ಶೆಟ್ರ 'ಟೋಬಿ' ಭಾರೀ ಅದ್ಧೂರಿ!

ರಿವೀಲ್ ಆಯ್ತು ಟೋಬಿ ಹಿಂದಿನ ಮತ್ತೊಂದು ಸತ್ಯ.!
'ಟೋಬಿ' ಸ್ಟೋರಿಗೆ ಪವರ್ ಸ್ಟಾರ್ ಏನಂದಿದ್ರು ಗೊತ್ತಾ..?
ತ್ರಿಬಲ್ 'R' ಸೇರಿದ್ರೆ ಫುಲ್ ಟೈಟ್ ಆಗೋದು ಯಾರು..?

ಈಗ ಶ್ರಾವಣ ಮಾಸ. ಈ ಶ್ರಾವಣ ಮಾಸದಲ್ಲಿ ಯಾರಾದ್ರು ಮಾರಿ ಹಬ್ಬ ಮಾಡೋಕೆ ಆಗುತ್ತಾ? ಕಂಡಿತ ಇಲ್ಲ. ಆದ್ರೆ ಸ್ಯಾಂಡಲ್‌ವುಡ್‌ (Sandalwood) ಬಿಗ್ ಸ್ಕ್ರೀನ್ ಮೇಲೆ ದೊಡ್ಡ ಮಾರಿ ಹಬ್ಬಕ್ಕೆ ದಾರಿ ಸಿಕ್ಕಿದೆ. ಅದೇ ಟೋಬಿ(Tobi) ಮಾರಿ ಹಬ್ಬ. ಇದೇ ಆಗಸ್ಟ್ 25ಕ್ಕೆ ವರಮಹಾಲಕ್ಷ್ಮಿ ಹಬ್ಬ. ಆ ದಿನ ಟೋಬಿ ಬೆಳ್ಳಿತೆರೆ ಮೇಲೆ ಎಂಟ್ರಿ ಕೊಡ್ತಿದೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಟೋಬಿಯ ಈ ಮಾರಿ ಹಬ್ಬಕ್ಕೆ ಅಪ್ಪು ಅಪ್ಪುಗೆ ಕೂಡ ಸಿಕ್ಕಿತ್ತು. ರಾಜ್ ಬಿ ಶೆಟ್ಟಿ(Raj B Shetty) ಇಂದು ಟೋಬಿಯಾಗಿ ಸಿನಿ ಪ್ರೇಕ್ಷಕರ ಕಣ್ಣಲ್ಲಿ ಹೊಳೆಯುತ್ತಿದ್ದಾರೆ. ಟೋಬಿ ಟ್ರೈಲರ್, ಫಸ್ಟ್‌ಲುಕ್‌ ಸ್ಯಾಂಪಲ್ಸ್ ನೋಡಿ ನಮ್ ಮೊಟ್ಟೆ ಸ್ಟಾರ್ ಈ ಭಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ ಅಂತ ಸಿನಿಮಾ ರಿಲೀಸ್ ಆಗೋ ಮೊದಲೇ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಆದ್ರೆ ಟೋಬಿ ಸ್ಟೋರಿ ಹಿಂದಿನ ಮತ್ತೊಂದು ಸತ್ಯ ಈಗ ರಿವೀಲ್ ಆಗಿದೆ. ಅದೇನ್ ಗೊತ್ತಾ ? ಟೋಬಿ ಸ್ಟೋರಿ ರಾಜ್ ಬಿ ಶೆಟ್ಟಿಯ ಮನ ಮುಟ್ಟೋ ಮೊದಲು ದೊಡ್ಮನೆ ಹುಡುಗ ಅಪ್ಪು ಕೇಳಿದ್ರಂತೆ. ಟೋಬಿಯ ಮಾರಿ ಹಬ್ಬದ ಕತೆ ಕೆತ್ತಿದ್ದು ಫೇಮಸ್ ರೈಟರ್ ಟಿ.ಕೆ ದಯಾನಂದ್, ಈ ಸಿನಿಮಾದ ಕಥೆಯನ್ನು ಮೊದಲು ಹೇಳಿದ್ದೇ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ, ಆದ್ರೆ ಅಪ್ಪು ಇದು ತುಂಬಾ ಎಮೋಷಲಿ ಕಿತ್ತು ತಿನ್ನುವ ಕಥೆ ಎಂದಿದ್ದರಂತೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ನಾಗ ಚೌತಿ ಇದ್ದು, ಆಚರಣೆ ಮಾಡುವುದು ಹೇಗೆ ಗೊತ್ತಾ ?

Video Top Stories