Asianet Suvarna News Asianet Suvarna News

ವರುಣಾ- ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ತಾರಾ, ಸೋಲ್ತಾರಾ? ಸ್ಪೆಷಲ್‌ ಟಾಸ್ಕ್‌ ಸೀಕ್ರೆಟ್‌ ಹೀಗಿದೆ..

ಅಶೋಕ್, ಸೋಮಣ್ಣ ಇಬ್ಬರ ಸಮುದಾಯ ಶಕ್ತಿ ತಿಳಿಯಲು ಈ ಟಾಸ್ಕ್ ಕೊಟಿದೆಯಾ..? ಕನಕಪುರ ಮತ್ತು ವರುಣಾದಲ್ಲಿ ಫಲಿತಾಂಶ ಪಡೆಯುವುದು ಅಷ್ಟು ಸುಲಭವಿಲ್ಲ ಅನ್ನೋದು ಬಿಜೆಪಿಗೆ ಗೊತ್ತಿದ್ರೂ ಸಹ ಬಿಜೆಪಿ ಇಂತಹದ್ದೊಂದು ತೀರ್ಮಾನ ತೆಗೆದುಕೊಂಡಿದ್ದು ಏಕೆ ಅನ್ನೋ ಪ್ರಶ್ನೆ ಮೂಡುತ್ತೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

First Published Apr 13, 2023, 11:42 AM IST | Last Updated Apr 13, 2023, 11:42 AM IST

ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಚುನಾವಣೆಯ ಕಾವು ಹೆಚ್ಚಾಗ್ತಿದೆ. ಈ ನಡುವೆ, ಇತ್ತೀಚೆಗೆ ಬಿಡುಗಡೆಯಾದ ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಚ್ಚೇನೂ ಅಲ್ಲದಿದ್ದರೂ ಕೆಲ ಅಚ್ಚರಿಗಳನ್ನು ನೋಡಬಹುದು. ಈ ಪೈಕಿ, ಅಶೋಕ್.. ಸೋಮಣ್ಣಗೆ 2 ಕ್ಷೇತ್ರ ಕೊಟ್ಟಿರುವುದು. ಅದರಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಸ್ಪರ್ಧೆ ಮಾಡಬೇಕಿರುವುದು ವಿಶೇಷ. ಅಶೋಕ್, ಸೋಮಣ್ಣ ಇಬ್ಬರು ಪ್ರಬಲ ಸಮುದಾಯದ ನಾಯಕರು. ಇಬ್ಬರ ಸಮುದಾಯ ಶಕ್ತಿ ತಿಳಿಯಲು ಈ ಟಾಸ್ಕ್ ಕೊಟಿದೆಯಾ..? ಕನಕಪುರ ಮತ್ತು ವರುಣಾದಲ್ಲಿ ಫಲಿತಾಂಶ ಪಡೆಯುವುದು ಅಷ್ಟು ಸುಲಭವಿಲ್ಲ ಅನ್ನೋದು ಬಿಜೆಪಿಗೆ ಗೊತ್ತಿದ್ರೂ ಸಹ ಬಿಜೆಪಿ ಇಂತಹದ್ದೊಂದು ತೀರ್ಮಾನ ತೆಗೆದುಕೊಂಡಿದ್ದು ಏಕೆ ಅನ್ನೋ ಪ್ರಶ್ನೆ ಮೂಡುತ್ತೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.