
ಕಾಂಗ್ರೆಸ್, ಜೆಡಿಎಸ್ನವರು ಲಿಂಗಾಯತರನ್ನ ಸಿಎಂ ಮಾಡ್ತಾರಾ? : ಸುಧಾಕರ್ ಪ್ರಶ್ನೆ
ಸಿದ್ದರಾಮಯ್ಯ ಹೇಳಿಕೆಗೆ ಸುಧಾಕರ್ ತಿರುಗೇಟು
ಲಿಂಗಾಯತರು ಸಿಎಂ ಆಗುವ ಪಕ್ಷ ಅಂದ್ರೆ ಬಿಜೆಪಿ
ಕಾಂಗ್ರೆಸ್ನಿಂದ ಲಿಂಗಾಯತ ಧರ್ಮ ಒಡೆಯುವ ಕೆಲಸ
ಲಿಂಗಾಯತ ಸಿಎಂಗಳು ಭ್ರಷ್ಟರು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ. ಲಿಂಗಾಯತರು ಸಿಎಂ ಆಗುವ ಅಂತಾ ಪಕ್ಷ ಇದ್ದರೇ ಅದು ಬಿಜೆಪಿ ಮಾತ್ರ. ಕಾಂಗ್ರೆಸ್ ಮತ್ತು ಜೆಡಿಎಸ್ನವರು ಲಿಂಗಾಯತರನ್ನು ಸಿಎಂ ಮಾಡ್ತಾರಾ ?. ಕಾಂಗ್ರೆಸ್ ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸ ಮಾಡಿತು. ವೀರೇಂದ್ರ ಪಾಟೀಲ್ರನ್ನು ಹೀನಾಯವಾಗಿ ನಡೆಸಿಕೊಂಡ್ರು. ಲಿಂಗಾಯತರು, ವೀರಶೈವರು ಬುದ್ಧಿವಂತರಿದ್ದಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹೇಳಿಕೆಗೆ ಸುಧಾಕರ್ ಟಾಂಗ್ ನೀಡಿದರು.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ದುರಹಂಕಾರಿ ಸಿದ್ದುಗೆ ಪಾಠ ಕಲಿಸುವ ಕೆಲಸ ಮಾಡಬೇಕು: ಪ್ರತಾಪ್ ಸಿಂಹ