Asianet Suvarna News Asianet Suvarna News

Duniya Vijay in Varanasi: ವಾರಣಾಸಿಯಲ್ಲಿ ಚಿತೆಗಳ ಮಧ್ಯೆ ನಿಂತ ನಟ ದುನಿಯಾ ವಿಜಯ್!

ಚಿತೆಗಳ ಮಧ್ಯೆ ನಿಂತ ನಟ ವಿಜಯ್ ಕುಮಾರ್..!
ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ವಿಜಯ್!
ಹರಿಶ್ಚಂದ್ರನಂತೆ ಚಿತೆಗಳ ರಾಣಿ ಮಧ್ಯೆ ಸಲಗ..!
 

ಸ್ಯಾಂಡಲ್‌ವುಡ್‌ನ ಸಲಗ ವಿಜಯ್ ಕುಮಾರ್ ಭೀಮ ಸಿನಿಮಾ(Bheema movie) ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ. ಆದ್ರೆ ಅದಕ್ಕೂ ಮೊದಲು ಸತ್ಯ ಸ್ಥಳಗಳಿಗೆ ಭೇಟಿ ಕೊಡುತ್ತಿರೋ ನಟ ವಿಜಯ್ ಕುಮಾರ್(Duniya Vijay) ಈಗ ವಾರಣಾಸಿಯಾ(Varanasi) ಮಣಿಕರ್ಣಿಕಾ ಘಾಟ್‌ನ(Manikarnika Ghat) ಚಿತಾಗಾರದಲ್ಲಿ ಹೆಣಗಳ ರಾಶಿ ಮಧ್ಯೆ ನಿಂತಿದ್ದಾರೆ. ವಿಜಯ್ ಕಾಳಿ ಭಕ್ತ. ತನ್ನ ಹುಟ್ಟುಹಬ್ಬದ ದಿನ ಸ್ಮಾಶಾಣಗಳಿಗೆ ಹೋಗಿ ಅಲ್ಲಿ ಒಂದಿಷ್ಟು ಸಮಯ ಕಳೆದು ಬರೋ ವಿಜಯ್ ಈಗ ವಾರಣಾಸಿಯಲ್ಲಿ ಮೃತದೇಹಗಳನ್ನ ಸುಡುವ ಮಣಿಕರ್ಣಿಕಾ ಘಾಟ್ನಲ್ಲಿ ಚಿತೆಗಳ ಮಧ್ಯೆ ನಿಂತು ಶಿವನಿಗೆ ನಮಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ವೀಕ್ಷಿಸಿ:  Yash: ದಿಢೀರ್ ಮಲೇಶಿಯಾ ಫ್ಲೈಟ್ ಹತ್ತಿದ ಯಶ್..! ನಟ ಒಂಟಿಯಾಗಿ ಹೋಗಿದ್ದೇಕೆ..?

Video Top Stories