Asianet Suvarna News Asianet Suvarna News

ಸಿದ್ದರಾಮಯ್ಯಗೆ ಚುನಾವಣಾ ಸೋಲಿನ ಭೀತಿ ಎದುರಾಗಿದೆ: ಬಿಎಸ್‌ವೈ

ಲಿಂಗಾಯತ ಚಕ್ರವ್ಯೂಹದಲ್ಲಿ ಸಿದ್ದರಾಮಯ್ಯ ಲಾಕ್‌
ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕೇಸರಿಕಲಿಗಳು
ಬಿಜೆಪಿ-ಕಾಂಗ್ರೆಸ್‌ ನಡುವೆ ಲಿಂಗಾಯತ ಸಿಎಂ ಭ್ರಷ್ಟ ಫೈಟ್‌

First Published Apr 24, 2023, 2:47 PM IST | Last Updated Apr 24, 2023, 2:47 PM IST

ಶಿವಮೊಗ್ಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ವಿಧಾನಸಭಾ ಚುನಾವಣೆಯಲ್ಲಿ ಸೋಲುವುದು ಗೊತ್ತಾಗಿದೆ. ಹಾಗಾಗಿ ಅವರು ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯರಿಗೆ ಇದು ಶೋಭೆ ತರುವಂತದಲ್ಲ. ಚುನಾವಣೆ ಬರುತ್ತದೆ, ಹೋಗುತ್ತದೆ. ಆದ್ರೆ ಅವರ ಮಾತನ್ನು ಯಾರೂ ಬೆಂಬಲಿಸುವುದಿಲ್ಲ.  ಅವರ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ರಾಜ್ಯಕ್ಕೆ ಮೋದಿ, ಅಮಿತ್‌ ಶಾ ಎಲ್ಲಾ ಬರುತ್ತಾರೆ. ಇಲ್ಲಿ ವಾತಾವರಣ ಚೆನ್ನಾಗಿದೆ. 130 ರಿಂದ 135 ಸೀಟ್‌ ಗೆದ್ದು, ನಾವು ಸರ್ಕಾರ ರಚನೆ ಮಾಡೋದು ನಿಶ್ಚಿತ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌, ಜೆಡಿಎಸ್‌ನವರು ಲಿಂಗಾಯತರನ್ನ ಸಿಎಂ ಮಾಡ್ತಾರಾ? : ಸುಧಾಕರ್‌ ಪ್ರಶ್ನೆ