
ಬೆನ್ನುನೋವು, ಹೀಟಿಂಗ್ ಬೆಲ್ಟ್, ದಾಸ ವಿಲವಿಲ; ಜೈಲಿನ ಕತ್ತಲ ಕೊಣೆಯಲ್ಲೇ ದಾಸನ ದೀಪಾವಳಿ
ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್, ಈ ಬಾರಿಯ ದೀಪಾವಳಿಯನ್ನು ಕತ್ತಲ ಕೋಣೆಯಲ್ಲೇ ಕಳೆಯುತ್ತಿದ್ದಾರೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಅವರಿಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪ್ರಕರಣದಿಂದಾಗಿ ಹಲವು ಕುಟುಂಬಗಳ ಹಬ್ಬದ ಸಂಭ್ರಮವೂ ಕಮರಿದೆ.
ದರ್ಶನ್ ಈ ಬಾರಿಯ ದೀಪಾವಳಿಯನ್ನ ಜೈಲಿನ ಕೋಣೆಯಲ್ಲೇ ಕಳೆಯಬೇಕಾಗಿ ಬಂದಿದೆ. ಬೆಳಕಿನ ಹಬ್ಬದಂದು ಕತ್ತಲ ಕೋಣೆಯಲ್ಲಿ ಕಳೆಯೋ ಪರಿಸ್ಥಿತಿ ದರ್ಶನ್ ಪಾಲಿಗೆ ಬಂದಿದೆ. ಬರೀ ದರ್ಶನ್ ಮಾತ್ರವಲ್ಲ, ರೇಣುಕಾಸ್ವಾಮಿ ಕೊ*ಲೆ ಕೇಸ್ನಲ್ಲಿ ಫಿಟ್ ಆಗಿರೋ ಇಡೀ ಡಿ ಗ್ಯಾಂಗ್ಗೆ ಜೈಲಿನಲ್ಲೇ ದೀಪಾವಳಿ.