Asianet Suvarna News Asianet Suvarna News

ಕಳೆದ 9 ವರ್ಷದಲ್ಲಿ ಒಂದು ದಿನವು ವಿರಮಿಸದೇ, ದೇಶಕ್ಕಾಗಿ ದುಡಿದ ನಾಯಕ ಮೋದಿ: ಸದಾನಂದ ಗೌಡ

ಕೋಲಾರದಲ್ಲಿ ಪ್ರಧಾನಿ ಮೋದಿಯಿಂದ ಪ್ರಚಾರ
ಶಾಲು ಹೊದಿಸಿ ಸನ್ಮಾನಿಸಿದ ಡಾ.ಕೆ. ಸುಧಾಕರ್‌
ಮೋದಿ ಹೆಗಲಿಗೆ ಕಂಬಳಿ ಹೊದಿಸಿದ ವರ್ತೂರು ಪ್ರಕಾಶ್‌

ಕೋಲಾರ: ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕೋಲಾರದ ಕೆಂದಟ್ಟಿಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ಕೋರಿದ್ದು, ಸಚಿವ ಡಾ.ಕೆ. ಸುಧಾಕರ್‌ ಶಾಲು ಹೊದಿಸಿ ಸನ್ಮಾನಿಸಿದ್ರು. ರೈತಾಪಿ ವರ್ಗವನ್ನು ದೂರದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಚಾರ ಮಾಡಲಾಗುತ್ತಿದೆ. ಈ ವೇಳೆ ಮಾತನಾಡಿದ ಸದಾನಂದ ಗೌಡ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೇರೆ ದೇಶಗಳು ನಮ್ಮ ದೇಶದತ್ತ ನೋಡುವಂತಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ಯಶಸ್ವಿಯಾಗಿ ಜಾರಿ ಮಾಡಿದೆ. ಕಳೆದ ಮೂರು ವರ್ಷದಲ್ಲಿ ದೂರದೃಷ್ಟಿಯ ಚಿಂತನೆ, ಸಮರ್ಪಕ ಯೋಜನೆ, ತೊರೆದ ಅನುಷ್ಠಾನ ಎಂಬ ಮೂರು ತತ್ವಗಳೊಂದಿಗೆ ಈ ರಾಜ್ಯ ಮತ್ತು ದೇಶದಲ್ಲಿ ಅಭಿವೃದ್ಧಿ ಯೋಜನೆಗಳನ್ನು ನಾವು ಖಂಡಿದ್ದೇವೆ. ಕೋವಿಡ್‌ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಇದಕ್ಕೆಲ್ಲಾ ಪರಿಹಾರ ಕಂಡುಹಿಡಿದಿರುವುದು ಬಿಜೆಪಿ ಸರ್ಕಾರ ಎಂದು ಸದಾನಂದ ಗೌಡ ಹೇಳಿದರು. 

ಇದನ್ನೂ ವೀಕ್ಷಿಸಿ: ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸಲು ತಂತ್ರಗಾರಿಕೆ: ಬೇಲೂರಿನಲ್ಲಿ ಮೋದಿ ಬಿರುಸಿನ ಪ್ರಚಾರ

Video Top Stories