ಗುರು ಶಿಷ್ಯರು; ಹೀರೋ ಆಗಿ ಮಾತಾಡ್ಲೋ? ಅಪ್ಪನಾಗಿ ಮಾತಾಡ್ಲೋ?- ನಟ ಶರಣ್

ಹೀರೋ ಆಗಿ ಮಾತಾಡ್ಲೋ? ಅಪ್ಪನಾಗಿ ಮಾತಾಡ್ಲೋ ಎನ್ನುತ ಮಾತು ಪ್ರಾರಂಭಿಸಿದ ಶರಣ್, ಈ ಸಿನಿಮಾದಿಂದ ನನ್ನ ಮಗ ಒಬ್ಬ ಅದ್ಭುತ ನಟನಾದನೋ ಏನು ಗೊತ್ತಿಲ್ಲ ಆದರೆ ಒಬ್ಬ ಒಳ್ಳೆ ಮನುಷ್ಯನಾದ ಎಂದು ಹೇಳಿದರು.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನಲ್ಲಿ ಈಗ ಗುರುಶಿಷ್ಯರದ್ದೆ ಹವಾ. ಯಾರದು ಅದು ಅಂತೀರಾ ಗುರು ಶಿಷ್ಯರು ಸಿನಿಮಾದ ಬಗ್ಗೆ ಹೇಳುತ್ತಿರುವುದು. ಹೌದು, ಈ ಸಿನಿಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಈ ಬಾರಿ ಗುರು ಶಿಷ್ಯರಾಗಿ ತೆರೆಮೇಲೆ ಬರ್ತಿದ್ದಾರೆ ಕಾಮಿಡಿ ಅಧ್ಯಕ್ಷ ಶರಣ್. ಸದ್ಯ ಗುರು ಶಿಷ್ಯರು ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಬಿಡಗಡೆಯಾದ ಗುರುಶಿಷ್ಯರು ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಕಿಡ್ಸ್ ಕೂಡ ನಟಿಸಿದ್ದಾರೆ. ಶರಣ್ ಜೊತೆ ಪುತ್ರ, ನೆನಪಿರಲಿ ಪ್ರೇಮ್ ಪುತ್ರ, ರವಿಶಂಕರ್ ಪುತ್ರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖೋ ಖೋ ಆಟದ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ನಟ ಶರಣ್ ಮಗನ ಬಗ್ಗೆ ಮಾತನಾಡಿದ್ರು. ಹೀರೋ ಆಗಿ ಮಾತಾಡ್ಲೋ? ಅಪ್ಪನಾಗಿ ಮಾತಾಡ್ಲೋ ಎನ್ನುತ ಮಾತು ಪ್ರಾರಂಭಿಸಿದ ಶರಣ್, ಈ ಸಿನಿಮಾದಿಂದ ಮಗ ಒಬ್ಬ ನಟನಾದನೋ ಏನು ಗೊತ್ತಿಲ್ಲ ಆದರೆ ಒಬ್ಬ ಒಳ್ಳೆ ಮನುಷ್ಯನಾದ ಎಂದು ಹೇಳಿದರು. ಅವರಿಗೆ ಹೀರೋ ಆಗುವ ಆಸೆ ಇದೆ ಎಂದು ಮಕ್ಕಳ ಬಗ್ಗೆ ಹೇಳಿದ್ರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video