ಮೈಸೂರು ಹುಲಿಗೆ ಮಣ್ಣು ತಿನ್ನಿಸದೇ ಬಿಡೋದಿಲ್ಲ: ಸಿದ್ದರಾಮಯ್ಯ ವಿರುದ್ಧ ವರ್ತೂರ್ ಪ್ರಕಾಶ್ ಗುಡುಗು

ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡಿದ್ದು, ಈ ಕುರಿತು ವರ್ತೂರ್‌ ಪ್ರಕಾಶ್‌ ವಾಗ್ದಾಳಿ ನಡೆಸಿದ್ದಾರೆ.
 

Share this Video
  • FB
  • Linkdin
  • Whatsapp

ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲೇ ವರ್ತೂರ್‌ ಪ್ರಕಾಶ್‌ ವಾಗ್ದಾಳಿ ನಡೆಸಿದ್ದು, ಅವನಿಗೆ ಗೂಟದ ಕಾರಿನ ಮೇಲೆ ಆಸೆಯಾಗಿದೆ. ಐದು ವರ್ಷ ಸಿಎಂ ಆಗಿ ಮಜಾ ಮಾಡಿದ್ದಾನೆ ಎಂದು ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ಒಬ್ಬ ಕುತಂತ್ರಿ, ಸ್ವಜಾತಿ ವಿರುದ್ಧವೇ ಸ್ಪರ್ಧೆ ಮಾಡುತ್ತಿದ್ದಾನೆ. ಮುಸ್ಲಿಂ ಮತ್ತು ಎಸ್.ಸಿ ಸಮುದಾಯ ಹೆಚ್ಚಾಗಿದೆ ಎಂದು ಇಲ್ಲಿಗೆ ಬಂದಿದ್ದಾನೆ. ಮೈಸೂರು ಹುಲಿಗೆ ನಾನು ಹುಲ್ಲು ಮಣ್ಣು ತಿನ್ನಿಸದೇ ಬಿಡೋದಿಲ್ಲ ಎಂದರು. ಸಿಎಂ ಬೊಮ್ಮಾಯಿಗೆ ನಾನು ಎಂತಹ ಹುಲಿ ಅಂತ ಗೊತ್ತು, ನನ್ನ ವಿರುದ್ಧ ಸ್ಪರ್ಧೆ ಮಾಡೋದು ತಪ್ಪು ಎಂದು ವರ್ತೂರ್ ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಸಿದ್ದು ಕೋಲಾರ ಸ್ಪರ್ಧೆಯ ಲೆಕ್ಕಾಚಾರ ಏನು?: ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಪೆಟ್ಟು?

Related Video