ಸುಮಲತಾಗೆ ಬಿಜೆಪಿ ಹೊಸ ಟಾಸ್ಕ್: ಬದ್ಧವೈರಿ ಸೋಲಿಸಲು ಟಾರ್ಗೆಟ್ ರೆಡಿ
ಬಿಜೆಪಿಗೆ ಬೆಂಬಲ ಸೂಚಿಸಿದ ಸುಮಲತಾಗೆ ಹೊಸ ಟಾಸ್ಕ್ ನೀಡಲಾಗಿದ್ದು, ಟಾರ್ಗೆಟ್ ಮಾಡಿ ಎಲೆಕ್ಷನ್ ಅಖಾಡಕ್ಕಿಳಿಯಲು ಸುಮಲತಾ ಸಿದ್ದವಾಗಿದ್ದಾರೆ.
ಬಿಜೆಪಿಗೆ ಬೆಂಬಲ ಸೂಚಿಸಿದ ಸುಮಲತಾಗೆ ಹೊಸ ಟಾಸ್ಕ್ ನೀಡಲಾಗಿದ್ದು, ಟಾರ್ಗೆಟ್ ಮಾಡಿ ಎಲೆಕ್ಷನ್ ಅಖಾಡಕ್ಕಿಳಿಯಲು ಸುಮಲತಾ ಸಿದ್ದವಾಗಿದ್ದಾರೆ. ಅವರ ರಾಜಕೀಯ ಬದ್ಧ ವೈರಿಯೇ ಫಸ್ಟ್ ಟಾರ್ಗೆಟ್ ಆಗಿದ್ದು, ರವೀಂದ್ರ ಶ್ರೀಕಂಠಯ್ಯನನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ. 2008 ರಲ್ಲಿ ಅಂಬರೀಶ್ ಸೋಲಿಸಿದ್ದ ಹಾಗೇ ಪದೇ ಪದೇ ಸುಮಲತಾ ವಿರುದ್ದ ವಾಗ್ದಾಳಿ ನಡೆಸ್ತಿದ್ದ ರವೀಂದ್ರನನ್ನು ಮಣಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.ರವೀಂದ್ರ ವಿರುದ್ದ ಆಪ್ತ ಇಂಡುವಾಳು ಸಚ್ಚಿದಾನಂದನನ್ನ ಕಣಕ್ಕಿಳಿಸಲು ಭರ್ಜರಿ ಸಿದ್ದತೆ ನಡೆದಿದ್ದು, ಶ್ರೀರಂಗಪಟ್ಟಣದಲ್ಲಿ ಸಚ್ಚಿದಾನಂದನನ್ನ ಗೆಲ್ಲಿಸುವ ಹೊಣೆ ಸುಮಲತಾ ಹೊಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಸುಮಲತಾ ಗ್ರೌಂಡ್ ವರ್ಕ್ ಮಾಡುತ್ತಿದ್ದಾರೆ.