ಸಿಎಂ ಪುತ್ರನಿಗೆ ಎಂಎಲ್‌ಸಿ ಟಿಕೆಟ್ ಫಿಕ್ಸ್! ನಮ್ಮ ತಂದೆ ಬಳಿ ಹೇಳಿ ಅನುದಾನ ಕೊಡಿಸ್ತೀನಿ ಎಂದ ಯತೀಂದ್ರ!

ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಎಂಎಲ್‌ಸಿ ಟಿಕೆಟ್ ಪಕ್ಕಾ ಎನ್ನಲಾಗಿದೆ. ಯಾಕೆಂದರೆ, ನಾನು ಎಂಎಲ್​ಸಿ ಆಗ್ತೀನಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿ, ನಾನು ಎಂಎಲ್‌ಸಿ (MLC)ಯಾಗಿ ಅನುದಾನ ಹಾಕೊಡ್ತೀನಿ ಎಂದು ಪ್ರಚಾರದ ಸಂದರ್ಭದಲ್ಲಿ ತಿಳಿಸಿದ್ದಾರೆ.
 

First Published Jun 1, 2024, 1:07 PM IST | Last Updated Jun 1, 2024, 1:33 PM IST

ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ (Yatindra Siddaramaiah) ಎಂಎಲ್‌ಸಿ ಟಿಕೆಟ್(MLC ticket) ಫಿಕ್ಸ್ ಆಗಿದೆ. ಈ ಮೊದಲೇ ನಾನು ಎಂಎಲ್​ಸಿ ಆಗ್ತೀನಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿ, ನಾನು ಎಂಎಲ್‌ಸಿ (MLC) ಯಾಗಿ ಅನುದಾನ ಹಾಕೊಡ್ತೀನಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಎಂಎಲ್‌ಸಿ ಟಿಕೆಟ್ ಫಿಕ್ಸ್ ಆಗಿರೋದನ್ನ ಒಪ್ಪಿಕೊಂಡಿದ್ದಾರೆ. ನಮ್ಮ ತಂದೆ ಬಳಿ ಹೇಳಿ ಅವರಿಂದಲೂ ಅನುದಾನ ಕೊಡಿಸ್ತೀನಿ ಎಂದು ಟಿ.ನರಸೀಪುರದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
 
‘ಕೈ’ ಅಭ್ಯರ್ಥಿ ಮರಿತಿಬ್ಬೇಗೌಡ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಯತೀಂದ್ರ ಅವರು ಈ ಹೇಳಿಕೆ ನೀಡಿದ್ದರು. ಶಾಲೆಗೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಶಿಕ್ಷಕಿ ಮನವಿ ಮಾಡಿದ ನಂತರ ಈ ಹೇಳಿಕೆ ನೀಡಿದ್ದರು. ಈ ಮೂಲಕ ಮತ್ತೊಮ್ಮೆ ಸಿಎಂ ಮಗನಿಗೆ ಟಿಕೆಟ್‌ ಫಿಕ್ಸ್‌ ಅನ್ನೋದು ದೃಢವಾಗಿದೆ.

ಇದನ್ನೂ ವೀಕ್ಷಿಸಿ:  ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ: ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಗೊತ್ತಾ..?

Video Top Stories