Asianet Suvarna News Asianet Suvarna News

ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡ ರಾಘವೇಂದ್ರ ರಾಜ್‌ಕುಮಾರ್

* ಸ್ಯಾಂಡಲ್ ವುಡ್ ಗೆ ಪುನೀತ್  ನಿಧನದ ಆಘಾತ
* ತಮ್ಮನ ಕಳುಹಿಸಿಕೊಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ
* ಜನರ ಸಹಕಾರ ಕೇಳಿಕೊಂಡ ರಾಘವೇಂದ್ರ

ಬೆಂಗಳೂರು( ಅ. 29) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ಅಗಲಿಕೆ ಕನ್ನಡ ಚಿತ್ರರಂಗಕ್ಕೆ (Sandalwood) ಬರಸಿಡಿಲು ಬಡಿದಂತೆ ಮಾಡಿದೆ.  ನೋವಿನ ನಡುವೆಯೂ ಸಹೋದರ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಮಾಧ್ಯಮಗಳ ಜತೆ ಮಾತನಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

ನನ್ನ ಮಕ್ಕಳನ್ನು ನೀನೇ  ನೋಡಿಕೋ ಎಂದು ಹೇಳಿದ ತಮ್ಮ ಹೊರನಡೆದಿದ್ದಾರೆ. ಈ ಸಂದರ್ಭದಲ್ಲಿ ನಮಗೆ  ನಿಮ್ಮೆಲ್ಲರ ಸಹಕಾರ ಬೇಕು ಎಂದು ಜನರ ಬಳಿ ಕೇಳಿಕೊಂಡರು. ಪುನೀತ್ ಅವರನ್ನು ಹೇಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿತ್ತೋ ಹಾಗೆ ಕಳುಹಿಸಿ ಕೊಡಬೇಕಿದೆ ಎಂದರು.