ಧ್ರುವನಾರಾಯಣ ನಿಧನ, ನಂಜನಗೂಡು ಟಿಕೆಟ್ ಪುತ್ರನಿಗೆ ನೀಡುವಂತೆ ಒತ್ತಾಯ..!
ಆರ್.ಧ್ರುವನಾರಾಯಣ ನಿಧನದ ಬೆನ್ನೆಲೆ ಧ್ರುವನಾರಾಯಣ್ ಪುತ್ರ ದರ್ಶನ್ಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ನಂಜನಗೂಡಲ್ಲಿ ಧ್ರುವನಾರಾಯಣ್ ಬೆಂಬಲಿಗರು ಹೋರಾಟ ನಡೆಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನದ ಬೆನ್ನೆಲೆ ಧ್ರುವನಾರಾಯಣ್ ಪುತ್ರ ದರ್ಶನ್ಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ನಂಜನಗೂಡಲ್ಲಿ ಧ್ರುವನಾರಾಯಣ್ ಬೆಂಬಲಿಗರು ಹೋರಾಟ ನಡೆಸಿದ್ದು, ಶ್ರದ್ಧಾಂಜಲಿ ಹೆಸರಿನಲ್ಲಿ ಇಂದು ಧ್ರುವನಾರಾಯಣ ಸಭೆ ನಡೆಸಲಿದ್ದಾರೆ. ನಂಜನಗೂಡಿನ ನಂದಿ ಕನ್ವೆನ್ಷನ್ ಹಾಲ್ನಲ್ಲಿ ಮೀಟಿಂಗ್ ಮಾಡಲಿದ್ದಾರೆ. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರು ,ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇನ್ನು ವರಿಷ್ಟರ ಮೇಲೆ ಮತ್ತಷ್ಟು ಒತ್ತಡ ಹೇರುವ ತಂತ್ರ ಹೂಡಿರುವ ಮೂಲ ಕಾಂಗ್ರೆಸಿಗರು, ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ದ್ರವ ಕುಟುಂಬಕ್ಕೆ ಅನ್ಯಾಯ ಮಾಡಲ್ಲ ಎಂದಿದ್ದಾರೆ ಡಿ.ಕೆ ಶಿವಕುಮಾರ್. ಹಾಗೆ ದರ್ಶನ್ಗೆ ಕರೆಮಾಡಿ ಬಯೋಡೇಟಾವನ್ನು ಮಲ್ಲಿಕಾರ್ಜುನ ಖರ್ಗೆ ಪಡೆದಿದ್ದಾರೆ.