Asianet Suvarna News Asianet Suvarna News

Karnataka Politics: ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರಾ ಸುಮಲತಾ ? ಸಂಸದೆಗೆ ಮಂಡ್ಯ ಟಿಕೆಟ್ ಕೈತಪ್ಪುತ್ತಾ ?

ದೆಹಲಿಯಲ್ಲಿ ಜೋರಾಯ್ತು ‘ಮಂಡ್ಯ’ ರಾಜಕೀಯ!
ಸಂಸದೆ ಸುಮಲತಾಗೆ ಬಿಜೆಪಿ ಹೈಕಮಾಂಡ್ ಬುಲಾವ್
ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ನಡೆ

ನವದೆಹಲಿಯಲ್ಲಿ  ಮಂಡ್ಯ(Mandya) ರಾಜಕೀಯದ ಕಾವು ಜೋರಾಗಿದೆ. ಮಂಡ್ಯ ಗೌಡ್ತಿಗೆ ಲೋಕಸಭಾ(Loksabha) ಟಿಕೆಟ್ ಸಿಗುತ್ತಾ? ಸಿಗಲ್ವಾ? ಅನ್ನೊದು ಇನ್ನೂ ಖಾತ್ರಿಯಾಗಿಲ್ಲ. ಇದರ ನಡುವೆ  ಸಂಸದೆ ಸುಮಲತಾಗೆ(Sumalatha) ಬಿಜೆಪಿ ಹೈಕಮಾಂಡ್(BJP High Command) ಬುಲಾವ್ ನೀಡಿದೆ. ಮೂಲಕಗಳ ಪ್ರಕಾರ, ಸುಮಲತಾರನ್ನ ಚಿಕ್ಕಬಳ್ಳಾಪುರದಿಂದ(Chikkaballapur) ನಿಲ್ಲಿಸಲು ದೆಹಲಿ ನಾಯಕರು ಒಲುವು ತೋರಿಸಿದ್ದಾರೆ ಎನ್ನಲಾಗುತ್ತಿದೆ. ಇಂದು ಬಿಜೆಪಿ ವರಿಷ್ಠರ ಜೊತೆ ಸುಮಲತಾ ಚರ್ಚಿಸಲಿದ್ದಾರೆ. ಸುಮಲತಾ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ:  Prakash Raj on BJP: 420 ನಂಬರ್ ಇರೋರು 400 ಪ್ಲಸ್ ಬಗ್ಗೆ ಮಾತನಾಡ್ತಾರೆ, ಇದು ಅಹಂಕಾರ ತೋರಿಸುತ್ತೆ: ಪ್ರಕಾಶ್ ರಾಜ್

Video Top Stories