
ಹೀರೋ ಎಡವಟ್ಟು, ನಂದೇನಿದೆ ತಪ್ಪು? ದರ್ಶನ್ ಕಟ್ಟಾ ಅಭಿಮಾನಿ ಮೌನ ಗುಡ್ಡೆಮನೆ ಪ್ರಶ್ನೆ!
ಕುಲದಲ್ಲಿ ಕೀಳ್ಯಾವುದೋ ಸಿನಿಮಾ ನಟ ಮಾಡಬಾರದ್ದು ಮಾಡಿ ಜೈಲು ಸೇರಿದ ಆದ್ರೆ ಈ ಚಿತ್ರದ ಕಲಾವಿದರು, ತಂತ್ರಜ್ಞರು ಇದ್ರಿಂದ ನಾನಾ ತೊಂದರೆ ಅನುಭವಿಸಿದ್ರು.
ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂತು. ಆದ್ರೆ ಆ ಸಿನಿಮಾದ ನಾಯಕ ಮಡೆನೂರು ಮನು ಸಿನಿಮಾ ರಿಲೀಸ್ ಆಗೋ ಹಿಂದಿನ ದಿನ ಜೈಲು ಸೇರಿದ್ದ. ಮನು ಏನೋ ಮಾಡಬಾರದ್ದು ಮಾಡಿ ಜೈಲು ಸೇರಿದ ಆದ್ರೆ ಈ ಚಿತ್ರದ ಕಲಾವಿದರು, ತಂತ್ರಜ್ಞರು ಇದ್ರಿಂದ ನಾನಾ ತೊಂದರೆ ಅನುಭವಿಸಿದ್ರು. ಅದ್ರಲ್ಲೂ ಈ ಚಿತ್ರದಿಂದ ಬಿಗ್ ಸ್ಕ್ರೀನ್ನಲ್ಲಿ ಮಿಂಚಿ ಮಿನುಗ್ತಿನಿ ಅಂತ ಕನಸು ಕಂಡಿದ್ದ ನಾಯಕಿ ಮೌನ ಮೌನಕ್ಕೆ ಶರಣಾಗಿದ್ರು. ಇದೀಗ ವಾರದ ಬಳಿಕ ಮೌನ ಮಾತಾಗಿದ್ದಾರೆ.