
Mallikarjuna kharge: ಕಾಂಗ್ರೆಸ್ನಲ್ಲಿ ಕಲಬುರಗಿ ಅಭ್ಯರ್ಥಿ ಆಯ್ಕೆ ಕಸರತ್ತು: ಮತ್ತೆ ಖರ್ಗೆ ಸ್ಪರ್ಧೆಗೆ ಹೆಚ್ಚಿದ ಒಲವು!
ಕಲಬುರಗಿಯಿಂದ ಮತ್ತೆ ಖರ್ಗೆ ಸ್ಪರ್ಧೆಗೆ ಹೆಚ್ಚಿದ ಒಲವು
ಮಲ್ಲಿಕಾರ್ಜುನ ಖರ್ಗೆಯೇ ಕಲಬುರಗಿಯಿಂದ ಸ್ಪರ್ಧಿಸಲಿ
ಖರ್ಗೆ ಸ್ಪರ್ಧೆ ನಿರಾಕರಿಸಿದ್ರೆ ಅಳಿಯನಿಗೆ ಅವಕಾಶ ನೀಡಿ
ಕಾಂಗ್ರೆಸ್ ಪಾಳಯದಲ್ಲಿ ಕಲಬುರಗಿ(Kalaburagi) ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರೆದಿದೆ. ಬೆಂಗಳೂರಿನ(Bengaluru) ಖಾಸಗಿ ಹೋಟೆಲ್ನಲ್ಲಿ ಕಲಬುರಗಿ ಕಾಂಗ್ರೆಸ್(Congress) ನಾಯಕರ ಸಭೆ ನಡೆದಿದೆ. ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಖನಿಜಾ ಫಾತಿಮಾ, ಅಲ್ಲಮ ಪ್ರಭು ಪಾಟೀಲ್, ಶಾಸಕ ಅಜಯ್ ಸಿಂಗ್, ಎಂಎಲ್ಸಿ ತಿಪ್ಪಣ್ಣ ಕಮಕನೂರು ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ವಿಚಾರ ಭಾರೀ ಕುತೂಹಲವನ್ನುಮೂಡಿಸಿದೆ . ಕಲಬುರಗಿಯಿಂದ ಮತ್ತೆ ಖರ್ಗೆಯನ್ನೇ ಕಣಕ್ಕಿಳಿಸುವಂತೆ ಒತ್ತಡ ಹೆಚ್ಚಿದೆ. ಸಭೆಯಲ್ಲಿ ಖರ್ಗೆ ಪರ ಕೆಲ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: Loksabha: ಮಂಡ್ಯ ಲೋಕಸಭಾ ಕಾಂಗ್ರೆಸ್ ಟಿಕೆಟ್ ಸ್ಟಾರ್ ಚಂದ್ರುಗೆ ಪಕ್ಕನಾ ?