Asianet Suvarna News Asianet Suvarna News

ಕಾಂಗ್ರೆಸ್‌ನ ಉಚಿತ ಭಾಗ್ಯದಿಂದ ಪೇಚೆಗೆ ಸಿಲುಕಿದ ಚೆಸ್ಕಾಂ ಸಿಬ್ಬಂದಿ: ಬಿಲ್‌ ಕಟ್ಟಿ ಅಂದ್ರೆ ಟಿಕ್‌ ಟಾಕ್‌ ಮಾಡುತ್ತಿರುವ ಜನ !

ಕಾಂಗ್ರೆಸ್‌ ನೀಡಿರುವ ಉಚಿತ ಭಾಗ್ಯದಿಂದ ಇದೀಗ ಚೆಸ್ಕಾಂ ಸಿಬ್ಬಂದಿ ಪೇಚೆಗೆ ಸಿಲುಕಿದ್ದಾರೆ. ಬಿಲ್‌ ಕಟ್ಟಲು ಹೇಳಿದ್ರೆ, ಜನ ಟಿಕ್‌ ಟಾಕ್‌ ಮಾಡುತ್ತಿದ್ದಾರೆ.
 

ಮಂಡ್ಯ: ಕಾಂಗ್ರೆಸ್‌ನ ಉಚಿತ ಭಾಗ್ಯದಿಂದ ಚೆಸ್ಕಾಂ ಸಿಬ್ಬಂದಿ ಪೇಚೆಗೆ ಸಿಲುಕಿದ್ದಾರೆ. ಸಿಬ್ಬಂದಿ ಬಿಲ್ ಕಟ್ಟಿ ಎಂದು ಹೋದ್ರೆ, ಜನ ಟಿಕ್ ಟಾಕ್ ಮಾಡುತ್ತಿದ್ದಾರಂತೆ. ಸಿಎಂ ಸಿದ್ದರಾಮಯ್ಯ ಅವರ ಡೈಲಾಗ್‌ಗೆ ಟಿಕ್ ಟಾಕ್ ಮಾಡುತ್ತಿದ್ದಾರೆ. ಮಂಡ್ಯ ಕೆರಗೊಡಿನಲ್ಲಿ ಲೈಟ್ ಬಿಲ್ ಕೇಳಿದ್ರೆ, ವ್ಯಕ್ತಿಯೊಬ್ಬರು ಟಿಕ್ ಟಾಕ್ ಮಾಡಿದ್ದಾರೆ. ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಎಂದು ಸಿಎಂ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಆ ಡೈಲಾಗ್‌ ಹೇಳಿ ಟಿಕ್‌ ಟಾಕ್‌ ಮಾಡುತ್ತಿದ್ದಾರೆ. ಕೆರಗೊಡುಗೆ  ವಿದ್ಯುತ್ ಬಿಲ್ ವಸೂಲಿಗೆ ಸಿಬ್ಬಂದಿ ಹೋಗಿದ್ದರು. ಈ‌ ವೇಳೆ ಸಿದ್ದರಾಮಯ್ಯ ಡೈಲಾಗ್ ಹೊಡೆದ ವ್ಯಕ್ತಿ. ಬಳಿಕ ಈಗ ಕರೆಂಟ್ ಬಿಲ್ ಕಟ್ಟಣ್ಣ ಎಂದು ಚೆಸ್ಕಾಂ ಸಿಬ್ಬಂದಿ ಹೇಳಿದ್ದಾರೆ. ಅದಕ್ಕೆ ಕರೆಂಟ್ ಬಿಲ್‌ ಕೇಳಿದ್ರೆ, ನಿಮ್ಮನ್ನೆ ಕಟ್ಟಿ ಹಾಕುತ್ತೇವೆ ಎಂದು ವ್ಯಕ್ತಿ ಹೇಳಿದ್ದಾನೆ.

ಇದನ್ನೂ ವೀಕ್ಷಿಸಿ: ಪಡಿತರ ಕಾರ್ಡ್‌ಗೆ ಆಧಾರ್ ಲಿಂಕ್ ವದಂತಿ: ಸೈಬರ್ ಸೆಂಟರ್‌ಗಳ ಮುಂದೆ ಮಹಿಳೆಯರ ಕ್ಯೂ !

Video Top Stories