ಬ್ಯಾಡ್ ಮ್ಯಾನರ್ಸ್ ರೆಬೆಲ್ ವಿಜಯ ಯಾತ್ರೆ: ಚಿತ್ರದುರ್ಗ ದಾವಣಗೆರೆ ಥಿಯೇಟರ್ ಅಭಿಷೇಕ್ ಭೇಟಿ
ಕಳೆದ ವಾರವಷ್ಟೇ ದುನಿಯಾ ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ನಟಿಸಿದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ನಡುವೆ ಸಿನಿಮಾ ಬಿಡುಗಡೆ ಬಳಿಕವೂ ರಾಜ್ಯದ ಮೂಲೆ ಮೂಲೆ ಸುತ್ತಾಟಕ್ಕಿಳಿದು ಸಿನಿಮಾ ಪ್ರಚಾರ ನಡೆಸುತ್ತಿದ್ದಾರೆ ಅಭಿಷೇಕ್.
ಕಳೆದ ವಾರವಷ್ಟೇ ದುನಿಯಾ ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ನಟಿಸಿದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ನಡುವೆ ಸಿನಿಮಾ ಬಿಡುಗಡೆ ಬಳಿಕವೂ ರಾಜ್ಯದ ಮೂಲೆ ಮೂಲೆ ಸುತ್ತಾಟಕ್ಕಿಳಿದು ಸಿನಿಮಾ ಪ್ರಚಾರ ನಡೆಸುತ್ತಿದ್ದಾರೆ ಅಭಿಷೇಕ್. ಇದೀಗ ಚಿತ್ರದುರ್ಗ, ದಾವಣಗೆರೆಯಲ್ಲಿ ಬ್ಯಾಡ್ ಮ್ಯಾನರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರಗಳಿಗೆ ಭೇಟಿ ನೀಡಿ, ಅಭಿಮಾನಿಗಳ ಜತೆಗೆ ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ. ಅಭಿಷೇಕ್ ಅಂಬರೀಷ್, ಸುಕ್ಕಾ ಸೂರಿ, ಸುಧೀರ್ ಕಾಂಬಿನೇಷನ್ ಈ ಸಿನಿಮಾದಲ್ಲಿ ಗೆದ್ದಿದೆ ಎಂದು ಹೇಳಬಹುದು. ಆಕ್ಷನ್ ಧಮಾಕಾ ಈ ಸಿನಿಮಾದಲ್ಲಿ ಸಖತ್ ಜೋರಾಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.