Asianet Suvarna News Asianet Suvarna News

ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸಲು ತಂತ್ರಗಾರಿಕೆ: ಬೇಲೂರಿನಲ್ಲಿ ಮೋದಿ ಬಿರುಸಿನ ಪ್ರಚಾರ

ಬೇಲೂರಿನಲ್ಲಿ ಬಿರುಸಿನ ಪ್ರಚಾರ ಮಾಡಲಿರುವ ಪ್ರಧಾನಿ ಮೋದಿ
ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸುವ ತಂತ್ರಗಾರಿಕೆ
ಹಾಸನ ಜೊತೆ ಇತರ ಕ್ಷೇತ್ರಗಳಲ್ಲೂ ಕಮಲ ಅರಳಿಸುವ ಲೆಕ್ಕ

ಹಾಸನ: ಜೆಡಿಎಸ್‌ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರಗಾರಿಕೆ ಹೂಡಿದ್ದು, ಬೇಲೂರಿನಲ್ಲಿ ಪ್ರಧಾನಿ ಮೋದಿ ಬಿರುಸಿನ ಪ್ರಚಾರ ಮಾಡಲಿದ್ದಾರೆ.  ಹಾಸನದ 7 ಕ್ಷೇತ್ರಗಳಲ್ಲಿ, ಹಾಸನ ನಗರದಲ್ಲಿ ಮಾತ್ರ ಬಿಜೆಪಿ ಹಿಡಿತದಲ್ಲಿದೆ. ಹಾಗಾಗಿ ಇನ್ನುಳಿದ ಕ್ಷೇತ್ರಗಳಲ್ಲೂ ಬಿಜೆಪಿ ತರಲು ಪ್ರಧಾನಿ ಮೋದಿ ಇಂದು ಹಾಸನಕ್ಕೆ ಬರಲಿದ್ದಾರೆ. ಇಲ್ಲಿ ಅವರು ಒಕ್ಕಲಿಗ ಮೀಸಲಾತಿ, ಜೆಡಿಎಸ್‌ ಕುಟುಂಬ ರಾಜಕಾರಣದ ಅಸ್ತ್ರವನ್ನು ಪ್ರಯೋಗಿಸಲಿದ್ದಾರೆ.  ಉಳಿದ ಆರು ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಅವುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಹಾಗಾಗಿ ಇಂದು ಬೇಲೂರಿನಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ: ವರುಣ ಅಖಾಡಕ್ಕೆ ಸಿಎಂ ಬೊಮ್ಮಾಯಿ: ನಾಳೆ ಸೋಮಣ್ಣ ಪರ ಪ್ರಚಾರ

Video Top Stories